Don't Miss!
- News ಹಿಂದುತ್ವ ಪ್ರತಿಪಾದಕರಿಗೆ ಕೈತಪ್ಪಿದ ಬಿಜೆಪಿ ಟಿಕೆಟ್: ಕಾರಣ ಏನು?
- Finance ಭಾರತದೊಂದಿಗೆ ಮತ್ತೆ ವ್ಯಾಪಾರ ಸಂಬಂಧ ಪುನರಾರಂಭಿಸಲು ಪಾಕಿಸ್ತಾನ ಉತ್ಸುಕ
- Sports IPL 2024 Schedule: ಐಪಿಎಲ್ ಉಳಿದ ಪಂದ್ಯಗಳ 2ನೇ ವೇಳಾಪಟ್ಟಿ ಪ್ರಕಟ; ಚೆನ್ನೈನಲ್ಲಿ ಫೈನಲ್ ಪಂದ್ಯ
- Technology Xiaomi: ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್ ಲಾಂಚ್! ಏರ್ ಕಂಡಕ್ಷನ್ ತಂತ್ರಜ್ಞಾನ.. ಬೆಲೆ ಎಷ್ಟು?
- Automobiles ಸುರಕ್ಷಿತ ಕಾರುಗಳಿವು.. ಇವುಗಳಿಗೆ ಸರಿ ಸಾಟಿಯೇ ಇಲ್ಲ: ಭರಪೂರ ಸೇಫ್ಟಿ ಫೀಚರ್ಸ್
- Lifestyle ಬಿಳಿ ಮತ್ತು ಕಂದು ಬಣ್ಣದ ಮೊಟ್ಟೆಯಲ್ಲಿರುವ ವ್ಯತ್ಯಾಸವೇನು.? ಯಾವುದು ಉತ್ತಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಗುಡ್ಡದ ಭೂತ' ಖ್ಯಾತಿಯ ಉದ್ಯಾವರ ಮಾಧವ ಆಚಾರ್ಯ ನಿಧನ
ಕನ್ನಡದ ಹಿರಿಯ ರಂಗಕರ್ಮಿ, ಕಿರುತೆರೆ ನಟ ಉದ್ಯಾವರ ಮಾಧವ ಆಚಾರ್ಯ ಅವರು ಇಂದು ನಿಧನರಾಗಿದ್ದಾರೆ.
79 ವರ್ಷದ ಉದ್ಯಾವರ ಮಾಧವ ಆಚಾರ್ಯ ಅವರು ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಉಡುಪಿ ಮೂಲದ ಆಚಾರ್ಯ ಅವರು ಐವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಬೆಂಗಾಲಿ ನಟ ಮೊನು ಮುಖರ್ಜಿ ನಿಧನ: ಮಮತಾ ಬ್ಯಾನರ್ಜಿ ಸಂತಾಪ
ಕಥೆಗಾರರಾಗಿ, ಕವಿಯಾಗಿ, ನಿರ್ದೇಶಕರಾಗಿ, ನಟರಾಗಿ ಮನರಂಜನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿ ಗುಡ್ಡದ ಭೂತದಲ್ಲಿ ನಟಿಸಿದ್ದರು. ದೇಶ-ವಿದೇಶಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ.
ರಂಗಭೂಮಿಗೆ ಉದ್ಯಾವರ ಮಾಧವ ಆಚಾರ್ಯ ಅವರ ಕೊಡುಗೆ ಗೌರವಿಸಿದ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇದರ ಜೊತೆಗೆ ಹಲವು ಪ್ರಶಸ್ತಿ ಸಹ ಲಭಿಸಿದೆ.
Recommended Video
ಇನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ, ಉಂದಾಪುರದ ಬಿಪಿ ಶೆಟ್ಟಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.