Don't Miss!
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
25 ವರ್ಷಗಳ ನಂತರ ಎತ್ತಿನಗಾಡಿ ಓಡಿಸಿ ಸಂತಸಪಟ್ಟ ಗುರುದೇಶಪಾಂಡೆ
ಹಳ್ಳಿಯಿಂದ ನಗರಕ್ಕೆ ಬಂದಮೇಲೆ ಅದೇಷ್ಟೋ ಒಳ್ಳೆಯ ಅನುಭವಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ. ಎತ್ತಿಗಾಡಿ, ಟಿವಿಎಸ್ ಬೈಕ್, ಸೈಕಲ್ ಸವಾರಿ ಹೀಗೆ ಎಲ್ಲವನ್ನು ಕಳೆದುಕೊಳ್ಳುವ ಜನರು ಬಸ್, ಕಾರು, ಆಟೋದಲ್ಲಿ ಓಡಾಡುತ್ತಾರೆ.
ಮತ್ತೆ ಹಳ್ಳಿಯ ಜೀವನಕ್ಕೆ ಹಿಂತಿರುಗಿದ ಆ ಸಂತೋಷವೇ ಬೇರೆ. ಅದನ್ನು ಬರಿ ಮಾತನಲ್ಲಿ ಹೇಳಲು ಸಾಧ್ಯವಾಗಲ್ಲ. ಅದನ್ನು ಅನುಭವಿಸಬೇಕು. ಇದೀಗ, ಕನ್ನಡದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾದ ಗುರುದೇಶಪಾಂಡೆ ಸುಮಾರು 25 ವರ್ಷದ ನಂತರ ಎತ್ತಿನಗಾಡಿ ಸವಾರಿ ಮಾಡಿದ್ದಾರೆ.
ರೈತನಾಗಿ ಟ್ರ್ಯಾಕ್ಟರ್ ಚಾಲನೆ ಮಾಡಿದ ನಿರ್ದೇಶಕ ಪವನ್ ಒಡೆಯರ್
ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ನಿರ್ದೇಶಕರು ಸಂತಸ ವ್ಯಕ್ತಪಡಿಸಿದ್ದಾರೆ. ''ಸಿಟಿಯಲ್ಲಿ ಟ್ರಾಫಿಕ್ ಪೊಲ್ಲ್ಯೂಷನ್ ಬೈಕ್ ಕಾರ್ ಗಳ ನಡುವೆ ನಮ್ಮ ಎತ್ತಿನಗಾಡಿ ಓಡಿಸುವ ಮಜಾನೇ ಬೇರೆ. 25 ವರ್ಷಗಳ ಹಿಂದೆ ನಾನು ಊರಿಂದ ಬೆಂಗಳೂರಿಗೆ ಬಂದ ನಂತರ ನಮ್ಮ ಊರು ಎತ್ತಿನಗಾಡಿ ಎತ್ತು ಕರು ಪ್ರತಿಯೊಂದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. 25 ವರ್ಷಗಳ ನಂತರ ಎತ್ತಿನ ಗಾಡಿ ಓಡಿಸಿದ ಅನುಭವವಂತೂ ಅದ್ಭುತ ಪದಗಳಲ್ಲಿ ವರ್ಣಿಸಲು ಆಗದು'' ಎಂದು ಪೋಸ್ಟ್ ಹಾಕಿದ್ದಾರೆ.
ಇತ್ತೀಚಿಗಷ್ಟೆ ನಿರ್ದೇಶಕ ಪವನ್ ಒಡೆಯರ್ ತಮ್ಮ ತೋಟದಲ್ಲಿ ಟ್ರ್ಯಾಕ್ಟರ್ ಓಡಿಸಿದ್ದರು. ಆ ವಿಡಿಯೋವನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. ಹಳ್ಳಿ ಜೀವನ ಮಿಸ್ ಮಾಡಿಕೊಳ್ಳುವವ ಜನರಿಗೆ ಇದೆಲ್ಲ ಬಹಳ ಖುಷಿ ಕೊಡುತ್ತದೆ.
ಸಿಟಿಯಲ್ಲಿ ಟ್ರಾಫಿಕ್ ಪೊಲ್ಲ್ಯೂಷನ್ ಬೈಕ್ ಕಾರ್ ಗಳ ನಡುವೆ ನಮ್ಮ ಎತ್ತಿನಗಾಡಿ ಓಡಿಸುವ ಮಜಾನೇ ಬೇರೆ 25 ವರ್ಷಗಳ ಹಿಂದೆ ನಾನು ಊರಿಂದ ಬೆಂಗಳೂರಿಗೆ ಬಂದ ನಂತರ ನಮ್ಮ ಊರು ಎತ್ತಿನಗಾಡಿ ಎತ್ತು ಕರು ಪ್ರತಿಯೊಂದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ 25 ವರ್ಷಗಳ ನಂತರ ಎತ್ತಿನ ಗಾಡಿ ಓಡಿಸಿದ ಅನುಭವವಂತೂ ಅದ್ಭುತ ಪದಗಳಲ್ಲಿ ವರ್ಣಿಸಲು ಆಗದು pic.twitter.com/VwDkOfmrCr
— Guru Deshpande (@deshpandeguru1) October 11, 2020
Recommended Video
ಅಂದ್ಹಾಗೆ, ರಾಜಾಹುಲಿ, ಪಡ್ಡೆಹುಲಿ ಅಂತಹ ಚಿತ್ರಗಳನ್ನಿ ನಿರ್ದೇಶಿಸಿದ್ದ ಗುರುದೇಶಪಾಂಡೆ ಕೊನೆಯದಾಗಿ ಪ್ರಜ್ವಲ್ ದೇವರಾಜ್ ನಟನೆಯ 'ಜಂಟಲ್ಮ್ಯಾನ್' ಚಿತ್ರವನ್ನು ನಿರ್ಮಿಸಿದ್ದರು.