Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ನಿರ್ಮಾಪಕರಿಗೆ ನಟ ಜಗ್ಗೇಶ್ ಮಾಡಿರುವ ಮನವಿ ಇದು
ಕನ್ನಡ ನಾಡು, ನುಡಿ, ಜಲ ವಿಷಯ ಬಂದಾಗ ಸ್ವಾಭಿಮಾನಿ ಕನ್ನಡಿಗನಾಗಿ ಕನ್ನಡಿಗರ ಪರ ಸದಾ ದನಿ ಎತ್ತುವ ನಟ ಜಗ್ಗೇಶ್, ಕನ್ನಡ ಚಿತ್ರರಂಗದ ದೌರ್ಭಾಗ್ಯದ ಬಗ್ಗೆ ಇತ್ತೀಚೆಗಷ್ಟೇ ಬೇಸರ ವ್ಯಕ್ತಪಡಿಸಿದ್ದರು.
''ಕನ್ನಡ ಸಿನಿಮಾಗಳಲ್ಲಿ ನಟಿಸುವ ಯೋಚನೆ ಇಲ್ಲ'' ಎಂದು ಶ್ರುತಿ ಹಾಸನ್ ಹೇಳಿದ್ದನ್ನ ಕೇಳಿ, ''ನಮ್ಮ ಕನ್ನಡದಲ್ಲಿ ನಾಯಕಿಯರಿಗೆ ಕೊರತೆಯೇ.? ಇಂಥ ಮಾತು ಕೇಳಿ ಇವರ ಮನೆ ಮುಂದೆ ನಿಲ್ಲಲು ಕನ್ನಡ ನಿರ್ಮಾಪಕರು ಭಿಕ್ಷುಕರೇ.? ನಮ್ಮವರಿಗೆ ಇನ್ನೂ ಬುದ್ಧಿ ಬಂದಿಲ್ಲ.! ದೌರ್ಭಾಗ್ಯ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದರು.
ಈ ಬಗ್ಗೆ 'ಕನ್ನಡ ನಿರ್ಮಾಪಕರು ಭಿಕ್ಷುಕರೇ.? ಚಿತ್ರರಂಗದ ದೌರ್ಭಾಗ್ಯದ ಬಗ್ಗೆ ಜಗ್ಗೇಶ್ ಆಕ್ರೋಶ.!' ಎಂಬ ಶೀರ್ಷಿಕೆ ಅಡಿ ನಿಮ್ಮ 'ಫಿಲ್ಮಿಬೀಟ್ ಕನ್ನಡ' ವಿಸ್ತೃತ ಲೇಖನ ಪ್ರಕಟಿಸಿತ್ತು. ಈ ಲೇಖನವನ್ನ ಓದಿ ನಟ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
''ತುಂಬ ದುಃಖವಾಗಿ ಪ್ರತಿಕ್ರಿಯಿಸಿದೆ. ಕಾರಣ ನಮ್ಮ ಕನ್ನಡಿಗರು ಎಷ್ಟು ಪ್ರೀತಿಯಿಂದ ಎಲ್ಲ ಭಾಷೆ ಗೌರವಿಸುತ್ತಾರೆ. ಯಾಕೆ ಅನ್ಯರು ನಮ್ಮ ಗುಣಕ್ಕೆ ಗೌರವ ನೀಡಲ್ಲ.? ಬೇಜಾರಾಯಿತು'' ಎಂದು ನಮ್ಮ ಲೇಖನದ ಟ್ವೀಟ್ ನ ರೀಟ್ವೀಟ್ ಮಾಡಿ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಅಂತೆ-ಕಂತೆಯೆಲ್ಲ ಸುಳ್ಳಾಯ್ತಲ್ಲ: ಕನ್ನಡಕ್ಕೆ ಕಮಲ್ ಪುತ್ರಿ ಶ್ರುತಿ ಬರ್ತಿಲ್ಲ.!
ತುಂಬ ದುಖ್ಖವಾಗಿ ಪ್ರತಿಕ್ರಿಯಿಸಿದೆ!ಕಾರಣ ನಮ್ಮಕನ್ನಡಿಗರು ಎಷ್ಟು ಪ್ರೀತಿಯಿಂದ ಎಲ್ಲಾಭಾಷೆ ಗೌರವಿಸುತ್ತಾರೆ!ಯಾಕೆ ಅನ್ಯರು ನಮ್ಮಗುಣಕ್ಕೆ ಗೌರವ ನೀಡಲ್ಲಾ! ಬೇಜಾರಾಯಿತು! https://t.co/fUdh9KzhWu
— ನವರಸನಾಯಕ ಜಗ್ಗೇಶ್ (@Jaggesh2) October 8, 2017
''ನಮ್ಮ ಕನ್ನಡ ಮಕ್ಕಳನ್ನೇ ನಮ್ಮ ಚಿತ್ರಗಳಲ್ಲಿ ನಟ-ನಟಿಯನ್ನಾಗಿ ಬಳಸಿ. ಸ್ವಾಭಿಮಾನದಿಂದ ಬದುಕೋಣ'' ಎಂದು ಕನ್ನಡ ನಿರ್ಮಾಪಕರಿಗೆ ಜಗ್ಗೇಶ್ ವಿನಂತಿ ಮಾಡಿಕೊಂಡಿದ್ದಾರೆ.
'ಪ್ಲಾಸ್ಟಿಕ್ ಬೊಂಬೆ', 'ಸೊಕ್ಕಿನ ಹುಡುಗಿ' ಶ್ರುತಿ ಹಾಸನ್ ವಿರುದ್ಧ ಕನ್ನಡಿಗರು ಸಿಡಿಮಿಡಿ
ನಾನು ಪ್ರಾಮಾಣಿಕವಾಗಿ ನನ್ನ ಕನ್ನಡ ನಿರ್ಮಾಪಕರಿಗೆ ವಿನಂತಿ ಮಾಡುವೆ ದಯಮಾಡಿ ನಮ್ಮಕನ್ನಡದ ಮಕ್ಕಳನ್ನೆ ನಮ್ಮಚಿತ್ರಗಳಲ್ಲಿ ನಟನಟಿಯನ್ನಾಗಿ ಬಳಸಿ ಸ್ವಾಭಿಮಾನದಿಂದ ಬದುಕೋಣ!
— ನವರಸನಾಯಕ ಜಗ್ಗೇಶ್ (@Jaggesh2) October 8, 2017
''ದಕ್ಷಿಣ ಭಾರತದಲ್ಲಿ ಬಲಿಷ್ಟವಾಗಿರೋದೇ ನಮ್ಮ ಕನ್ನಡ ಚಿತ್ರರಂಗ. ಪುನೀತ್, ಸುದೀಪ್, ದರ್ಶನ್, ಯಶ್, ಧ್ರುವ ಸರ್ಜಾ, ಗಣೇಶ್, ಚಿರಂಜೀವಿ ಸರ್ಜಾ, ದುನಿಯಾ ವಿಜಯ್, ರಚಿತಾ ರಾಮ್, ರಾಧಿಕಾ ಪಂಡಿತ್, ಹರಿಪ್ರಿಯಾ... ಇನ್ನೂ ಅನೇಕರಿದ್ದಾರೆ. ಚಿಂತೆ ಏಕೆ.?'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ದಕ್ಷಿಣಭಾರತದಲ್ಲಿ ಬಲಿಷ್ಟವಾಗಿರೋದೆ ನಮ್ಮಕನ್ನಡಚಿತ್ರರಂಗ.ಪುನೀತ್,ಸುದೀಪ,ದರ್ಶನ್,ಯಶ್,ದೃವ,ಗಣೇಶ,ಚಿರು,ವಿಜಿ,ರುಚಿತ,ರಾಧಿಕ,ಹರಿಪ್ರಿಯಇನ್ನುಅನೇಕರಿದ್ದಾರೆ,ಚಿಂತೆಏಕೆ!
— ನವರಸನಾಯಕ ಜಗ್ಗೇಶ್ (@Jaggesh2) October 8, 2017
''ಹೊಸಬರಂತೂ ಆಶಾದಾಯಕವಾಗಿ ಸಿಕ್ಸರ್ ಬಾರಿಸುತ್ತಿದ್ದಾರೆ. ನಮ್ಮ ಈ ಪಡೆಯೇ ಸಾಕು ಕನ್ನಡಿಗರನ್ನು ರಂಜಿಸಲು. ಅನ್ಯರಿಗೆ ಸವಲತ್ತು ನೀಡಿ ಕೈ ಮುಗಿಯುವ ದೌರ್ಭಾಗ್ಯವೇಕೆ.? ಅಲ್ಲವೇ ಮಿತ್ರರೇ.?'' ಎಂದು ಟ್ವೀಟಿಗರಲ್ಲಿ ಜಗ್ಗೇಶ್ ಪ್ರಶ್ನೆ ಮಾಡಿದ್ದಾರೆ.
ಹೊಸಬರಂತು ಆಶಾಧಾಯಕವಾಗಿ 6ಆರ್ ಭಾರಿಸುತ್ತಿದ್ದಾರೆ!ನಮ್ಮ ಈ ಪಡೆಯೇ ಸಾಕು ಕನ್ನಡಿಗರ ರಂಜಿಸಲು!ಅನ್ಯರಿಗೆ ಸವಲತ್ತು ನೀಡಿ ಕೈಮುಗಿವ ಧೌರ್ಭಾಗ್ಯವೇಕೆ!ಅಲ್ಲವೆ ಮಿತ್ರರೆ:)
— ನವರಸನಾಯಕ ಜಗ್ಗೇಶ್ (@Jaggesh2) October 8, 2017
ಜಗ್ಗೇಶ್ ಅವರ ಈ ಮಾತುಗಳಿಗೆ ನೀವೇನಂತೀರಿ.? ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.