Don't Miss!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- News ಮಳೆ.. ಮಳೆ.. ಅಲ್ಲಲ್ಲ ಮುಂದಿನ 1 ವಾರ ಬೆಂಗಳೂರಲ್ಲಿ ಭಾರಿ ಬಿಸಿಲು!
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರೀಕರಣ ಬೇಡ, ಡಬ್ಬಿಂಗ್ ಮಾಡಿಕೊಳ್ಳಿ: ಚಿತ್ರರಂಗಕ್ಕೆ ಸರ್ಕಾರ ಸೂಚನೆ
ಚಿತ್ರೀಕರಣ ಬಂದ್ ಆಗಿ ಒಂದೂವರೆ ತಿಂಗಳಾಯಿತು. ನಿರ್ಮಾಪಕರು, ಚಿತ್ರೀಕರಣ ನಂಬಿಕೊಂಡಿರುವ ಸಣ್ಣ-ಪುಟ್ಟ ಕಲಾವಿದರು, ತಂತ್ರಜ್ಞರು, ದಿನಗೂಲಿ ನೌಕರರು ಆಕಾಶ ನೋಡುವಂತಾಗಿದೆ.
Recommended Video
ಹಾಗಾಗಿ ಚಿತ್ರರಂಗದ ಪ್ರಮುಖರು ನಿನ್ನೆ ಸಿಎಂ ಅವರನ್ನು ಭೇಟಿ ಮಾಡಿ, ಚಿತ್ರೀಕರಣ ಪುನರ್ ಆರಂಭಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ್, ಚಿತ್ರೀಕರಣ ಮಾಡುವುದು ಬೇಡ, ಬೇಕಾದರೆ ಡಬ್ಬಿಂಗ್ ಮಾಡಿಕೊಳ್ಳಿ' ಎಂದು ಹೇಳಿದ್ದಾರೆ.
ಧಾರಾವಾಹಿ ಚಿತ್ರೀಕರಣಕ್ಕೆ ಅವಕಾಶ ಸಿಕ್ಕ ಬೆನ್ನಲ್ಲೇ ತಮಗೂ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಿನಿಮಾ ಮಂದಿಗೆ ಭಾರಿ ನಿರಾಸೆಯೇ ಆಗಿದೆ.
ಆರ್.ಅಶೋಕ್ ಹೇಳಿದ್ದು ಹಾಗಲ್ಲ
ಬೇರೆ ಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ಎಂಬರ್ಥದಲ್ಲಿ ಸಚಿವ ಆರ್.ಅಶೋಕ್ 'ಡಬ್ಬಿಂಗ್ ಮಾಡಿಕೊಳ್ಳಿ' ಎಂದು ಹೇಳಿಲ್ಲ. ಬದಲಿಗೆ ಚಿತ್ರೀಕರಣ ಆಗಿರುವ ಸಿನಿಮಾಗಳ ಡಬ್ಬಿಂಗ್ ಅಥವಾ ಮಾತಿನ ಭಾಗ ಸೇರಿಸುವ ಕಾರ್ಯ ಮಾಡಿಕೊಳ್ಳಿ ಎಂದು.
ಎಡಿಟಿಂಗ್-ಡಬ್ಬಿಂಗ್ ಮಾಡಿಕೊಳ್ಳಬಹುದು
ಚಿತ್ರೀಕರಣ ಬಿಟ್ಟು ಇತರೆ ತಾಂತ್ರಿಕ ಕಾರ್ಯಗಳಾದ ಎಡಿಟಿಂಗ್, ಡಬ್ಬಿಂಗ್ ಬೇಕಾದರೆ ಮಾಡಿಕೊಳ್ಳಿ, ಅದನ್ನೂ ಸಹ ಕೇವಲ 5-6 ಮಂದಿ ಮಾತ್ರ ಇರುವಂತೆ ನೋಡಿಕೊಳ್ಳಿ, ಸೀಮಿತ ಜನರನ್ನು ಮಾತ್ರವೇ ಬಳಸಿ ಕೆಲಸ ಮಾಡಿ ಎಂದು ಆರ್.ಅಶೋಕ್ ಚಿತ್ರರಂಗಕ್ಕೆ ನಿರ್ದೇಶನ ನೀಡಿದ್ದಾರೆ.
ಮನವಿ ಸಲ್ಲಿಸಿದ್ದ ಚಿತ್ರ ನಿರ್ಮಾಪಕರು
ನಿನ್ನೆ ಚಲನಚಿತ್ರಗಳ ನಿರ್ಮಾಪಕರು ಸಿಎಂ ಅವರನ್ನು ಭೇಟಿ ಮಾಡಿ, ಚಿತ್ರರಂಗದ ಸಂಕಷ್ಟಗಳು, ಚಿತ್ರರಂಗದ ದಿನಗೂಲಿ ನೌಕರರು, ಸಿನಿಮಾ ಕಾರ್ಮಿಕರ ಸಂಕಷ್ಟಗಳು, ನಿರ್ಮಾಪಕರ ಸಂಕಷ್ಟಗಳನ್ನು ವಿವರಿಸಿ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೇಳಿದ್ದರು.
ಧಾರಾವಾಹಿಗಳಿಗೆ ಸರ್ಕಾರ ಅನುಮತಿ ನೀಡಿದೆ
ಧಾರಾವಾಹಿ ಚಿತ್ರೀಕರಣ ಮಾಡಲು ಕೆಲವು ದಿನಗಳ ಹಿಂದಷ್ಟೆ ಸರ್ಕಾರ ಅನುಮತಿ ನೀಡಿದೆ. ಸೀಮಿತ ಜನರನ್ನು ಬಳಸಿಕೊಂಡು ಮೇ 21 ರಿಂದ ಧಾರಾವಾಹಿ ಚಿತ್ರೀಕರಣ ಪ್ರಾರಂಭ ಮಾಡಲಿವೆ. ಒಳಾಂಗಣದಲ್ಲಿ ಮಾತ್ರವೇ ಚಿತ್ರೀಕರಣ ಮಾಡುವಂತೆ ಷರತ್ತು ವಿಧಿಸಲಾಗಿದೆ. ಆದರೆ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಿಲ್ಲ.