Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುಡ್ ನ್ಯೂಸ್: ತಿಥಿ 'ಗಡ್ಡಪ್ಪ' ಈಗ 'ಡಾಕ್ಟರ್' ಗಡ್ಡಪ್ಪ
ಸ್ಯಾಂಡಲ್ ವುಡ್ ನಲ್ಲಿ ಮೋಸ್ಟ್ ಬ್ಯುಸಿಯೆಸ್ಟ್ ನಟರೆಂದರೆ ಗಡ್ಡಪ್ಪ ಎಂದ ಹೇಳಬಹುದು. ಗಡ್ಡಪ್ಪನ ಮುಂದೆ ದೊಡ್ಡ ಸ್ಟಾರ್ ಗಳೆಲ್ಲ ಸ್ವಲ್ಪ ಹಿಂದೆ ಉಳಿದಿದ್ದಾರೆ ಎಂದ್ರೆ ತಪ್ಪಾಗಲಾರದು. ಯಾಕಂದ್ರೆ, ಸ್ಟಾರ್ ನಟರು ವರ್ಷಕ್ಕೆ ಒಂದು ಅಥವಾ ಎರಡು ಚಿತ್ರಗಳನ್ನ ಮಾತ್ರ ಮಾಡುತ್ತಿದ್ದಾರೆ. ಆದ್ರೆ, ಗಡ್ಡಪ್ಪ ತಿಂಗಳಿಗೊಂದು ಎಂಬಂತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.
'ಗಡ್ಡಪ್ಪನ ಸರ್ಕಲ್', 'ತಾತನ್ ತಿಥಿ, ಮೊಮ್ಮಗನ ಪ್ರಸ್ಥ', ಚಿತ್ರಗಳಲ್ಲಿ ತೊಡಗಿಕೊಂಡಿರುವ ಗಡ್ಡಪ್ಪ, ಈ ಮಧ್ಯೆ 'ಹಾಲು-ತುಪ್ಪ' ಬಿಡಲು ಸಿದ್ದವಾಗಿದ್ದಾರೆ. ಹೌದು, ಗಡ್ಡಪ್ಪನ ಜೊತೆಯಲ್ಲಿ ಸೆಂಚುರಿ ಗೌಡ ಕೂಡ ಹಾಲು-ತುಪ್ಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.['ಗಡ್ಡಪ್ಪ-ಸೆಂಚುರಿಗೌಡ'ರ ಹೊಸ ಚಿತ್ರದಲ್ಲೂ 'ಮಸಾಲೆ ಮಾತು'ಗಳ ಅಬ್ಬರ]
ವಿಶೇಷ ಅಂದ್ರೆ, 'ಹಾಲು-ತುಪ್ಪ' ಚಿತ್ರದಲ್ಲಿ ಗಡ್ಡಪ್ಪ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ದಿನ ಪಟಾಪಟಿ ಚಡ್ಡಿ, ಬಿಳಿಯದೊಂದು ಶರ್ಟ್ ನಲ್ಲಿ ಮಿಂಚುತ್ತಿದ್ದ ಗಡ್ಡಪ್ಪ ಈ ಚಿತ್ರದಲ್ಲಿ ಆರ್ಯುವೇದಿಕ್ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.['ಗಡ್ಡಪ್ಪನ ಸರ್ಕಲ್'ನಲ್ಲಿ ರೌಡಿಗಳಾದ ಗಡ್ಡಪ್ಪ-ಸೆಂಚುರಿಗೌಡ!]
ಈ ಹಿಂದೆ 'ಗೂಳಿಹಟ್ಟಿ', 'ಉಡ' ಎಂಬ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಶಶಾಂಕ್ ರಾಜ್ ಈಗ 'ಹಾಲು-ತುಪ್ಪ' ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಸಂಚಾರಿ ಚಿತ್ರವನ್ನ ನಿರ್ಮಾಣ ಮಾಡಿದ್ದ ದೊಡ್ಮನೆ ವೆಂಕಟೇಶ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಉಳಿದಂತೆ ಇಂದ್ರಸೇನಾ ಸಂಗೀತ ಸಂಯೋಜನೆ ಮಾಡಲಿದ್ದಾರೆ.['ತಿಥಿ' ಸ್ಟಾರ್ 'ಗಡ್ಡಪ್ಪ'ನಿಗೆ ಪ್ರಶಸ್ತಿ ಪ್ರದಾನ ಮಾಡಿದ ಫಿಲ್ಮಿಬೀಟ್ ಕನ್ನಡ]