Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೈ ಮುಂಗಾರುಮಳೆ..., ಜೈ ಜನತೆ..., ಜೈ ಜೀವನ: ಗಣಪ-ಭಟ್
ಮುಂಗಾರು ಮಳೆ......, ಅಂದಾಕ್ಷಣ ಅದ್ಭುತವಾದ ಸಾಹಿತ್ಯ, ಸುಮಧುರ ಹಾಡುಗಳು, ಒಳ್ಳೆಯ ಕಥೆ, ಬೇಸರವೇ ಬಾರದ ಸಂಭಾಷಣೆಗಳ, ಹೃದಯ ಮುಟ್ಟುವ ಅಂತ್ಯ. ಗಣೇಶ್, ಯೋಗರಾಜ್ ಭಟ್, ಪೂಜಾ ಗಾಂಧಿ, ಜಯಂತ್ ಕಾಯ್ಕಿಣಿ, ಮನೋಮೂರ್ತಿ, ಸೋನು ನಿಗಮ್, ಶ್ರೇಯ ಗೋಷಾಲ್ ನೆನಪಾಗ್ತಾರೆ.
Recommended Video
ಕನ್ನಡದ ಚಿತ್ರರಂಗದ ದಿಕ್ಕನ್ನು ಬದಲಿಸಿದ ಚಿತ್ರ, ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಸಿನಿಮಾ, ಕನ್ನಡ ಚಿತ್ರರಂಗದ ಹೊಸ ಭರವಸೆಗಳನ್ನು ಮೂಡಿಸಿದ ಚಿತ್ರ, ಕನ್ನಡ ಚಿತ್ರರಂಗಕ್ಕೆ ಹೊಸ ಸ್ಟಾರ್ಗಳನ್ನು ನೀಡಿದ ಚಿತ್ರ ಬಿಡುಗಡೆಯಾಗಿ 14 ವರ್ಷ ಆಗಿದೆ.
ಗಣೇಶ್-ಯೋಗರಾಜ್ ಭಟ್ಟರ 'ಮುಂಗಾರು ಮಳೆ'ಗೆ 14 ವರ್ಷ ತುಂಬಿದ ಸಂತಸ
ಈ ಸಂದರ್ಭದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಟ ಗಣೇಶ್ ತಮ್ಮ ಮನದಾಳದ ಮಾತನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
''ನಮಸ್ತೆ....., ನಾವಿಬ್ಬರೂ, ಜೊತೆಗೆ ಇಡೀ ತಂಡ ಆಗ ತಾನೇ ಕಣ್ತೆರದ ಶಿಶುಗಳಂತೆ 'ಮುಂಗಾರುಮಳೆ' ಚಿತ್ರ ಮಾಡಿ, ಜನತೆಗೆ ಅರ್ಪಿಸಿ ಇಂದಿಗೆ 14 ವರ್ಷಗಳಾಗಿವೆ....ಚಿತ್ರಕ್ಕಷ್ಟೇ ಅಲ್ಲದೇ ನಮ್ಮಿಬ್ಬರಿಗೂ ಇದು ಒಂದು ರೀತಿಯ ಹುಟ್ಟುಹಬ್ಬ...ಕೆಲಸ ಕಲಿಸಿದ, ಬದುಕು ಕೊಟ್ಟ, ಪ್ರೀತಿ ತಿಳಿಸಿದ, ನಾಡು ನಲಿಸಿದ ಈ ಪ್ರೇಕ್ಷಕರ ಆಸ್ತಿಯಂತಹ ಮಹಾನ್ ಚಿತ್ರಕ್ಕೆ ನಮ್ಮಿಬ್ಬರ ದೀರ್ಘದಂಡ ನಮನಗಳು....ಜೈ ಮುಂಗಾರುಮಳೆ....ಜೈ ಜನತೆ....ಜೈ ಜೀವನ...ನಿಮ್ಮವರು - ಗಣಪ-ಯೋಗ್ರಾಜ್ ಭಟ್'' ಎಂದು ಧನ್ಯವಾದ ಅರ್ಪಿಸಿದ್ದಾರೆ.
ಅಂದ್ಹಾಗೆ, 2006ರ ಡಿಸೆಂಬರ್ 29 ರಂದು ಮುಂಗಾರುಮಳೆ ಸಿನಿಮಾ ಬಿಡುಗಡೆಯಾಗಿತ್ತು. ಇ ಕೃಷ್ಣಪ್ಪ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಕೇವಲ 2 ಕೋಟಿಯಲ್ಲಿ ತಯಾರಾಗಿದ್ದ ಚಿತ್ರ 75 ಕೋಟಿಯವರೆಗೂ ಲಾಭ ಮಾಡಿದೆ ಎಂದು ಬಾಕ್ಸ್ ಆಫೀಸ್ನಲ್ಲಿ ವರದಿಯಾಗಿದೆ.
ಗಣೇಶ್-ಭಟ್ಟರ ಕಾಂಬಿನೇಷನ್ ಸಿನಿಮಾ
ಮುಂಗಾರುಮಳೆ ನಂತರ ಗಾಳಿಪಟ ಸಿನಿಮಾ ಮಾಡಿದ ಈ ಜೋಡಿ ಮತ್ತೊಮ್ಮೆ ಅದ್ಭುತವಾದ ಯಶಸ್ಸು ಕಂಡರು. ಬಹಳ ವರ್ಷದ ಬಳಿಕ ಮುಗುಳುನಗೆ ಎಂಬ ಚಿತ್ರ ಮಾಡಿದರು. ಈ ಗಾಳಿಪಟ 2 ಸಿನಿಮಾ ಮಾಡ್ತಿದ್ದಾರೆ.