Don't Miss!
- Automobiles 5 ರೂ. ಚಿಲ್ಲರೆ ಕೊಟ್ಟಿಲ್ಲವೆಂದು ರೊಚ್ಚಿಗೆದ್ದ ಪ್ರಯಾಣಿಕ: ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದೇನು ಗೊತ್ತಾ?
- News India Weather: ಮುಂದಿನ ಮೂರು ದಿನ ದೇಶದ ಈ ಭಾಗದಲ್ಲಿ ಅಬ್ಬರದ ಮಳೆ ಮುನ್ಸೂಚನೆ, ಎಲ್ಲಿಲ್ಲಿ?-ಮಾಹಿತಿ
- Finance Shilpa Shetty: ಇಡಿಯಿಂದ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಅವರ 98 ಕೋಟಿ ಮೌಲ್ಯದ 2 ಫ್ಲಾಟ್, ಷೇರು ವಶ
- Technology Realme: ರಿಯಲ್ಮಿ C65 5G ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! 6.67″ 120Hz ಡಿಸ್ಪ್ಲೆ...
- Lifestyle ಮಾಲ್ನೊಳಗೆ ನುಗ್ಗಿದ 100ಕ್ಕೂ ಹೆಚ್ಚು ನಾಯಿಗಳು..! ಕೋಳಿ ಕಾಲು ತೋರಿಸಿ ಹಿಡಿದ ಜನ..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಗೆ ಅಂಕಲ್ ಎಂದು ಹೆಸರಿಟ್ಟಿದ್ದು ನಟಿ ಅಮೂಲ್ಯ!
ಕನ್ನಡ ಚಿತ್ರರಂಗದಲ್ಲಿ ನಟ ದರ್ಶನ್ ಹಲವು ಆತ್ಮೀಯ ಗೆಳೆಯರನ್ನು ಹೊಂದಿದ್ದಾರೆ. ಹಲವು ನಟ-ನಟಿಯರೊಂದಿಗೆ ಕೌಟುಂಬಿಕ ಸ್ನೇಹ ಹೊಂದಿದ್ದಾರೆ ನಟ ದರ್ಶನ್. ಅದರಲ್ಲಿ ನಟಿ ಅಮೂಲ್ಯ ಸಹ ಒಬ್ಬರು.
Recommended Video
ಇಂದು ನಟಿ ಅಮೂಲ್ಯ, ದರ್ಶನ್, ರಾಕ್ಲೈನ್ ವೆಂಕಟೇಶ್ ಜೊತೆಯಾಗಿ ನಿರ್ಮಾಪಕ, ಬಿಜೆಪಿ ಅಭ್ಯರ್ಥಿ ಮುನಿರತ್ನ ಜೊತೆಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ದರ್ಶನ್ ಹಾಗೂ ಅಮೂಲ್ಯ ನಡುವೆ ತಮಾಷೆಯ ಸನ್ನಿವೇಶವೊಂದು ಏರ್ಪಟ್ಟಿತ್ತು.
ಮಂಡ್ಯ to ಆರ್ಆರ್ ನಗರ: ಬದಲಾಯಿತೆ ದರ್ಶನ್ ರಾಜಕೀಯ ಆದರ್ಶ?
ವಯಸ್ಸಿನಲ್ಲಿ ಕಿರಿಯವರಾದ ನಟಿ ಅಮೂಲ್ಯ, ದರ್ಶನ್ಗೆ ಅಂಕಲ್ ಎನ್ನುತ್ತಿದ್ದರಂತೆ. ದರ್ಶನ್ಗೆ ಅಂಕಲ್ ಅನ್ನುವ ಪರಿಪಾಠವನ್ನು ಮೊದಲಿಗೆ ಪ್ರಾರಂಭಿಸಿದ್ದು ಸಹ ನಟಿ ಅಮೂಲ್ಯ ಅಂತೆ. ಇದನ್ನು ಸ್ವತಃ ನಟ ದರ್ಶನ್ ಇಂದು ಹೇಳಿದ್ದಾರೆ.
ನಮ್ಮ ಬಾಸ್ ಬಗ್ಗೆ ಏನು ಹೇಳೋದು: ಅಮೂಲ್ಯ
ಚುನಾವಣೆ ಪ್ರಚಾರದ ವೇಳೆ ಟಿವಿ ಸುದ್ದಿವಾಹಿನಿ ನಿರೂಪಕರೊಬ್ಬರು, ಅಮೂಲ್ಯ ಅವರ ಬಳಿ, ಡಿ-ಬಾಸ್ ಅವರ ಜೊತೆ ಪ್ರಚಾರ ಮಾಡುತ್ತಿದ್ದೀರಿ ಏನನ್ನಿಸುತ್ತಿದೆ? ಎಂದು ಅಮೂಲ್ಯಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಅಮೂಲ್ಯ, 'ನಮ್ಮ ಬಾಸ್ ಬಗ್ಗೆ ನಾನೇನು ಹೇಳಲಿ?' ಎನ್ನುತ್ತಾರೆ.
ಅಂಕಲ್ ಎನ್ನದಿದ್ದರೆ ಗಾಡಿಯಿಂದ ಕೆಳಗೆ ಎಸೀತೀನಿ: ದರ್ಶನ್ ಹಾಸ್ಯ
ಆದರೆ ಅಲ್ಲೇ ಇದ್ದ ನಟ ದರ್ಶನ್, 'ಹೇಳು, ಅಂಕಲ್ ಬಗ್ಗೆ ಹೇಳು, ನನ್ನನ್ನು ಅಂಕಲ್ ಅಂತ ಹೇಳು, ಹೇಳಪ್ಪಿ, ನೀನು ಹೇಳಲಿಲ್ಲ ಎಂದರೆ ಗಾಡಿಯಿಂದ ಹೊರಗೆ ಹಾಕಿಬಿಡುತ್ತೇನೆ' ಎಂದು ತಮಾಷೆಯಾಗಿ ಹೇಳುತ್ತಾರೆ ಅಮೂಲ್ಯಗೆ, ಪಕ್ಕದಲ್ಲಿ ನಿಂತಿದ್ದ ಅಮೂಲ್ಯ ಪತಿ, ನಗುತ್ತಾ ದರ್ಶನ್ಗೆ ಬೆಂಬಲ ನೀಡಿದ್ದಾರೆ.
ಪ್ರಚಾರದ ನಡುವೆಯೂ ಕೊರೊನಾ ಜಾಗೃತಿ ಮೂಡಿಸಿದ ನಟ ದರ್ಶನ್
'ಮೊದಲು ಅಂಕಲ್ ಅಂತ ಸ್ಟಾರ್ಟ್ ಮಾಡಿದ್ದೇ ಅಮೂಲ್ಯ'
ನಂತರ ದರ್ಶನ್, 'ಮೊದಲು ಅಂಕಲ್ ಅಂತ ಸ್ಟಾರ್ಟ್ ಮಾಡಿದ್ದೇ ಅವಳು ನನಗೆ' ಎಂದು ಹಳೆಯ ನೆನಪು ಮೆಲುಕು ಹಾಕಿದರು ದರ್ಶನ್. ದರ್ಶನ್ ಬಲವಂತ ಮಾಡಿದರೂ ಸಹ ಅಮೂಲ್ಯ, ದರ್ಶನ್ ಗೆ ಅಂಕಲ್ ಎನ್ನಲಿಲ್ಲ.
ಮುನಿರತ್ನ ಪರ ಸ್ಟಾರ್ಗಳ ಪ್ರಚಾರ
ನಟ ದರ್ಶನ್, ನಟಿ ಅಮೂಲ್ಯ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಅಮೂಲ್ಯ ಪತಿ ಜಗದೀಶ್ , ಬಿಜೆಪಿಯ ನಳೀನ್ ಕಟೀಲ್, ಆರ್.ಅಶೋಕ್ ಇನ್ನೂ ಇತರ ಮುಖಂಡರು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಇಂದು ಆರ್ಆರ್ ನಗರದಲ್ಲಿ ಚುನಾವಣೆ ಪ್ರಚಾರ ನಡೆಸಿದರು.