Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾರಾಗ್ತಾರೆ ಕನ್ನಡದ 'ದಬಾಂಗ್' ಹೀರೋ?
ಬಾಲಿವುಡ್ ನ ಸೂಪರ್ ಡ್ಯೂಪರ್ ಹಿಟ್ ಸಿನಿಮಾ 'ದಬಾಂಗ್' ರೀಮೇಕ್ 'ಕನ್ವರ್ ಲಾಲ್'ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸುತ್ತಾರೆ ಅಂತ ಸುದ್ದಿಯಾಗಿತ್ತು. ಚಿತ್ರಕ್ಕೆ ಗಣಿ ಫೇವರಿಟ್ ನಿರ್ದೇಶಕ ಎಂ.ಡಿ.ಶ್ರೀಧರ್ ಆಕ್ಷನ್ ಕಟ್ ಹೇಳಬೇಕಿತ್ತು.
ಆಷ್ಟರಲ್ಲಿ, ಅನಿವಾರ್ಯ ಕಾರಣಗಳಿಂದ ನಿರ್ದೇಶಕ ಎಂ.ಡಿ.ಶ್ರೀಧರ್, ಪ್ರಾಜೆಕ್ಟ್ ನಿಂದ ಹಿಂದೆ ಸರಿದರು. ಇದರ ಬೆನ್ನಲ್ಲೇ ಗೋಲ್ಡನ್ ಸ್ಟಾರ್ ಕೂಡ 'ಕನ್ವರ್ ಲಾಲ್' ಆಗುವುದಕ್ಕೆ ಸಾಧ್ಯ ಇಲ್ಲ ಅಂದರು. ಅರ್ಧಕರ್ಧ ದುಡ್ಡು ಸುರಿದು ನಿರ್ಮಾಪಕ ದಿನೇಶ್ ಗಾಂಧಿ ಕೈ ಸುಟ್ಟುಕೊಂಡಿದ್ದರು. ಅಲ್ಲಿಗೆ, 'ಕನ್ವರ್ ಲಾಲ್' ಕಥೆ ಫಿನಿಶ್ ಅಂದುಕೊಂಡವರಿಗೆ ಈಗ ಗಾಂಧಿನಗರದಿಂದ ಹೊಸ ಸುದ್ದಿ ಬ್ರೇಕ್ ಆಗಿದೆ. [ಗಣಿ ವಿರುದ್ದ ದಿನೇಶ್ ಗಾಂಧಿ ನೀಡಿರುವ ದೂರಿನಲ್ಲೇನಿದೆ?]
'ಕನ್ವರ್ ಲಾಲ್' ಚಿತ್ರಕ್ಕೆ ಫೈನಾನ್ಶಿಯರ್ ಆಗಿದ್ದ ಕೃಷ್ಣ ದೇವೇಗೌಡ, ಈಗ 'ದಬಾಂಗ್' ರೀಮೇಕ್ ಪ್ರಾಜೆಕ್ಟ್ ಗೆ ಮರುಜೀವ ನೀಡಿದ್ದಾರೆ. 'ಕನ್ವರ್ ಲಾಲ್' ಟೈಟಲ್ ಬಳಸಿಕೊಳ್ಳದೇ, 'ಪ್ರೊಡಕ್ಷನ್ ನಂಬರ್-2' ಅನ್ನುವ ಪೋಸ್ಟರ್ಸ್ ಹೊರಬಿಟ್ಟಿದ್ದಾರೆ ಕೃಷ್ಣ ದೇವೇಗೌಡ. [ಗೋಲ್ಡನ್ ಸ್ಟಾರ್ ಗಣೇಶ್ 'ಕನ್ವರ್ ಲಾಲ್' ಕನಸು ಭಗ್ನ]
ಹೊಚ್ಚ ಹೊಸ ತಂಡ ಕಟ್ಟಿ ಕನ್ನಡದಲ್ಲಿ 'ದಬಾಂಗ್' ಮಾಡಬೇಕೆನ್ನುವ ಆಸೆ ಕೃಷ್ಣ ದೇವೇಗೌಡರದ್ದು. ಹೊಸ ಹೀರೋ ಹುಡುಕಾಟದಲ್ಲಿರುವ ಕೃಷ್ಣ ದೇವೇಗೌಡ ಸದ್ಯದಲ್ಲೇ ಚಿತ್ರದ ತಾರಾಬಳಗವನ್ನ ಫೈನಲೈಸ್ ಮಾಡಲಿದ್ದಾರೆ. (ಏಜೆನ್ಸೀಸ್)