Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ತೋಟದ ಮನೆ ಸೇರಿದ ಸುಂದರ ಗಿಣಿ
ನಟ ದರ್ಶನ್ ಅವರ ಪ್ರಾಣಿ-ಪಕ್ಷಿ ಪ್ರೇಮದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ದರ್ಶನ್ ಅವರ ಮೈಸೂರಿನ ತೋಟದ ಮನೆಯಲ್ಲಿ ಹಲವು ರೀತಿಯ ಪ್ರಾಣಿಗಳು ಪಕ್ಷಿಗಳು ಆರೈಕೆ ಪಡೆಯುತ್ತಿವೆ. ದರ್ಶನ್ ಅವರ ಫಾರಂ ಹೌಸ್ಗೆ ಇಂದು ಹೊಸ ಅತಿಥಿಯ ಸೇರ್ಪಡೆಯಾಗಿದೆ.
Recommended Video
ಜನತಾ ಕರ್ಫ್ಯೂ ಆರಂಭವಾದಾಗಿನಿಂದಲೂ ಮೈಸೂರಿನಲ್ಲಿಯೇ ನೆಲೆಸಿರುವ ದರ್ಶನ್ ನಿನ್ನೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದರು. ಆಶ್ರಮದಲ್ಲಿರುವ ಗಿಣಿಗಳನ್ನು ನೋಡಿ ಆನಂದಿಸಿದ್ದಾರೆ.
ಗಣಪತಿ ಸಚ್ಚಿದಾನಂದ ಆಶ್ರಮದ ಸಚ್ಚಿದಾನಂದ ಶ್ರೀಗಳೊಟ್ಟಿಗೆ ಕುಶಲೋಪರಿ ನಡೆಸಿ ಆಶೀರ್ವಾದ ಪಡೆದ ದರ್ಶನ್ಗೆ ಶ್ರೀಗಳು ಗಿಣಿಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ನಟ ರಾಜವರ್ಧನ್ ಸಹ ದರ್ಶನ್ ಜೊತೆಗಿದ್ದರು.
ರೆಡ್ ಹೆಡೆಡ್ ಅಮೆಜಾನ್ ಜಾತಿಗೆ ಸೇರಿದ ಗಿಣಿಯನ್ನು ದರ್ಶನ್ ಗೌರವದಿಂದ ಸ್ವೀಕರಿಸಿದ್ದು ತಮ್ಮ ಫಾರಂ ಹೌಸ್ನಲ್ಲಿ ಗಿಣಿಯನ್ನು ಸಾಕಲಿದ್ದಾರೆ ದರ್ಶನ್.
ದರ್ಶನ್ ಈಗಾಗಲೇ ಕೆಲವು ಕುದುರೆಗಳು, ಹಸು, ಎತ್ತುಗಳು, ಕುರಿ, ಪಾರಿವಾಳ ಇನ್ನೂ ಕೆಲವು ಪ್ರಾಣಿ-ಪಕ್ಷಗಳನ್ನು ತಮ್ಮ ಫಾರಂ ಹೌಸ್ನಲ್ಲಿ ಸಾಕುತ್ತಿದ್ದಾರೆ. ಇದೀಗ ಗಿಣಿಯೂ ಇದಕ್ಕೆ ಸೇರ್ಪಡೆಯಾಗಿದೆ.
ಪ್ರಾಣಿ-ಪಕ್ಷಿಗಳ ಮೇಲೆ ಪ್ರೀತಿಯ ಜೊತೆಗೆ ವನ್ಯಜೀವಿಗಳ ಫೊಟೊಗ್ರಫಿಯಲ್ಲಿಯೂ ದರ್ಶನ್ ಆಸಕ್ತಿ ಹೊಂದಿದ್ದಾರೆ. ಆಗಾಗ್ಗೆ ಗೆಳೆಯರೊಟ್ಟಿಗೆ ಅರಣ್ಯಕ್ಕೆ ಸಫಾರಿ ತೆರಳುವ ದರ್ಶನ್ ಪ್ರಾಣಿಗಳ ಛಾಯಾಚಿತ್ರ ತೆಗೆದು ಅದನ್ನು ಮಾರಿ ಬಂದ ಹಣವನ್ನು ವನ್ಯಜೀವಿಗಳಿಗೆ ಬಳಸಲು ದೇಣಿಗೆಯಾಗಿ ನೀಡುತ್ತಾರೆ.
ಸಿನಿಮಾ ವಿಷಯಕ್ಕೆ ಬರುವುದಾದರೆ, ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಕೆಲವು ತಿಂಗಳ ಮಾರ್ಚ್ 11 ಕ್ಕೆ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿದೆ. ದರ್ಶನ್ ನಟಿಸುತ್ತಿರುವ 'ರಾಜ ವೀರ ಮದಕರಿ ನಾಯಕ' ಸಿನಿಮಾದ ಚಿತ್ರೀಕರಣ ಕೊರೊನಾ ಕಾರಣಕ್ಕೆ ಸ್ಥಗಿತಗೊಂಡಿದೆ.