Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೋಲ್ಡನ್ ಸ್ಟಾರ್ ಗಣೇಶ್ ಗೆ ಮತ್ತೆ ಶುಕ್ರದೆಸೆ ಆರಂಭ
'ಶ್ರಾವಣಿ ಸುಬ್ರಹ್ಮಣ್ಯ' ಸಿನಿಮಾ ಹಾಡೊಂದನ್ನ ಗೋಲ್ಡನ್ ಸ್ಟಾರ್ ಗಣೇಶ್ ಅವರು ಪುನಃ ಪುನಃ ಗುನುಗುತ್ತಿದ್ದಾರೆ. "ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿವೆಯೋ..." ಅನ್ನೋ ಫೀಪ್ ಫುಲ್ ಸಾಂಗ್ ಅದು. ಯಾಕಂದ್ರೆ ಈ ಸಿನಿಮಾದಲ್ಲಿ ಬರೋ ಒಂದು ಸಾಲಿನಂತೆ ಯಾರಿಗಿಲ್ಲಿ ನಾನಿಂದು ಧನ್ಯವಾದ ಹೇಳೋದು ಕಣ್ಣ ಮುಂದೆ ನಿನ್ನನ್ನು ತಂದ ಪುಣ್ಯಕೆ ಅಂತಿದ್ದಾರೆ.
ಗಣೇಶ್ ಕಣ್ಣಮುಂದೆ 'ಶ್ರಾವಣಿ ಸುಬ್ರಹ್ಮಣ್ಯ' ಸಿನಿಮಾ ಬಂದಾಗ ಸ್ವತಃ ಗಣೇಶ್ ರಿಗೂ ಭಯವಿತ್ತು. ಚೆಲುವಿನ ಚಿತ್ತಾರದ ಜೋಡಿ ನಿರೀಕ್ಷೆ ಇರುತ್ತೆ, ಆದರೆ ಸೋತುಬಿಟ್ರೆ ಏನ್ಮಾಡೋದು ಅಂತ. ಈಗ ಗಣೇಶ್-ಅಮೂಲ್ಯಾ ಕಮಾಲ್ ನ 'ಶ್ರಾವಣಿ ಸುಬ್ರಹ್ಮಣ್ಯ' ಸೂಪರ್ ಡೂಪರ್ ಹಿಟ್ಟಾಗಿದೆ. ಗಣೇಶ್ ಗೆ ಕೋಟಿ ಕೊಟ್ಟು ಕಾಲ್ ಶೀಟ್ ಕೇಳೋಕೆ ರಿವರ್ಸ್ ಗೇರ್ ಹಾಕಿದ್ದ ನಿರ್ಮಾಪಕರು ಮತ್ತೆ ಜೆ ಪಿ ನಗರದ ಗಣೇಶ್ ಮನೆಮುಂದೆ ಕಾರ್ ಪಾರ್ಕ್ ಮಾಡಿದ್ದಾರೆ. [ದಿಲ್ ರಂಗೀಲಾ ಚಿತ್ರ ವಿಮರ್ಶೆ]
ಈಗ 'ದಿಲ್ ರಂಗೀಲಾ' ಸಿನಿಮಾದ ಅಸೋಸಿಯೇಟ್ ಡೈರೆಕ್ಟರ್ ಯೋಗಿ ಅನ್ನೋರು ಗಣೇಶ್ ಗೆ ಹೊಸ ಸಿನಿಮಾ ಮಾಡ್ತಿದ್ದಾರೆ. ಯುಗಾದಿಗೆ ಚಿತ್ರದ ಮುಹೂರ್ತ ನಡೆಯಲಿದ್ದು ಹೊಸ ಸಿನಿಮಾದ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ. ಈಗ ಗಣೇಶ್ ಎರಡೆರೆಡು ಸಕ್ಸಸ್ ಪಡ್ಕೋತಿದ್ದಾರೆ ಯಾರಿಗಿಂದು ಧನ್ಯವಾದ ಹೇಳೋದು ನೀವೇ ಹೇಳಿ.