ನಟನೆ ಶುರು ಮಾಡಿದ ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ
'ಎಲ್ಲುಂಟು ಒಲವಿರದ ಜಾಗ..' ಎಂದು ಬರೆದ ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ ಇತ್ತೀಚಿಗಷ್ಟೆ ತಮ್ಮ ನಿರ್ದೇಶಕದ ಸಿನಿಮಾ ಮೊದಲ ಸಿನಿಮಾವನ್ನು ಶುರು ಮಾಡಿದ್ದರು. 'ಹಸಿರು ರಿಬ್ಬನ್' ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದ ಎಚ್ಚೆಸ್ವಿ ಆ ಸಿನಿಮಾದ ಬಿಡುಗಡೆಗೆ ಮೊದಲೇ ಮತ್ತೊಂದು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ.
'ಅಮೃತ ವಾಹಿನಿ' ಎಂಬ ಹೊಸ ಚಿತ್ರದಲ್ಲಿ ಈಗ ಎಚ್.ಎಸ್.ವೆಂಕಟೇಶ್ ಮೂರ್ತಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ನಿನ್ನೆ (ಮೇ 6) ರಂದು ನೆರವೇರಿದೆ. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಎಚ್ಚೆಸ್ವಿ ನಟಿಸುತ್ತಿದ್ದಾರೆ. ನರೇಂದ್ರ ಬಾಬು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಅವರು 'ಪಲ್ಲಕ್ಕಿ', 'ಓ ಗುಲಾಬಿಯೇ' ಹಾಗೂ 'ಯುವ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

ಎಚ್ಚೆಸ್ವಿ ಅವರೊಂದಿಗೆ ವೈದ್ಯ ಶಿವಮೊಗ್ಗ, ಸ್ವಸ್ತಿಕ್ ಶಂಕರ್, ಜಯಪ್ರಕಾಶ್, ವತ್ಸಲಾ ಮೋಹನ್ ನಟಿಸಿದ್ದಾರೆ. ಸಂಪತ್ ಕುಮಾರ್ ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗಿರಿಧರ್ ದಿವಾನ್ ಛಾಯಾಗ್ರಹಣ ಹಾಗೂ ಮೋಹನ್ ಸಂಗೀತ ಚಿತ್ರದಲ್ಲಿದೆ. ರಾಘವೇಂದ್ರ ಪಾಟೀಲ್ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ. ಪ್ರಸ್ತುತ ಜೀವನ ಶೈಲಿಗೆ ಹತ್ತಿರವಾದ ಕತೆ ಈ ಚಿತ್ರದಲ್ಲಿ ಇದೆ.


Click it and Unblock the Notifications











