Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರೋತ್ಸವದಲ್ಲಿ ರಾಜಮಾರ್ಗದ ಅನಾವರಣ
ಬರುವ ಅಕ್ಟೋಬರ್ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಮುಖ್ಯ ಆಕರ್ಷಣೆ ಡಾ.ರಾಜ್ಕುಮಾರ್. ಉತ್ಸವ ಉದ್ಘಾಟಿಸಲು ನೀಡಿರುವ ಬುಲಾವಿಗೆ ಅವರು ಇನ್ನೂ ಉತ್ತರ ಕೊಟ್ಟಿಲ್ಲ. ಉತ್ಸವ ಉದ್ಘಾಟಿಸಲಿ ಬಿಡಲಿ, ಚಲಚ್ಚಿತ್ರೋತ್ಸವದಲ್ಲಿ ಅವರ ಹೆಸರು ಮೊಳಗುವುದು ಖರೆ. ಯಾಕೆಂದರೆ, ಎಸ್.ಕೆ.ಭಗವಾನ್ ನಿರ್ಮಿಸಿ, ನಿರ್ದೇಶಿಸಿರುವ ಅಣ್ಣಾವ್ರ ಕುರಿತಾದ ಇಂಗ್ಲಿಷ್ ಸಾಕ್ಷ್ಯಚಿತ್ರ ಉತ್ಸವದಲ್ಲಿ ಪ್ರದರ್ಶಿತವಾಗಲಿದೆ.
ಅಣ್ಣಾವ್ರ ನಿಕಟವರ್ತಿಗಳಲ್ಲಿ ಒಬ್ಬರಾದ, ಅನೇಕ ಮೈಲುಗಲ್ಲು ಚಿತ್ರಗಳನ್ನು ಕೊಟ್ಟ ಎಸ್.ಕೆ.ಭಗವಾನ್ ಕಳೆದ ವರ್ಷವೇ ಈ ಸಾಕ್ಷ್ಯಚಿತ್ರ ಶೂಟ್ ಮಾಡಿಕೊಂಡಿದ್ದರು. ಅಣ್ಣಾವ್ರ ಹುಟ್ಟು, ಬಾಲ್ಯ, ರಂಗ ಜೀವನದಿಂದ ಹಿಡಿದು ಸಿನಿಮಾ ಪ್ರವೇಶ, ಅಲ್ಲಿ ಉತ್ತುಂಗಕ್ಕೆ ಏರಿ ಅನನ್ಯರಾದ ವಿವರಗಳನ್ನು ಪುಂಖಾನುಪುಂಖ ರೀಲಿಗೆ ತುಂಬಿಸಿದ್ದಾರೆ ಭಗವಾನ್. ಆಂಗ್ಲ ಪತ್ರಿಕೆಯಾಂದು ಈ ವಿಷಯವನ್ನು ಹೆಕ್ಕಿ ತೆಗೆದಿದೆ.
ಭಗವಾನ್ ಬಹು ದಿನಗಳ ಬಯಕೆ ಇದಾಗಿತ್ತಂತೆ. ರಾಜ್ ಮನೆ ಸದಸ್ಯರ ಸ್ಥಾನ ಗಿಟ್ಟಿಸಿಕೊಂಡವರ ಪೈಕಿ ಭಗವಾನ್ ಕೂಡ ಒಬ್ಬರು. ಕಾರ್ಯಕಾರಿ ನಿರ್ಮಾಪಕ ಎಂ.ಡಿ.ಕೌಶಿಕ್ ಅಣ್ಣಾವ್ರ ಸಾಕ್ಷ್ಯ ಚಿತ್ರ ತೆಗೆಯಲು ಕುಮ್ಮಕ್ಕು ಕೊಟ್ಟರು. ಕಳೆದ ವರ್ಷವೇ ಮುಗಿದ ಕೆಲಸಕ್ಕೆ ಈಗ ಅರ್ಥ ಸಿಗಲಿದೆ.
ಭಗವಾನ್ ಹೇಳುವಂತೆ.... ಅಂತರರಾಷ್ಟ್ರೀಯ ಚಲಚ್ಚಿತ್ರೋತ್ಸವದಲ್ಲಿ ಹಿಂದೆಂದೂ ಸಾಕ್ಷ್ಯಚಿತ್ರ ಪ್ರದರ್ಶಿಸುವ ಅವಕಾಶ ಕರ್ನಾಟಕಕ್ಕೆ ಸಿಕ್ಕಿರಲಿಲ್ಲ. ಜೊತೆಗೆ ಬೆಂಗಳೂರಿನ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಲಿರುವ ಏಕೈಕ ಸಾಕ್ಷ್ಯಚಿತ್ರ ಇದು. ಈ ಸಾಕ್ಷ್ಯಚಿತ್ರ ಅಣ್ಣಾವ್ರ ಹಾಗೂ ಅವರ ಚಿತ್ರಗಳ ಬಗ್ಗೆ ಇಂಚಿಂಚೂ ಮಾಹಿತಿ ಕೊಡಲಿದೆ. ಅವರು ನಟಿಸಿರುವ 200ಕ್ಕೂ ಹೆಚ್ಚು ಚಿತ್ರಗಳ ಪೈಕಿ 100 ಚಿತ್ರಗಳನ್ನು ಮತ್ತೆ ಮತ್ತೆ ನೋಡಿ, ಇದನ್ನು ಸಿದ್ಧಪಡಿಸಿದೆ. ಸಾಕ್ಷ್ಯಚಿತ್ರ ತೆಗೆಯುವ ಇಂಗಿತವನ್ನು ಅಣ್ಣಾವ್ರ ಹತ್ತಿರ ಹೇಳಿದಾಗ, ಅವರು ತಮ್ಮ ಬಗ್ಗೆ ತಾವೇ ಹೇಳಿಕೊಳ್ಳಲು ನಿರಾಕರಿಸಿದರು. ಅದು ಅವರ ದೊಡ್ಡ ಗುಣ.
ಹಲವರು ಕಂಡಂತೆ ರಾಜ್ : ಸಾಕ್ಷ್ಯಚಿತ್ರದಲ್ಲಿ ಕೇವಲ ಕಾಮೆಂಟ್ರಿಯಷ್ಟೇ ಅಲ್ಲ. ರಾಜ್ ತಂದೆ- ತಾಯಿ ಬಾಳಿದ ಊರು, ಗಾಜನೂರಿನಲ್ಲಿ ಅಣ್ಣಾವ್ರನ್ನು ಕಂಡ ಜೀವಗಳ ಮಾತುಗಳು, ಅಕ್ಕಿನೇನಿ ನಾಗೇಶ್ವರ ರಾವ್ ಹಾಗೂ ಇತ್ತೀಚೆಗಷ್ಟೇ ತೀರಿಹೋದ ಶಿವಾಜಿ ಗಣೇಶನ್ ಅವರು ಕಂಡಂತೆ ರಾಜ್, ಅಣ್ಣಾವ್ರ ಹೆಂಡತಿ- ಮಕ್ಕಳ ಅನುಭವದ ತುಣುಕುಗಳು... ಇನ್ನೂ ಹಲವಾರು ಮಾಹಿತಿಗಳು ಸಾಕ್ಷ್ಯಚಿತ್ರದಲ್ಲಿ ಅನಾವರಣಗೊಳ್ಳಲಿವೆ.
ಅಂದಹಾಗೆ, ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಬೇಡಿ. ಸಾಕ್ಷ್ಯಚಿತ್ರದಲ್ಲಿ ರಾಜ್ ಅಪಹರಣದ ಬಗ್ಗೆ ಒಂದು ಮಾತೂ ಇಲ್ಲ !