Don't Miss!
- News ಅಧಿಕಾರಕ್ಕೆ ಬಂದ 2-3 ತಿಂಗಳಲ್ಲಿ ಕಾಡುಗೊಲ್ಲರಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ-ಕುಮಾರಸ್ವಾಮಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶಕುಂತ್ಲೆ' ಬಳಿಕ ಮತ್ತೊಂದು ಐತಿಹಾಸಿಕ ಚಿತ್ರದತ್ತ ಹಂಸಲೇಖ ಒಲವು
Recommended Video
ಒಂದು ಕಡೆ ಸರಿಗಮಪ ಕಾರ್ಯಕ್ರಮದ ಮಹಾಗುರು ಆಗಿರುವ ಸಂಗೀತ ನಿರ್ದೇಶಕ ಹಂಸಲೇಖ ಇನ್ನೊಂದು ಕಡೆ ಸಿನಿಮಾ ನಿರ್ದೇಶನವನ್ನು ಕೂಡ ಶುರು ಮಾಡಿದ್ದರು. ನಾದಬ್ರಹ್ಮ 'ಶಕುಂತ್ಲೆ' ಸಿನಿಮಾ ಮಾಡುವ ವಿಚಾರ ಈ ಹಿಂದೆಯೇ ಸುದ್ದಿ ಆಗಿತ್ತು. ಆದರೆ ವಿಶೇಷ ಎಂದರೆ, ಈ ಚಿತ್ರದ ಬಳಿಕ ಹಂಸಲೇಖ ಮತ್ತೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರಂತೆ.
ಹಂಸಲೇಖ ಅವರನ್ನು ಮಾಂಸದ ಮುದ್ದೆ ಎಂದು ದೂರ ತಳ್ಳಿದ್ದರು!
ಐತಿಹಾಸಿಕ ಸಿನಿಮಾದತ್ತ ಒಲವು ಹೊಂದಿರುವ ಹಂಸಲೇಖ ಸದ್ಯ 'ಗಂಡುಗಲಿ ವೀರ ಮದಕರಿ ನಾಯಕ' ಹಾಗೂ 'ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ' ಬಗ್ಗೆ ಹೆಚ್ಚಿನ ವಿವರಗಳನ್ನು ಕಲೆ ಹಾಕುತ್ತಿದ್ದಾರಂತೆ. 'ಶಕುಂತ್ಲೆ' ನಂತರ ಇವುಗಳಲ್ಲಿ ಯಾವುದಾದರು ಒಂದು ಸಿನಿಮಾವನ್ನು ಅವರು ಮಾಡುವ ಸಾಧ್ಯತೆ ಇದೆ. ಸದ್ಯ ಸಿನಿಮಾಗೆ ಬೇಕಾದ ತಯಾರಿಯಲ್ಲಿ ಅವರು ನಿರತರಾಗಿದ್ದು, ಈ ವಿಷಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರಂತೆ.
ಈ ವರ್ಷದ ಹಂಸಲೇಖ ಅವರ ಹುಟ್ಟುಹಬ್ಬದ ದಿನ ಅಂದರೆ ಜೂನ್ 23ಕ್ಕೆ ಹೊಸ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಲಿದೆ. ಕನ್ನಡದಲ್ಲಿ ಈಗ ಒಂದು ಕಡೆ ಪೌರಾಣಿಕ ಸಿನಿಮಾಗಳು ಮತ್ತೆ ಶುರು ಆಗಿದ್ದರೆ, ಇತ್ತ ಐತಿಹಾಸಿಕ ಚಿತ್ರಗಳು ಸಹ ಮರು ಜೀವ ಪಡೆದುಕೊಳ್ಳುತ್ತಿವೆ.
ಸರಿಗಮಪ ಕಾರ್ಯಕ್ರಮ ಇದೇ ಶನಿವಾರ ಮುಗಿಯಲಿದ್ದು, ಆ ನಂತರ ಹಂಸಲೇಖ ತಮ್ಮ ಸಂಪೂರ್ಣ ಸಮಯವನ್ನು 'ಶಕುಂತ್ಲೆ' ಸಿನಿಮಾಗೆ ಮೀಸಲಿಡಲಿದ್ದಾರೆ. ಈ ಸಿನಿಮಾವನ್ನು ಕನ್ನಡ ಮತ್ತು ಹಿಂದಿ ಎರಡು ಭಾಷೆಗಳಲ್ಲಿ ಮಾಡುವ ಆಲೋಚನೆ ಅವರದ್ದಾಗಿದೆ.