Don't Miss!
- News ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ರೀಲ್ ಬಿಟ್ಟರೆ ಜನ ಒಪ್ಪಲ್ಲ: ಡಿ ಕೆ ಸುರೇಶ್ ಹೀಗೆ ಹೇಳಿದ್ದು ಯಾರಿಗೆ?
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್
ಅದಕ್ಕೆ ಅವರು ಬಿಡುಗಡೆಗೆ ಸಿದ್ಧವಾಗಿರುವ ರೋಮಿಯೋ ಚಿತ್ರದ ಪ್ರಚಾರಕ್ಕಾಗಿ ಊರೂರು ಅಲೆಯುತ್ತಿದ್ದಾರೆ. ಸದ್ಯಕ್ಕೆ ಉತ್ತರ ಕರ್ನಾಟಕದ ಕಡೆ ಮುಖಮಾಡಿರುವ ಗಣೇಶ್ ಬಿಸಿಲಿಗೆ ಬೆದರದೆ ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಮೊನ್ನೆ ಗಲ್ಬರ್ಗಾದ ಕಂದೂರ್ ಮಾಲ್ ಗೆ ಹೋಗಿದ್ದರು ಗಣೇಶ್. ಅಲ್ಲಿ ರೋಮಿಯೋ ಟ್ರೈಲರ್ ಬಿಡುಗಡೆ ಮಾಡಿದರು ಗಣೇಶ್.
ಅವರನ್ನು ನೋಡಲು ಸಾವಿರಾರು ಜನರು ನೆರೆದಿದ್ದರು. ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಗಣೇಶ್ ಹಾಡಿದರು, ನರ್ತಿಸಿದರು. ಗಣೇಶ್ ಹಾಡು ನೃತ್ಯಕ್ಕೆ ಅಭಿಮಾನಿಗಳೂ ದನಿಗೂಡಿಸಿದರು ಹಾಗೂ ಹೆಜ್ಜೆಹಾಕಿದರು. ಭಾರೀ ಖುಷಿಗೊಂಡ ಗಣೇಶ್, ರೋಮಿಯೋ ಬಿಡುಗಡೆಯಾದಾಗಲೂ ಇದೇ ಪ್ರೀತಿ ಇರಲಿ ಎಂದರು.
ಮೈಸೂರು ಹಾಗೂ ಹುಬ್ಬಳ್ಳಿಗೂ ಪ್ರಯಾಣ ಬೆಳೆಸಿದ್ದರು ಗಣೇಶ್. ಅಲ್ಲೂ ಗಣೇಶ್ ನೋಡಲು ಸಾವಿರಾರು ಅಭಿಮಾನಿಗಳು ನೆರೆದಿದ್ದರು. ರೋಮಿಯೋ ಚಿತ್ರದ ಟ್ರೈಲರ್ ಹಾಗೂ ಅದು ತುಂಬಾ ಭಿನ್ನವಾಗಿದೆ ಎಂದ ಗಣೇಶ್ ಮಾತಿಗೆ ಜನ ಬೆರಗಾಗಿ ನೋಡಿದರು, ಚಪ್ಪಾಳೆ ತಟ್ಟಿದರು. ಗಣೇಶ್ ಅಲ್ಲೂ ಖುಷಿಯಾದರು, ಇನ್ನೊಂದು ಕಡೆ ಹೊರಟು ನಿಂತರು.
ಗಣೇಶ್ ಯಾಕೆ ಹೀಗೆ ಮಾಡುತ್ತಿದ್ದಾರೆ ಎನ್ನುವುದು ತುಂಬಾ ಜನರ ಪ್ರಶ್ನೆ. ಏಕೆಂದರೆ ಮುಂಗಾರು ಮಳೆಗಿಂತ ಮೊದಲು ಈಗಿನಷ್ಟು ಗಣೇಶ್ ಪ್ರಖ್ಯಾತಿ ಹೊಂದಿರಲಿಲ್ಲ. ಆದರೆ 'ಕಾಮಿಡಿ ಟೈಮ್' ಕಾರ್ಯಕ್ರಮದ ಮೂಲಕ ಕರ್ನಾಟಕದಾದ್ಯಂತ ಪರಿಚಿತರಾಗಿದ್ದರು ಅಷ್ಟೇ. ಆಗ ಬಂದ ಗಣೇಶ್ ಮೊಟ್ಟ ಮೊದಲ ಚಿತ್ರ 'ಚೆಲ್ಲಾಟ' 125 ದಿನಗಳ ಪ್ರದರ್ಶನ ಕಂಡಿತ್ತು.
ಆನಂತರ ಬಂದಿದ್ದೇ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಯೋಗರಾಜ್ ಭಟ್ 'ಮುಂಗಾರು ಮಳೆ. ನಂತರ ಬಂದ ಗಣೇಶ್ ಚಿತ್ರಗಳು ಇನ್ನೊಂದು ಮುಂಗಾರು ಮಳೆ ಎನ್ನುವಂತೆ ಓಡಲಿಲ್ಲ. ಭಟ್ಟರ ಇನ್ಯಾವ ಚಿತ್ರವೂ ಕೂಡ ಮುಂಗಾರು ಮಳೆ ಚಿತ್ರದಂತೆ ದಾಖಲೆ ಬರೆಯಲಿಲ್ಲ. ಹಾಗಾದರೆ ಜನಪ್ರಿಯತೆಗೂ, ಚಿತ್ರದ ಯಶಸ್ಸಿಗೂ ಸಂಬಂಧವಿದೆಯೇ ಎಂಬುದನ್ನು ಗಣೇಶ್ ಯೋಚಿಸಬೇಕಿದೆ.
ಗಣೇಶ್
ಮಾತು
ಹಾಗಿರಲಿ,
ದುನಿಯಾ
ವಿಜಯ್
'ದುನಿಯಾ'
ಚಿತ್ರ
ಬರುವುದಕ್ಕೂ
ಮೊದಲು
ಖ್ಯಾತ
ನಟರಾಗಿರಲಿಲ್ಲ.
ಆದರೆ
ದುನಿಯಾ
ಸೂಪರ್
ಹಿಟ್
ಆಗಿದ್ದೇ
ತಡ,
ವಿಜಯ್
ಸ್ಟಾರ್
ಆದರು.
ಅವರು
ಕರ್ನಾಟಕದ
ತುಂಬೆಲ್ಲಾ
ಮನೆಮಾತಾದರು.
ಆದರೆ
ನಂತರ
ಬಂದ
ದುನಿಯಾ
ವಿಜಯ್
ಚಿತ್ರಗಳಾವುದೂ
ದುನಿಯಾದಷ್ಟು
ಹಿಟ್
ಆಗಲೇ
ಇಲ್ಲ.
ಮುಂದಿನ
ಪುಟ
ನೋಡಿ...