Don't Miss!
- News ದೇವೇಗೌಡರು ಕಣ್ಣೀರು ಹಾಕುವಂತೆ ಯಾರು ಏನು ಮಾಡಿದ್ದಾರೆ? ಡಿ ಕೆ ಶಿವಕುಮಾರ್ ಹೇಳಿದ್ದೇನು?
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೀವು 'ಹಾಫ್ ಮೆಂಟ್ಲು' ಆಗೋ ಸಿನಿಮಾ ಬರ್ತಿದೆ
ಹೊಸಬರ ಸಿನಿಮಾಗಳು ಅಂದ್ರೆ ಯಾವ ಪ್ರೇಕ್ಷಕರೂ ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ. ಆದ್ರೆ ವಿಭಿನ್ನವಾಗಿದ್ದು ವಿಶೇಷವಾಗಿದ್ದು ಇದ್ರೆ ಅದನ್ನ ಪ್ರೋತ್ಸಾಹಿಸೋದ್ರಲ್ಲಿ ಕನ್ನಡ ಪ್ರೇಕ್ಷಕರು ಹಿಂದೆ ಬಿದ್ದಿಲ್ಲ. ಈಗ ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಮಾಡಬಹುದಾದ ಹೊಸಬರ ಸಿನಿಮಾವೊಂದು ನಿಧಾನಕ್ಕೆ ಸದ್ದು ಮಾಡ್ತಿದೆ.
ಅದು 'ಹಾಫ್ ಮೆಂಟ್ಲು' ಸಿನಿಮಾ. ಟೈಟಲ್ ಕೇಳಿದ ಮೊದಲಿಗೆ ಇದೂ ನೂರರಲ್ಲಿ ಮತ್ತೊಂದು ಸಿನಿಮಾ ಅಂದುಕೊಂಡವರು ಈಗ 'ಹಾಫ್ ಮೆಂಟ್ಲು' ಹಾಡುಗಳನ್ನ ಕೇಳಿ ತಲೆದೂಗ್ತಿದ್ದಾರೆ. ಈ ಹಾಡುಗಳ ವಿಶೇಷ ಅಂದ್ರೆ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಂಗೀತ ನಿರ್ದೇಶಕ ಬಿ.ಜೆ ಭರತ್ ಮೊದಲು ಸಂಗೀತ ನೀಡಿದ್ದ ಹಾಡುಗಳಿವು. ['ಹಾಫ್ ಮೆಂಟ್ಲು' ರಾತ್ರಿ ಶೂಟಿಂಗ್ ನಲ್ಲಿ ಏನಾಯ್ತು?]
ಈ ಹಾಡುಗಳನ್ನ ನೋಡೀನೇ ನಿರ್ದೇಶಕ ಸುನಿ ತಮ್ಮ ಸಿನಿಮಾಗೆ ಬಿ ಜೆ ಭರತ್ ಸಂಗೀತವನ್ನು ಆಯ್ದುಕೊಂಡಿದ್ರಂತೆ. ಇನ್ನು 'ಹಾಫ್ ಮೆಂಟ್ಲು' ಆರಂಭದಲ್ಲೇ ಮಂಗಳಮುಖಿಯರಿಂದ ಹಾಡೊಂದನ್ನ ಹಾಡಿಸಿ ಸಖತ್ ಸೌಂಡ್ ಮಾಡಿತ್ತು. ಈಗ ಚಿತ್ರದಲ್ಲಿರೋ 9 ಹಾಡುಗಳೂ ವಿಭಿನ್ನವಾಗಿ ಮೂಡಿಬಂದಿವೆ ಅಂತಿದ್ದಾರೆ ಸಿನಿ ಪಂಡಿತರು.
ಅಂದಹಾಗೆ. ಶಶಿಕುಮಾರ್ ಅನ್ನೋ ಹೊಸ ನಿರ್ಮಾಪಕರು ಹಣ ಸುರಿದಿರೋ ಚಿತ್ರವನ್ನ ನಿರ್ದೇಶನ ಮಾಡಿರೋದು ಕೂಡ ನವ ನಿರ್ದೇಶಕ ಲಕ್ಷ್ಮಿ ದಿನೇಶ್ ಒಟ್ಟಾರೆ ಹೊಸಬರೇ ನಿರ್ಮಿಸಿರೋ ಚಿತ್ರದಲ್ಲಿ ಸಂಕಲನಕಾರರೂ ಸೇರಿದಂತೆ ಹಲವು ತಂತ್ರಜ್ಞರು 2013ರಲ್ಲಿ ಗೆದ್ದ ಸಿಂಪಲ್ಲಾಗ್ ಒಂದ್ ಲಲ್ ಸ್ಟೋರಿ ತಂಡದವ್ರು ಅನ್ನೋದು ವಿಶೇಷ.
ಇಷ್ಟಕ್ಕೂ 'ಹಾಫ್ ಮೆಂಟ್ಲು' ಕಥೆ ಏನೆಂದರೆ ಹುಡುಗಿಗಾಗಿ, ಹುಡುಗಿಯಿಂದ, ಹುಡುಗಿಗೋಸ್ಕರ ಹುಚ್ಚನಾದ ಮತ್ತೊಬ್ಬ ಹುಡುಗನ ಹೃದಯ ವಿದ್ರಾವಕ ಕಥೆ. ಅಂದಹಾಗೆ ಹಾಫ್ ಮೆಂಟ್ಲು ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಜಿ ಶಿವಕುಮಾರ್, ಸಂಗೀತ ಬಿಜೆ ಭರತ್. ಪಕ್ಕಾ ಲವ್ ಸ್ಟೋರಿಯಾಗಿರುವ ಈ ಚಿತ್ರದಲ್ಲಿ ಮೈಕೋ ನಾಗರಾಜ್, ಹರಿ, ತಬಲಾ ನಾಣಿ, ಶ್ರೀನಿವಾಸ ಗೌಡ ಮುಂತಾದವರಿದ್ದಾರೆ.