Don't Miss!
- Finance ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳ ಪರೀಕ್ಷೆಗೆ ಮುಂದಾದ FSSAI
- News ಮತದಾನದ ದಿನ ಬೆಳಗ್ಗೆ ಸಿಗಲ್ಲ ಬಾಡಿಗೆ ವಾಹನಗಳು!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫಿಲ್ಮ್ಫೇರ್ ಅವಾರ್ಡ್ಸ್ಗೆ ಇನ್ನೊಂದು ದಿನ ಬಾಕಿ; ನಾಮಿನೇಟ್ ಆದ ಕನ್ನಡ ಚಿತ್ರ, ನಟ-ನಟಿಯರ ಪಟ್ಟಿ
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ಕಾರ್ಯಕ್ರಮ ಜರುಗಿತ್ತು. ಹೀಗೆ ಈ ಬೃಹತ್ ಅವಾರ್ಡ್ಸ್ ಫಂಕ್ಷನ್ ಬೆಂಗಳೂರಿನಲ್ಲಿ ನಡೆದ ಬೆನ್ನಲ್ಲೇ ಇದೀಗ ಮತ್ತೊಂದು ಖ್ಯಾತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಮ್ಮ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. ಹೌದು, ಫಿಲ್ಮ್ ಫೇರ್ ಸೌತ್ ಅವಾರ್ಡ್ಸ್ ಕಾರ್ಯಕ್ರಮ ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಅಂತರರಾಷ್ಟ್ರೀಯ ಎಕ್ಸಿಬಿಷನ್ ಕೇಂದ್ರದಲ್ಲಿ ಜರುಗಲಿದೆ.
ಈ 67ನೇ ಫಿಲ್ಮ್ ಫೇರ್ ಸೌತ್ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಾಳೆ ( ಅಕ್ಟೋಬರ್ 9 ) ಸಂಜೆ ನಡೆಯಲಿದ್ದು, 2020 ಮತ್ತು 2021ರಲ್ಲಿ ತೆರೆಕಂಡ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳ ವಿವಿಧ ವಿಭಾಗಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಕನ್ನಡದ ಪೈಕಿ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್, ಧನಂಜಯ್ ಅಭಿನಯದ ರತ್ನನ್ ಪ್ರಪಂಚ, ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭವಾಹನ, ವಿಜಯ್ ಕುಮಾರ್ ನಿರ್ದೇಶನದ ಸಲಗ ಹಾಗೂ ದರ್ಶನ್ ಅಭಿನಯದ ರಾಬರ್ಟ್ ಸೇರಿದಂತೆ ಇನ್ನೂ ಮುಂತಾದ ಚಿತ್ರಗಳು ವಿವಿಧ ವಿಭಾಗಗಳಲ್ಲಿ ನಾಮಿನೇಟ್ ಆಗಿವೆ. ಹಾಗಿದ್ದರೆ ಕನ್ನಡದ ಯಾವ ಚಿತ್ರಗಳು ಮತ್ತು ಯಾವ ಕಲಾವಿದರು ಪ್ರಶಸ್ತಿಗಳಿಗಾಗಿ ನಾಮನಿರ್ದೇಶನಗೊಂಡಿದ್ದಾರೆ ಎಂಬುದರ ಕುರಿತಾದ ಸಂಪೂರ್ಣ ವಿವರ ಕೆಳಕಂಡಂತಿದೆ ಓದಿ.
ಅತ್ಯುತ್ತಮ ಚಿತ್ರ, ನಟ ಮತ್ತು ನಟಿ ನಾಮನಿರ್ದೇಶನಗಳು
ಚಿತ್ರ: ಆಕ್ಟ್ 1978, ದಿಯಾ, ಗರುಡ ಗಮನ ವೃಷಭ ವಾಹನ, ಶಿವಾಜಿ ಸುರತ್ಕಲ್, ಬಡವ ರಾಸ್ಕಲ್ ಮತ್ತು ಸಲಗ
ನಟ: ಧನಂಜಯ್ (ಬಡವ ರಾಸ್ಕಲ್), ರಮೇಶ್ ಅರವಿಂದ್ (ಶಿವಾಜಿ ಸುರತ್ಕಲ್), ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ), ರಿಷಭ್ ಶೆಟ್ಟಿ (ಗರುಡ ಗಮನ ವೃಷಭ ವಾಹನ), ಕೃಷ್ಣ (ಲವ್ ಮಾಕ್ಟೇಲ್), ಪ್ರಜ್ವಲ್ ದೇವರಾಜ್ (ಜಂಟಲ್ ಮನ್) ಮತ್ತು ದರ್ಶನ್ (ರಾಬರ್ಟ್)
ನಟಿ: ಯಜ್ಞ ಶೆಟ್ಟಿ (ಆಕ್ಟ್ 1978), ಮಿಲನಾ ನಾಗರಾಜ್ (ಲವ್ ಮಾಕ್ಟೇಲ್), ಖುಷಿ ರವಿ (ದಿಯಾ), ಅಮೃತ ಅಯ್ಯಂಗಾರ್ (ಬಡವ ರಾಸ್ಕಲ್), ಆಶಾ ಭಟ್ (ರಾಬರ್ಟ್), ರೆಬಾ ಮೋನಿಕಾ ಜಾನ್ (ರತ್ನನ್ ಪ್ರಪಂಚ) ಮತ್ತು ಆರೋಹಿ ನಾರಾಯಣ (ಭೀಮಸೇನ ನಳಮಹಾರಾಜ)
ಅತ್ಯುತ್ತಮ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ನಾಮನಿರ್ದೇಶನ
ನಿರ್ದೇಶಕ: ಮನ್ಸೋರೆ (ಆಕ್ಟ್ 1978), ಆಕಾಶ್ ಶ್ರೀವತ್ಸ (ಶಿವಾಜಿ ಸುರತ್ಕಲ್), ದುನಿಯಾ ವಿಜಯ್ (ಸಲಗ), ಕೃಷ್ಣ (ಲವ್ ಮಾಕ್ಟೇಲ್) ಶಂಕ್ ಗುರು (ಬಡವ ರಾಸ್ಕಲ್), ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ), ಜಡೇಶ್ ಕುಮಾರ್ ಹಂಪಿ (ಜಂಟಲ್ ಮ್ಯಾನ್)
ಸಂಗೀತ ನಿರ್ದೇಶಕ: ಚರಣ್ ರಾಜ್ (ಸಲಗ), ಬಿ ಅಜನೀಶ್ ಲೋಕನಾಥ್ (ಜಂಟಲ್ ಮ್ಯಾನ್) ಶ್ರೀಧರ್ ವಿ ಸಂಭ್ರಮ್ (ಮುಗಿಲ್ಪೇಟೆ), ಅರ್ಜುನ್ ಜನ್ಯ ಮತ್ತು ವಿ ಹರಿಕೃಷ್ಣ (ರಾಬರ್ಟ್), ವಾಸುಕಿ ವೈಭವ್ (ಬಡವ ರಾಸ್ಕಲ್), ರಘು ದೀಕ್ಷಿತ್ (ಲವ್ ಮಾಕ್ಟೇಲ್)
ಇತರೆ ವಿಭಾಗಗಳ ನಾಮನಿರ್ದೇಶನಗಳು
ಅತ್ಯುತ್ತಮ ಪೋಷಕ ನಟ: ನಾಗಭೂಷಣ (ಬಡವ ರಾಸ್ಕಲ್), ಪ್ರಮೋದ್ ಪಂಜು (ರತ್ನನ್ ಪ್ರಪಂಚ), ಸಂಚಾರಿ ವಿಜಯ್ (ಜಂಟಲ್ ಮ್ಯಾನ್), ಬಿ.ಸುರೇಶ (ಆಕ್ಟ್ 1978) ಧನಂಜಯ (ಸಲಗ), ಬಾಲಾಜಿ ಮನೋಹರ್ (ಅಮೃತ್ ಅಪಾರ್ಟ್ಮೆಂಟ್ಸ್), ಅಚ್ಯುತ್ ಕುಮಾರ್ (ಭೀಮಸೇನ ನಳಮಹಾರಾಜ)
ಅತ್ಯುತ್ತಮ ಪೋಷಕ ನಟಿ: ಅಮೃತ ಅಯ್ಯಂಗಾರ್ (ಲವ್ ಮಾಕ್ಟೇಲ್), ಆರೋಹಿ ನಾರಾಯಣ (ಶಿವಾಜಿ ಸುರತ್ಕಲ್), ಉಮಾಶ್ರೀ (ರತ್ನನ್ ಪ್ರಪಂಚ), ಮೇಘಶ್ರೀ (ಮುಗಿಲಪೇಟೆ), ಉಷಾ ರವಿಶಂಕರ್ (ಸಲಗ), ಸ್ಪರ್ಶ ರೇಖಾ (ಪಾಪ್ಕಾರ್ನ್ ಮಂಕಿ ಟೈಗರ್)
ಅತ್ಯುತ್ತಮ ಸಾಹಿತ್ಯ: ಕವಿರಾಜ್- ಮೆಲ್ಲನೆ (ರೈಡರ್), ವಿ ನಾಗೇಂದ್ರ ಪ್ರಸಾದ್- ಧೀರ ಸಮ್ಮೋಹಗಾರ (ಬಿಚ್ಚುಗತ್ತಿ), ಜಯಂತ್ ಕಾಯ್ಕಿಣಿ- ತೇಲಾಡು ಮುಗಿಲೆ (ಆಕ್ಟ್ 1978), ನಾಗಾರ್ಜುನ್ ಶರ್ಮಾ- ಮಳೆಯೇ ಮಳೆಯೇ (ಸಲಗ), ಧನಂಜಯ- ಉಡುಪಿ ಹೊಟೇಲು (ಬಡವ ರಾಸ್ಕಲ್), ಪ್ರಮೋದ್ ಮರವಂತೆ- ದೂರ ಹೋಗೋ ಮುನ್ನಾ (ಮುಗಿಲ್ಪೇಟೆ)
ಅತ್ಯುತ್ತಮ ಗಾಯಕ: ರಘು ದೀಕ್ಷಿತ್- ಮಳೆ ಮಳೆ (ನಿನ್ನ ಸನಿಹಕೆ) ನಕುಲ್ ಅಭ್ಯಂಕರ್- ತರೀಫು ಮಾಡಲು (ಮುಗಿಲ್ಪೇಟೆ), ಕಡಬಗೆರೆ ಮುನಿರಾಜು- ತೇಲಾಡೊ ಮುಗಿಲೇ (ಆಕ್ಟ್ 1978), ಸಂಜಿತ್ ಹೆಗ್ಡೆ- ಮೆಲ್ಲನೆ (ರೈಡರ್), ವಿಜಯ್ ಪ್ರಕಾಶ್- ಉಡುಪಿ ಹೊಟೇಲು (ಬಡವ ರಾಸ್ಕಲ್), ಸಿದ್ ಶ್ರೀರಾಮ್-ಹಾಯಾಗಿದೆ (ಟಾಮ್ ಅಂಡ್ ಜೆರ್ರಿ)
ಅತ್ಯುತ್ತಮ ಗಾಯಕಿ: ಶ್ವೇತಾ ದೇವನಹಳ್ಳಿ- ತರೀಫು ಮಾಡಲು (ಮುಗಿಲಪೇಟೆ), ಅನುರಾಧಾ ಭಟ್- ಧೀರ ಸಮ್ಮೋಹಗಾರ (ಬಿಚ್ಚುಗತ್ತಿ), ಚಿನ್ಮಯಿ ಶ್ರೀಪಾದ- ಹಾಯಾದ ಹಾಯಾದ (ದಿಯಾ), ಶ್ರುತಿ ವಿ ಎಸ್- ಲವ್ ಯೂ ಚಿನ್ನಾ (ಲವ್ ಮಾಕ್ಟೇಲ್), ಐಶ್ವರ್ಯ ರಂಗರಾಜನ್- ಮಳೆಯೇ ಮಳೆಯೇ (ಸಲಗ), ಶ್ರೇಯಾ ಘೋಷಾಲ್- ಕಣ್ಣು ಹೊಡಿಯಾಕ (ರಾಬರ್ಟ್)