ಹಂಸಲೇಖರಿಗೆ ಬೈಪಾಸ್ ಸರ್ಜರಿ
ಬೆಂಗಳೂರು : ಹೃದಯದ ತೊಂದರೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖ ಈಗ ಆರೋಗ್ಯವಾಗಿದ್ದಾರೆ. ಬೆಂಗಳೂರಿನ ವೋಕ್ಹಾರ್ಟ್ನಲ್ಲಿ ಅವರಿಗೆ ಶನಿವಾರ ಬೈಪಾಸ್ ಸರ್ಜರಿ ಮಾಡಲಾಗಿತ್ತು.
ವಿಶ್ವ ಹೃದಯ ದಿನದ ಮುನ್ನಾ ದಿನ ಶಸ್ತ್ರ ಚಿಕಿತ್ಸೆಗೆ ಒಳಗಾದ ಹಂಸಲೇಖ ಅವರು ಗುಣಮುಖರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ. ಶನಿವಾರ ಬೆಳಗ್ಗೆ ಅಸ್ವಸ್ಥರಾದ ಅವರನ್ನು ವೋಕ್ಹಾರ್ಟ್ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಹಂಸಲೇಖ ಅವರ ಕುಟುಂಬದ ಮೂಲಗಳು ತಿಳಿಸಿವೆ.(ಇನ್ಫೋ ವಾರ್ತೆ)
English summary
Kannada Edition of Oneindia- Hamsalekha has been hospitalised


Click it and Unblock the Notifications