'ಗೋದ್ರಾ' ಮೋಷನ್ ಪೋಸ್ಟರ್: ಅನ್ಯಾಯದ ವಿರುದ್ಧ ಸತೀಶ್ ಹೋರಾಟ
ಸಂಕ್ರಾಂತಿ ಹಬ್ಬದ ವಿಶೇಷವಾಗಿ 'ಗೋದ್ರಾ' ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮೋಷನ್ ಪೋಸ್ಟರ್ ಅನ್ನು ತುಂಬ ಕ್ರಿಯೇಟಿವ್ ಆಗಿ ಮಾಡಿದ್ದಾರೆ.
ಸಿನಿಮಾ ಕಲಾವಿದರ ಪಾತ್ರದ ಪರಿಚಯವನ್ನು ಮೋಷನ್ ಪೋಸ್ಟರ್ ನಲ್ಲಿ ಮಾಡಲಾಗಿದೆ. ಸತೀಶ್ ನೀನಾಸಂ, ಶ್ರದ್ದಾ ಶ್ರೀನಾಥ್, ವಸಿಷ್ಟ ಸಿಂಹ, ಅಚ್ಚುತ್ ಕುಮಾರ್, ರಕ್ಷಾ ಸೊಮಶೇಖರ್ ಮೋಷನ್ ಪೋಸ್ಟರ್ ನಲ್ಲಿ ಬಂದು ಹೋಗುತ್ತಾರೆ. ಹಿನ್ನಲೆ ಸಂಗೀತ ತುಂಬ ಪರಿಣಾಮಕಾರಿಯಾಗಿದೆ. ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ.

''ಭಾರತ ಜಾತ್ಯತೀತವಾಗಿಲ್ಲದಿದ್ದರೆ, ಅದು ಭಾರತವಲ್ಲ'' ಎಂಬ ಅಟಲ್ ಬಿಹಾರಿ ವಾಜಪೇಯಿ ಅವರ ಸಾಲಿನ ಮೂಲಕ ಟೀಸರ್ ಶುರು ಆಗುತ್ತದೆ. ಸಿನಿಮಾದಲ್ಲಿ ಹೋರಾಟಗಾರನಾಗಿ ಸತೀಶ್ ನೀನಾಸಂ ಕಾಣಿಸಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ನಡೆಯುವ ಅನ್ಯಾಯ ವಿರುದ್ಧ ಅವರ ಹೋರಾಟ ಸಿನಿಮಾದಲ್ಲಿ ಸಾಗುತ್ತದೆ.
ಬಹಳ ದಿನಗಳ ನಂತರ ಮತ್ತೆ ಶ್ರದ್ಧಾ ಶ್ರೀನಾಥ್ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪತ್ರಕರ್ತೆಯ ಪಾತ್ರ ಅವರದ್ದಾಗಿದೆ. ಜಾಕಬ್ ಫಿಲ್ಮ್ಸ್ ಮತ್ತು ಲೀಡರ್ ಫಿಲ್ಮ್ ಮೇಕರ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಕೆ ಎಸ್ ನಂದೀಶ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಜನವರಿ 17 ರಂದು ಟೀಸರ್ ಬಿಡುಗಡೆ ಆಗಲಿದೆ.


Click it and Unblock the Notifications











