Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪತ್ನಿಗೆ ಟಿಕೆಟ್ ಸಿಗದಿದ್ದರು ಬಿಜೆಪಿ ಪರ ಪ್ರಚಾರ ಮಾಡಿದ ಗೋಲ್ಡನ್ ಸ್ಟಾರ್
ಶಿಲ್ಪಾ ಗಣೇಶ್ ಈ ಬಾರಿ ಆರ್ ಆರ್ ನಗರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೆಂದು ಮಹದಾಸೆಯನ್ನು ಹೊಂದಿದ್ದರು. ಆದರೆ ಲೆಕ್ಕಾಚಾರವೆಲ್ಲಾ ತಳೆಕೆಳಗಾಗಿ ಟಿಕೆಟ್ ಶಿಲ್ಪಾ ಗಣೇಶ್ ಅವರ ಕೈ ತಪ್ಪಿ ಹೋಯಿತು. ಇದರಿಂದ ಬೇಸರಗೊಂಡ ಶಿಲ್ಪಾ ಗಣೇಶ್ ಪಕ್ಷದ ಪರವಾಗಿ ಆಗಲಿ ಚುನಾವಣೆಯ ಪರವಾಗಲಿ ಆಗಲಿ ಮಾತನಾಡದೇ ಸುಮ್ಮನಾದರು.
ಆದರೆ ಗೋಲ್ಡನ್ ಸ್ಟಾರ್ ಗಣೇಶ್ ಮಾತ್ರ ಯಾವುದೇ ಬೇಸರವಿಲ್ಲದೆ ತಮ್ಮ ಆಪ್ತರ ಪರವಾಗಿ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಆರ್ ಅಶೋಕ್ ಗಣೇಶ್ ಅವರಿಗೆ ಆಪ್ತರು. ಈಗಾಗಲೇ ಗೊಲ್ಡನ್ ಸ್ಟಾರ್ ಅವರ ಸಾಕಷ್ಟು ಸಿನಿಮಾ ಕಾರ್ಯಕ್ರಮದಲ್ಲಿ ಆರ್ ಅಶೋಕ್ ಉಪಸ್ಥಿತಿ ಕಂಡು ಬಂದಿದೆ. ಇದೇ ಸ್ನೇಹದಲ್ಲಿ ಗಣೇಶ್ ರಸ್ತೆಗಿಳಿದು ಚುನಾವಣಾ ಪ್ರಚಾರ ಮಾಡಿದ್ದಾರೆ.
ಸ್ನೇಹ ಸಂಬಂಧ ಬಾಂಧವ್ಯ ಯಾವಾಗಲೂ ನೆನಪಿನಲ್ಲಿ ಇರಲಿ
ಪದ್ಮನಾಬ ನಗರದಲ್ಲಿ ರೋಡ್ ಶೋ ಮಾಡುವ ಮೂಲಕ ಅಶೋಕ್ ಅವರ ಪರವಾಗಿ ಜನರ ಬಳಿ ಮತಯಾಚನೆ ಮಾಡಿದ್ದಾರೆ. ಹೆಂಡತಿಗೆ ಟಿಕೆಟ್ ಸಿಕ್ಕರೆ ನನ್ನ ಸಂಪೂರ್ಣ ಬೆಂಬಲ ಇರಲಿದೆ ಎಂದಿದ್ದ ಗಣೇಶ್, ಟಿಕೆಟ್ ಕೈ ತಪ್ಪಿದ ನಂತರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನು ಗಣೇಶ್ ಜೊತೆಯಲ್ಲಿ ಸಿಲ್ಲಿ-ಲಲ್ಲಿ ಧಾರಾವಾಹಿ ಖ್ಯಾತಿಯ ನಮಿತಾ ರಾವ್ ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿ ಆಗಿದ್ದು ವಿಶೇಷವಾಗಿತ್ತು. ಒಟ್ಟಾರೆ ರಾಜಕೀಯ ಪಕ್ಷದವರು ಕೊನೆಕ್ಷಣದ ವರೆಗೂ ಸ್ಟಾರ್ ಗಳನ್ನ ಕರೆಸಿ ತಮ್ಮ ಪರವಗಿ ಪ್ರಚಾರ ಮಾಡಿಸುತ್ತಿದ್ದಾರೆ.