twitter
    For Quick Alerts
    ALLOW NOTIFICATIONS  
    For Daily Alerts

    ಕನಸು ನನಸಾಯ್ತು : ತಾಯಿ ಮಗನ ಕಣ್ಣಲ್ಲಿ ನೀರು ಬಂತು

    |

    ಸಿನಿಮಾಗೆ ಅದೆಂಥ ಆಕರ್ಷಣೆಯ ಶಕ್ತಿ ಇದೆಯೋ ಗೊತ್ತಿಲ್ಲ. ಅಯಸ್ಕಾಂತ ಕಬ್ಬಿಣವನ್ನ ತನ್ನ ಕಡೆ ಎಳೆದುಕೊಳ್ಳುವ ಹಾಗೆ, ಸಿನಿಮಾ ಎಲ್ಲರನ್ನು ತನ್ನ ಕಡೆಗೆ ಸೆಳೆದು ಬಿಡುತ್ತದೆ.

    ಇದೆ ರೀತಿ ಹಾವೇರಿಯ ಒಬ್ಬ ಹುಡುಗ ಸಿನಿಮಾ ಕನಸು ಕಾಣುತ್ತಿದ್ದ. ತನ್ನ ಕನಸು ನನಸು ಮಾಡಲು ಬೆಂಗಳೂರಿಗೆ ಬಂದ. ಮೊದಲು ಅಲ್ಲಿ ಇಲ್ಲಿ ಕೆಲಸ ಮಾಡಲು ಶುರು ಮಾಡಿ., ಸಾಕಷ್ಟು ನಿರ್ದೇಶಕ ಮನೆಯ ಬಾಗಿಲು ತಟ್ಟಿದ. ಆದರೆ, ಯಾವುದು ಪ್ರಯೋಜನ ಆಗಲಿಲ್ಲ.

    2018ರ ಅತ್ಯುತ್ತಮ ಕನ್ನಡ ಸಿನಿಮಾ ಯಾವುದು? 2018ರ ಅತ್ಯುತ್ತಮ ಕನ್ನಡ ಸಿನಿಮಾ ಯಾವುದು?

    ಕೊನೆಗೆ ಆ ಹುಡುಗ ಸುದ್ದಿವಾಹಿನಿಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸಕ್ಕೆ ಸೇರಿದ. ಆಗ ಸಿನಿಮಾ ಆತನ ಕೈ ಅಳತೆ ದೂರದಲ್ಲಿ ಇತ್ತು. ನಂತರ, ಎಷ್ಟೋ ಕಷ್ಟ ಪಟ್ಟು ಈಗ ಹೀರೋ ಆಗಿದ್ದಾನೆ. ಇವತ್ತು ಗಾಂಧಿನಗರದಲ್ಲಿ ತನ್ನ ಕಟ್ ಔಟ್ ಹಾಕಿಸಿಕೊಳ್ಳಲು ಸಿದ್ಧವಾಗಿದ್ದಾನೆ. ಅಂದಹಾಗೆ, ಆ ಹುಡುಗ ಹೆಸರು ಕಿರಣ್.

    ಮೊದಲ ಸಿನಿಮಾ ಲಾಂಚ್

    ಮೊದಲ ಸಿನಿಮಾ ಲಾಂಚ್

    ಕನ್ನಡದ ಸುದ್ದಿ ವಾಹಿನಿಯಲ್ಲಿ ರಿಪೋಟರ್ ಆಗಿ ಕೆಲಸ ಮಾಡುತ್ತಿದ್ದ ಕಿರಣ್ ಇಂದು ನಾಯಕ ನಟನಾಗಿದ್ದಾರೆ. ಅವರ ಮೊದಲ ಸಿನಿಮಾ 'ಗೋರಿ' ನಿನ್ನೆ ಲಾಂಚ್ ಆಗಿದೆ. ಸಂಪಂಗಿರಾಮ ನಗರದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಕಿರಣ್ ತಾಯಿ ಕೂಡ ಭಾಗಿಯಾಗಿದ್ದು, ಮಗ ಹೀರೋ ಆಗಿದ್ದು, ಕಂಡು ಅವರ ಕಣ್ಣೀರು ಹಾಕಿದರು. ಅಮ್ಮನ ಆನಂದ ನೋಡಿ ಕಿರಣ್ ಕಣ್ಣು ಕೂಡ ವದ್ದೆಯಾಯ್ತು.

    ಈ ವರ್ಷ ನಿರ್ದೇಶಕರ ಮ್ಯಾಜಿಕ್ ಹೇಗಿತ್ತು, ಯಾರು ಬೆಸ್ಟ್ ? ಈ ವರ್ಷ ನಿರ್ದೇಶಕರ ಮ್ಯಾಜಿಕ್ ಹೇಗಿತ್ತು, ಯಾರು ಬೆಸ್ಟ್ ?

    'ಗೋರಿ' ಕಟ್ಟಿದ ನಿರ್ದೇಶಕ

    'ಗೋರಿ' ಕಟ್ಟಿದ ನಿರ್ದೇಶಕ

    ಒಂದು ಕಡೆ ನಾಯಕನ ಕಥೆ ಇದಾದರೆ, ಚಿತ್ರದ ನಿರ್ದೇಶಕ ಗೋಪಾಲ ಕೃಷ್ಣ ಕೂಡ ತುಂಬ ಕಷ್ಟ ಪಟ್ಟಿದ್ದಾರೆ. ಅವರ ತಂದೆ ಮನೆ ಕಟ್ಟುವ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ, ಸಿನಿಮಾವೇ ಜೀವನ ಎಂದು ಭಾವಿಸಿದ್ದ ಗೋಪಾಲ್ ಇಂದು ಡೈರೆಕ್ಟರ್ ಆಗಿದ್ದಾರೆ. ಅವರ ಮೊದಲ ಸಿನಿಮಾಗೆ ಜಿತೇಂದ್ರ ಬಂಡವಾಳ ಹಾಕುತ್ತಿದ್ದಾರೆ.

    ಅಭಿಮಾನಿಗೆ ಗಣೇಶ್ ಶುಭಾಶಯ

    ಅಭಿಮಾನಿಗೆ ಗಣೇಶ್ ಶುಭಾಶಯ

    ಕಿರಣ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿಮಾನಿ. ಹೀಗಿರುವಾಗ, ಗಣೇಶ್ ತಮ್ಮ ಅಭಿಮಾನಿಯ ಸಿನಿಮಾಗೆ ಶುಭ ಹಾರೈಸಿದ್ರು. 'ಕಿರಣ್ ನಮ್ಮ ಹುಡುಗ ಅವನಿಗೆ ಒಳ್ಳೆಯದಾಗಲಿ' ಎಂದರು. ಉಳಿದಂತೆ, ಮುಹೂರ್ತ ಕಾರ್ಯಕ್ರಮಕ್ಕೆ ನಿರ್ದೇಶಕ ಬಹದ್ದೂರ್ ಚೇತನ್ ಹಾಗೂ ಮಹೇಶ್ ಕುಮಾರ್ ಭಾಗಿಯಾಗಿದ್ದರು.

    ಮಾನವೀಯತೆ ದೊಡ್ಡದು

    ಮಾನವೀಯತೆ ದೊಡ್ಡದು

    'ಗೋರಿ' ಸಿನಿಮಾದ ಮೂಲಕ ಮಾನವೀಯತೆ ದೊಡ್ಡದು ಎಂಬ ಸಂದೇಶವನ್ನ ಚಿತ್ರತಂಡ ಹೇಳುತ್ತಿದೆ. ಜಾತಿ ಧರ್ಮಕ್ಕಿಂತ ಸ್ನೇಹ, ಪ್ರೀತಿ ದೊಡ್ಡದು. ಸ್ನೇಹ ಪ್ರೀತಿಗಿಂತ ಮಾನವೀಯತೆ ದೊಡ್ಡದು ಎಂಬುದರ ಮೇಲೆ ಕಥೆ ಹೆಣೆಯಲಾಗಿದೆ. ನಾಯಕಿಯಾಗಿ ಶ್ವೇತ, ನಟ ಅಮಿತ್ ನಟಿಸುತ್ತಿದ್ದಾರೆ. ಜನವರಿಯಲ್ಲಿ ಚಿತ್ರದ ಶೂಟಿಂಗ್ ಶುರು ಆಗುತ್ತಿದೆ.

    English summary
    Kannada actor Kiran's 'Goori' kannada movie launched.
    Friday, December 14, 2018, 14:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X