Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೋಲ್ಡನ್ ಸ್ಟಾರ್ ಗಣೇಶ್ ಗೆ ಮತ್ತೆ ಶುಕ್ರದೆಸೆ ಆರಂಭ
'ಶ್ರಾವಣಿ ಸುಬ್ರಹ್ಮಣ್ಯ' ಸಿನಿಮಾ ಹಾಡೊಂದನ್ನ ಗೋಲ್ಡನ್ ಸ್ಟಾರ್ ಗಣೇಶ್ ಅವರು ಪುನಃ ಪುನಃ ಗುನುಗುತ್ತಿದ್ದಾರೆ. "ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿವೆಯೋ..." ಅನ್ನೋ ಫೀಪ್ ಫುಲ್ ಸಾಂಗ್ ಅದು. ಯಾಕಂದ್ರೆ ಈ ಸಿನಿಮಾದಲ್ಲಿ ಬರೋ ಒಂದು ಸಾಲಿನಂತೆ ಯಾರಿಗಿಲ್ಲಿ ನಾನಿಂದು ಧನ್ಯವಾದ ಹೇಳೋದು ಕಣ್ಣ ಮುಂದೆ ನಿನ್ನನ್ನು ತಂದ ಪುಣ್ಯಕೆ ಅಂತಿದ್ದಾರೆ.
ಗಣೇಶ್ ಕಣ್ಣಮುಂದೆ 'ಶ್ರಾವಣಿ ಸುಬ್ರಹ್ಮಣ್ಯ' ಸಿನಿಮಾ ಬಂದಾಗ ಸ್ವತಃ ಗಣೇಶ್ ರಿಗೂ ಭಯವಿತ್ತು. ಚೆಲುವಿನ ಚಿತ್ತಾರದ ಜೋಡಿ ನಿರೀಕ್ಷೆ ಇರುತ್ತೆ, ಆದರೆ ಸೋತುಬಿಟ್ರೆ ಏನ್ಮಾಡೋದು ಅಂತ. ಈಗ ಗಣೇಶ್-ಅಮೂಲ್ಯಾ ಕಮಾಲ್ ನ 'ಶ್ರಾವಣಿ ಸುಬ್ರಹ್ಮಣ್ಯ' ಸೂಪರ್ ಡೂಪರ್ ಹಿಟ್ಟಾಗಿದೆ. ಗಣೇಶ್ ಗೆ ಕೋಟಿ ಕೊಟ್ಟು ಕಾಲ್ ಶೀಟ್ ಕೇಳೋಕೆ ರಿವರ್ಸ್ ಗೇರ್ ಹಾಕಿದ್ದ ನಿರ್ಮಾಪಕರು ಮತ್ತೆ ಜೆ ಪಿ ನಗರದ ಗಣೇಶ್ ಮನೆಮುಂದೆ ಕಾರ್ ಪಾರ್ಕ್ ಮಾಡಿದ್ದಾರೆ. [ದಿಲ್ ರಂಗೀಲಾ ಚಿತ್ರ ವಿಮರ್ಶೆ]
ಈಗ 'ದಿಲ್ ರಂಗೀಲಾ' ಸಿನಿಮಾದ ಅಸೋಸಿಯೇಟ್ ಡೈರೆಕ್ಟರ್ ಯೋಗಿ ಅನ್ನೋರು ಗಣೇಶ್ ಗೆ ಹೊಸ ಸಿನಿಮಾ ಮಾಡ್ತಿದ್ದಾರೆ. ಯುಗಾದಿಗೆ ಚಿತ್ರದ ಮುಹೂರ್ತ ನಡೆಯಲಿದ್ದು ಹೊಸ ಸಿನಿಮಾದ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ. ಈಗ ಗಣೇಶ್ ಎರಡೆರೆಡು ಸಕ್ಸಸ್ ಪಡ್ಕೋತಿದ್ದಾರೆ ಯಾರಿಗಿಂದು ಧನ್ಯವಾದ ಹೇಳೋದು ನೀವೇ ಹೇಳಿ.