Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೀತಿ, ಪ್ರೋತ್ಸಾಹದಿಂದ 'ಗಂಟುಮೂಟೆ' ತುಂಬಿಸಿದ ಕನ್ನಡ ಜನ
ಒಂದು ಸಿನಿಮಾ ಸೈಲೆಂಟ್ ಆಗಿ ಬಿಡುಗಡೆಯಾಯ್ತು. ರಿಲೀಸ್ ಆದ ಮೇಲೆ ದಿನದಿಂದ ದಿನಕ್ಕೆ ಅವರ ಬಗ್ಗೆ ಜನ ಮಾತನಾಡಲು ಶುರು ಮಾಡಿದರು. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ನೋಡಿದ ಜನರು ಬರೆಯಲು ಪ್ರಾರಂಭ ಮಾಡಿದರು. ಆ ಸಿನಿಮಾ ಇದೀಗ ಜನರ ಪ್ರೀತಿ, ಪ್ರೋತ್ಸಾಹ ಪಡೆದು ಮುನ್ನುಗುತ್ತಿದೆ. ಅದೇ 'ಗಂಟುಮೂಟೆ'.
'ಗಂಟುಮೂಟೆ' ತುಂಬ ಪ್ರೀತಿ ಸಿಕ್ಕಿದೆ. ಸಿನಿಮಾ ನೋಡಿದ ಜನರು, ವಿಮರ್ಶಕರು, ಸ್ಯಾಂಡಲ್ ವುಡ್ ಗಣ್ಯರು ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರಮಂದಿರದಿಂದ ಸಿನಿಮಾ ನೋಡಿ ಖುಷಿಯಿಂದ ಆಚೆ ಬರುತ್ತಿದ್ದಾರೆ. ಇದನೆಲ್ಲ ನೋಡಿದ ಚಿತ್ರತಂಡಕ್ಕೆ, ತಾವು ಮಾಡಿದ ಕೆಲಸಕ್ಕೆ ತೃಪ್ತಿ ಸಿಕ್ಕ ಭಾವನೆ ಬಂದಿದೆ.
Gantumoote review: ಮುಗ್ದ ಮನಸ್ಸುಗಳ ಪ್ರೀತಿ ತುಂಬಿದ 'ಗಂಟುಮೂಟೆ'
ಶಾಲಾ ದಿನಗಳನ್ನು ಸಿನಿಮಾ ನೆನಪು ಮಾಡುತ್ತದೆ. ಹದಿಹರೆಯ ಪ್ರೀತಿ, ತರ್ಲೆ, ತಮಾಷೆಯ ಜೊತೆಗೆ ಗಂಭೀರ ವಿಷಯ ಹೀಗೆ ಎಲ್ಲ ಅಂಶಗಳು ಸಿನಿಮಾದಲ್ಲಿವೆ. ಪ್ರಮುಖವಾಗಿ ಪ್ರಕಾಶ್ ಬೆಳವಾಡಿ ಪುತ್ರಿ ತೇಜು ಬೆಳವಾಡಿ ನಟನೆಗೆ ಒಳ್ಳೆಯ ಮಾತುಗಳು ಕೇಳಿ ಬಂದಿವೆ. ಇಡೀ ಸಿನಿಮಾ ನೋಡುಗರಿಗೆ ತುಂಬ ಹತ್ತಿರ ಆಗುತ್ತಿವೆ. ಅನೇಕ ಭಾವನಾತ್ಮಕ ದೃಶ್ಯಗಳು ಸಿನಿಮಾದಲ್ಲಿವೆ.
ಯಾವುದೇ ಸ್ಟಾರ್ ಇಲ್ಲದೆ ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಿ ನಿರ್ದೇಶಕಿ ರೂಪ ರಾವ್ ಗೆದ್ದಿದ್ದಾರೆ. ಮತ್ತೊಮ್ಮೆ ಹೊಸಬರ ಸಿನಿಮಾವನ್ನು ಕನ್ನಡಿಗರು ಸ್ವಾಗತ ಮಾಡಿದ್ದಾರೆ. ಚಿತ್ರರಂಗದ ಅನೇಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.