ಅಪಘಾತಕ್ಕೀಡಾದ ಧ್ರುವ ಸರ್ಜಾ ನೆಚ್ಚಿನ ಕಾರಿನ ಬಗ್ಗೆ ಸುದೀಪ್ ಹೇಳಿದ್ದೇನು?
Recommended Video
ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಲಾಯಿಸುತ್ತಿದ್ದ ಕಾರು ಇತ್ತೀಚಿಗೆ ಅಪಘಾತಕ್ಕೀಡಾಗಿತ್ತು. ಬಳ್ಳಾರಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡ ಶೂಟಿಂಗ್ ಮುಗಿಸಿ ಧ್ರುವ ತಂಗಿದ್ದ ಹೋಟೆಲ್ ಗೆ ವಾಪಾಸ್ ಬರುವಾಗ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿ ಚಲಾಯಿಸುತ್ತಿದ್ದ ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಧ್ರುವ ಸರ್ಜಾ ಕಾರು ಅಪಘಾತವಾಗಿದೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಅಭಿಮಾನಿಗಳು ಮತ್ತು ಧ್ರುವ ಸ್ನೇಹಿತರು ಒಮ್ಮೆ ಆತಂಕಕ್ಕೆ ಒಳಗಾಗಿದ್ದರು. ಸೇಫ್ ಆಗಿದ್ದಾರೆ ಎನ್ನುವ ವಿಚಾರ ಗೊತ್ತಾದ ನಂತರ ನಿಟ್ಟುಸಿರುಬಿಟ್ಟಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ನಟ ಕಿಚ್ಚ ಸುದೀಪ್ ಕೂಡ ಧ್ರುವ ಸರ್ಜಾಗೆ ಟ್ವೀಟ್ ಮಾಡಿದ್ದಾರೆ.
"ನೀವು ಸೇಫ್ ಆಗಿದ್ದೀರಾ ಎನ್ನುವ ವಿಷಯ ಗೊತ್ತಾಯಿತು. ಅಪಘಾತವಾದ ಕಾರು ನಿಮ್ಮ ಮೆಚ್ಚಿನ ಕಾರು ಎನ್ನುವುದು ಗೊತ್ತು. ಸುರಕ್ಷಿತವಾಗಿರಿ ಮತ್ತು ಒಳ್ಳೆಯದಾಗಲಿ ಎಂದು ಯಾವಾಗಲು ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ. ಸುದೀಪ್ ಟ್ವೀಟ್ ಗೆ ನಟ ಧ್ರುವ ಸರ್ಜಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

"ನಿಮ್ಮ ಈ ಕಾಳಜಿಗೆ ತುಂಬ ಧನ್ಯವಾದಗಳು ಸರ್" ಎಂದು ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. ಧ್ರುವ ಸರ್ಜಾ ಸದ್ಯ ಪೊಗರು ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಪೊಗರು ಚಿತ್ರದ ಚಿತ್ರೀಕರಣ ಸದ್ಯ ಬಳ್ಳಾರಿಯಲ್ಲಿ ನಡೆಯುತ್ತಿದೆ. ಅಪಘಾತವಾದ ದಿನ ತಡರಾತ್ರವರೆಗೂ ತೋರಣಗಲ್ಲು ಬಳಿ ಚಿತ್ರೀಕರಣ ಮುಗಿಸಿ ವಾಪಾಸ್ ಕುಡ್ತನಿಗೆ ಬರುವ ಮಾರ್ಗದಲ್ಲಿ ಅಪಘಾತ ಸಂಭವಿಸಿದೆ. ಧ್ರುವ ಸರ್ಜಾ ಪ್ರಯಾಣಿಸುತ್ತಿದ್ದ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿಯಾಗಿದೆ. ಈ ಸಮಯದಲ್ಲಿ ಧಅರುವ ಸರ್ಜಾ ಚಲಾಯಿಸುತ್ತಿದ ಕಾರು ಡ್ಯಾಮೇಜ್ ಆಗಿದೆ.


Click it and Unblock the Notifications











