twitter
    For Quick Alerts
    ALLOW NOTIFICATIONS  
    For Daily Alerts

    ವಿನಯ್ ರಾಜ್ ಕುಮಾರ್ ಗಾಗಿ ಗಾಜನೂರಿಗೆ ಬಂದ ಐಯ್ಯರ್ ಬೆಡಗಿ !

    By Pavithra
    |

    Recommended Video

    ಡಾ.ರಾಜ್ ಊರಿಗೆ ಬಂದ ವಿನಯ್ ರಾಜ್‌ಕುಮಾರ್ ಬೆಡಗಿ..! | Filmibeat Kannada

    ವಿನಯ್ ರಾಜ್ ಕುಮಾರ್ ಸದ್ಯ ಬೆಂಗಳೂರಿಗೆ ಬಾಯ್ ಹೇಳಿ ಗಾಜನೂರು ಸೇರಿಕೊಂಡಿದ್ದಾರೆ. ಕೇವಲ ವಿನಯ್ ಮಾತ್ರವಲ್ಲದೆ ರಾಘವೇಂದ್ರ ರಾಜ್ ಕುಮಾರ್ ಹಾಗೂ ಮಂಗಳ ರಾಘವೇಂದ್ರ ಕೂಡ ಒಂದು ವಾರದಿಂದ ಗಾಜನೂರಿನಲ್ಲಿ ಬೀಡು ಬಿಟ್ಟಿದ್ದಾರೆ.

    ರಾಘವೇಂದ್ರ ರಾಜ್ ಕುಮಾರ್ ಫ್ಯಾಮಿಲಿ ಬೆಂಗಳೂರು ಬಿಟ್ಟು ಗಾಜನೂರು ಸೇರಿದ್ಯಾಕೆ ಅಂತ ಯೋಚನೆ ಮಾಡಬೇಡಿ. ವಿನಯ್ ರಾಜ್ ಕುಮಾರ್ ಅಭಿನಯದ 'ಗ್ರಾಮಾಯಣ' ಸಿನಿಮಾದ ಚಿತ್ರೀಕರಣಕ್ಕಾಗಿ ಇಡೀ ಕುಟುಂಬ ಗಾಜನೂರಿನಲ್ಲಿ ಉಳಿದುಕೊಂಡಿದೆ.

    Gramayana film shooting is going on in Gajanur

    ಅಪ್ಪ ಅಮ್ಮನ ಪ್ರೀತಿ ಬಿಟ್ಟು ಗ್ರಾಮಕ್ಕೆ ಹೊರಟ ವಿನಯ್ ರಾಜ್ ಕುಮಾರ್ಅಪ್ಪ ಅಮ್ಮನ ಪ್ರೀತಿ ಬಿಟ್ಟು ಗ್ರಾಮಕ್ಕೆ ಹೊರಟ ವಿನಯ್ ರಾಜ್ ಕುಮಾರ್

    ಇನ್ನು ಗ್ರಾಮಾಯಣ ಸಿನಿಮಾಗೆ ನಾಯಕಿಯಾಗಿ ಅಮೃತ ಐಯ್ಯರ್ ಎನ್ನುವ ನಾಯಕಿ ಆಯ್ಕೆ ಆಗಿದ್ದಾರೆ. ಅಮೃತ ಐಯ್ಯರ್ ಈಗಾಗಲೇ ತಮಿಳಿನ ಚಿತ್ರದಲ್ಲಿ ಅಭಿನಯ ಮಾಡಿದ್ದು 'ಗ್ರಾಮಾಯಣ'ದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡುತ್ತಿದ್ದಾರೆ.

    Gramayana film shooting is going on in Gajanur

    ಸದ್ಯ ಗಾಜನೂರಿನಲ್ಲಿ ಚಿತ್ರದ ಟೀಸರ್ ಚಿತ್ರೀಕರಣ ಮಾಡಿ ಮುಗಿಸಿದ್ದು ಚಿತ್ರಕ್ಕೆ ದೇವನೂರು ಚಂದ್ರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎನ್ ಆರ್ ಮೂರ್ತಿ ಗ್ರಾಮಾಯಣ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಿನಯ್ ರಾಜ್ ಕುಮಾರ್ ಲುಕ್ ರಿವಿಲ್ ಮಾಡದ ಚಿತ್ರತಂಡ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರದ ಟೀಸರ್ ರಿಲೀಸ್ ಮಾಡಲಿದೆ.

    English summary
    The shooting of the Kannada Gramayana film shooting is going on in Gajanur. Amrutha Iyer is the heroine of the film.
    Wednesday, August 8, 2018, 14:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X