Don't Miss!
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾವ ಕಾಲ ಆದರೇನು, ಅಣ್ಣಾವ್ರ ಕ್ರೇಜ್ ಗೆ ಕೊನೆಯೇ ಇಲ್ಲ
ಸಿನಿಮಾದಲ್ಲಿ ಹಣಕ್ಕಿಂತ ಅಭಿಮಾನ ದೊಡ್ಡದು. ಅದರಲ್ಲಿಯೂ ಕನ್ನಡದ ಜನ ಅಣ್ಣಾವ್ರ ಮೇಲೆ ಇಟ್ಟಿರುವ ಅಭಿಮಾನ ಎಂದಿಗೂ ಕಡಿಮೆ ಆಗುವಂತದಲ್ಲ. ಅದನ್ನು ಮತ್ತೆ ಸಾಬೀತು ಮಾಡಿದ್ದು 'ಗಂಧದ ಗುಡಿ' ಸಿನಿಮಾ.
ಗಣೇಶ ಹಬ್ಬಕ್ಕೆ ರಾಜ್, ವಿಷ್ಣು ಅಭಿಮಾನಿಗಳಿಗೆ ಕಾದಿದೆ ದೊಡ್ಡ ಅಚ್ಚರಿ!
ರಾಜ್ ಕುಮಾರ್ ನಟನೆಯ 'ಗಂಧದ ಗುಡಿ' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದೆ. 1973ರ ಈ ಸಿನಿಮಾಗೆ ಇಂದಿಗೂ ದೊಡ್ಡ ಕ್ರೇಜ್ ಇದೆ. ಅದು ಯಾವ ಮಟ್ಟಕ್ಕೆ ಎಂಬುದು ತಿಳಿಯಬೇಕು ಅಂತ ಅಣ್ಣಾವ್ರ ಕಟ್ ಔಟ್ ಅನ್ನು ಒಮ್ಮೆ ಗಮನಿಸಿ.
'ಗಂಧದ ಗುಡಿ'ಯಲ್ಲಿ ಡಾ.ರಾಜ್ ಗೆ ಗುಂಡು ಹಾರಿಸಿದ್ಯಾರು.? ದಶಕಗಳ ನಂತ್ರ ಸತ್ಯ ಬಟಾಬಯಲು.!
ಚಿತ್ರದ ರೀ ರಿಲೀಸ್ ವಿಶೇಷವಾಗಿ ರಾಜ್ ಕುಮಾರ್ ಅಭಿಮಾನಿಗಳು ನಿನ್ನೆ (ಭಾನುವಾರ) ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದರು. ರಾಜ್ ಕುಮಾರ್ ಕಟ್ ಔಟ್ ಗೆ ಹಾರ ಹಾಕಿ, ಪರದೆ ಮೇಲೆ ಅಣ್ಣಾವ್ರು ಬಂದಾಗ ಕುಣಿದು, ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು.
ಇನ್ನು ಬೆಂಗಳೂರಿನ ಅನುಪಮ ಚಿತ್ರಮಂದಿರದಲ್ಲಿ ಇದ್ದ ಹಬ್ಬದ ವಾತಾವರಣ, ಆ ಅಭಿಮಾನ ನೋಡಿದರೆ ಯಾವ ಕಾಲ ಆದರೇನು, ಅಣ್ಣಾವ್ರ ಕ್ರೇಜ್ ಗೆ ಕೊನೆಯೇ ಇಲ್ಲ ಅನಿಸಿ ಬಿಡುತ್ತದೆ.
ಅಂದಹಾಗೆ, 'ಗಂಧದ ಗುಡಿ' ಮೊದಲು ಬಿಡುಗಡೆಯಾಗಿದ್ದು 1973ರಲ್ಲಿ. ಎಂ ಪಿ ಶಂಕರ್ ಈ ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿದ್ದರು. ವಿಜಯ್ ನಿರ್ದೇಶನ ಚಿತ್ರಕ್ಕಿತ್ತು. ರಾಜ್ ಕುಮಾರ್, ವಿಷ್ಣುವರ್ಧನ್, ಕಲ್ಪನಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಇದೇ ಸಿನಿಮಾ ಹಿಂದಿಯಲ್ಲಿ 'ಕರ್ತವ್ಯ' ಎಂಬ ಹೆಸರಿನಲ್ಲಿ ರಿಮೇಕ್ ಆಗಿತ್ತು.