Just In
Don't Miss!
- News
ಬಜೆಟ್; ಆಟಿಕೆ ಉದ್ಯಮಕ್ಕೆ ವಿಶೇಷ ನೀತಿ, ಕೊಪ್ಪಳಕ್ಕೆ ಕೊಡುಗೆ?
- Sports
ಚೇತೇಶ್ವರ ಪೂಜಾರ ಟೆಸ್ಟ್ ದಾಖಲೆಗಳು, ಅಚ್ಚರಿಯ ಅಂಕಿ-ಅಂಶಗಳು!
- Finance
ಬಜೆಟ್ 2021: ಸಾಮಾನ್ಯ ಜನರ ನಿರೀಕ್ಷೆ ಮತ್ತು ತೆರಿಗೆ ಪರಿಹಾರ
- Automobiles
ಮುಂಬರುವ ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿದೆ ಸಿಟ್ರನ್ ಹೊಸ ಸಿ3 ಏರ್ಕ್ರಾಸ್
- Education
UPSC Recruitment 2021: 249 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ನ್ಯೂಮೋನಿಯಾ: ಶ್ವಾಸಕೋಶದ ಸೋಂಕು ಇದ್ದಾಗ ಏನು ತಿನ್ನಬೇಕು, ಏನು ತಿನ್ನಬಾರದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಯನಾತಾರ ಸಿನಿ ಜೀವನದಲ್ಲಿ 'ಆ ಸಿನಿಮಾ' ಮಾಡಬಾರದಿತ್ತಂತೆ
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ನಯನಾತಾರ. ಮಲಯಾಳಂ ಚಿತ್ರರಂಗದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನಯನಾತಾರ 17 ವರ್ಷಗಳಲ್ಲಿ ಸುಮಾರು 70ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಚಿತ್ರಾಭಿಮಾನಿಗಳನ್ನು ರಂಜಿಸುತ್ತಾ ಬಂದಿರುವ ನಯನಾ ಆ ಒಂದು ಸಿನಿಮಾ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸೌತ್ ಸಿನಿ ಇಂಡಸ್ಟ್ರಿಯ ಎಲ್ಲಾ ಭಾಷೆಯಲ್ಲೂ ಮಿಂಚಿರುವ ನಯನಾ ಸೂಪರ್ ಹಿಟ್ ಸಿನಿಮಾದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗಷ್ಟೆ ಸಂದರ್ಶನ ಒಂದರಲ್ಲಿ ಮಾತಾಡಿದ ನಯನಾ ತನ್ನ ಸಿನಿ ಜೀವನದಲ್ಲೆ ಅಂತಹ ಪಾತ್ರ ಮಾಡಬಾರದಿತ್ತು ಎಂದು ಪಾತ್ರದ ಬಗ್ಗೆ ಮತ್ತು ನಿರ್ದೇಶಕರ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಶೂಟಿಂಗ್ ವೇಳೆ ರಜನಿ ತಂಡಕ್ಕೆ ಕಲ್ಲು ಎಸೆದ ವಿದ್ಯಾರ್ಥಿಗಳು
ನಯನಾ ಬೇಸರಕ್ಕೆ ಕಾರಣವಾದ ಸಿನಿಮಾ ಟಾಲಿವುಟ್ ಸ್ಟಾರ್ ಸೂರ್ಯ ಅಭಿನಯದ 'ಗಜನಿ' ಸಿನಿಮಾ. 'ಗಜನಿ' ಚಿತ್ರದಲ್ಲಿ ನಯನಾತಾರ ಎರಡನೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಟಾಲಿವುಡ್ ನಸೂಪರ್ ಹಿಟ್ಸಿನಿಮಾಗಳಲ್ಲಿ ಒಂದು 'ಗಜನಿ'. ನಟಿ ಆಸಿನ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಆದ್ರೆ ನಯನಾ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕರ ಎ.ಆರ್ ಮುರುಗದಾಸ್ ಮೊದಲು ಕತೆ ಬಗ್ಗೆ ಹೇಳುವಾಗ ಪಾತ್ರ ಚೆನ್ನಾಗಿಯೆ ವಿವರಿಸಿದ್ರಂತೆ. ಆದ್ರೆ ಸಿನಿಮಾ ಆದ್ಮೇಲೆ ಸಂಪೂರ್ಣವಾಗಿ ಬದಲಾಗಿದೆಯಂತೆ. ಆ ನಂತರ ಈ ಪಾತ್ರ ಮಾಡಬಾರದಿತ್ತು ಅಂತ ಅನಿಸಿದೆಯಂತೆ. ಹಾಗಾಗಿ ಆ ನಂತರ ಬಹುತಾರಗಣದ ಚಿತ್ರ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಪಾತ್ರಗಳ ಆಯ್ಕೆ ಮಾಡಿಕೊಳ್ಳುತ್ತಾರಂತೆ.
ಸದ್ಯ ನಯನಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಜೊತೆ 'ದಳಪತಿ63', ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ದರ್ಬಾರ್' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಈ ವರ್ಷದ ಕೊನೆಯಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.