Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮ್ಮನೇ ಮಹಾಗುರು ಎನ್ನುತ್ತಾರೆ ನಾದಬ್ರಹ್ಮ ಹಂಸಲೇಖ
ಅಮ್ಮನ ಕುರಿತಾದ ಹಾಡುಗಳು ಎಂದೊಡನೆ "ಅಮ್ಮಯ್ಯ ಅಮ್ಮಯ್ಯ ಬಾರೇ.." ಎನ್ನುವ ಚಿತ್ರಗೀತೆ ಮುಂದಿನ ಪಂಕ್ತಿಯಲ್ಲಿ ಬಂದು ನಿಲ್ಲುತ್ತದೆ. ಆ ಹಾಡಿನ ಸೃಷ್ಟಿಕರ್ತೃ ಹಂಸಲೇಖ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅಮ್ಮನ ಬಗ್ಗೆ ಅವರು ಆಡುವ ಮಾತುಗಳು ತುಂಬ ಔಚಿತ್ಯ ಪೂರ್ಣವಾಗಿರುವಂಥದ್ದು.
'ಫಿಲ್ಮೀಬೀಟ್ ಕನ್ನಡ' ಜೊತೆಗೆ ಅವರು ಹಂಚಿಕೊಂಡಂಥ ಸಂಗತಿಗಳು ಅಷ್ಟೇ ಪ್ರಾಮುಖ್ಯವಾದವು ಕೂಡ. "ನನ್ನನ್ನು ರಿಯಾಲಿಟಿ ಶೋನಲ್ಲಿ 'ಮಹಾಗುರು' ಎಂದು ಬಿಡುತ್ತಾರೆ. ನಿಜ ಹೇಳಬೇಕೆಂದರೆ ನಮ್ಮಲ್ಲಿ ಅಂಥ ದೊಡ್ಡ ಸಾಧಕರಿಲ್ಲ. ಮೇರು ಪ್ರತಿಭೆಗಳು ಯಾರೂ ಉಳಿದುಕೊಂಡಿಲ್ಲ. ಸಿಕ್ಕವರಿಗೆ ಒಂದು ಬಿರುದನ್ನು ಸುಲಭವಾಗಿ ಕೊಟ್ಟು ಬಿಡುತ್ತಾರೆ. ನಿಜ ಹೇಳಬೇಕೆಂದರೆ ಇಂದು ಎಲ್ಲರಿಗೂ ಗುರುವಾಗಿ ಯಾರಾದರೂ ಇದ್ದರೆ ಅದು ತಾಯಿ ಮಾತ್ರ.
ತಾಯಿಯ ತ್ಯಾಗ ನೆನೆದ ಸ್ಯಾಂಡಲ್ ವುಡ್ ಸ್ಟಾರ್ಸ್
ಮಹಾಗುರು, ವಿಶ್ವಗುರು ಎಲ್ಲವೂ ಆಕೆಯೇ. ನಮಗೆ ನಾಳೆಗಳನ್ನು ಕಟ್ಟಿಕೊಡುವಾಕೆ ಆಕೆ. ನಮ್ಮ ಸುಂದರವಾದ ನಾಳೆಗಳನ್ನು ತೋರಿಸುವವಳು ತಾಯಿ.''ನಾನು ಹದಿಮೂರನೇ ಮಗ! ನನ್ನಮ್ಮನಿಗೆ ನಾನು ಹದಿಮೂರನೇ ಸಂತಾನ. ಹನ್ನೆರಡು ಸ್ವರಗಳ ಬಳಿಕ ಜನಿಸಿದ ಹೊಸ ಸ್ವರ ನಾನು. ಆಕೆ ಹನ್ನೆರಡಕ್ಕೆ ಪ್ರಸವ ನಿಲ್ಲಿಸಿದ್ದಲ್ಲಿ ನಾನು ಇಂದು ಜಗತ್ತಿನಲ್ಲಿ ಇರುತ್ತಿರಲಿಲ್ಲ.
ತಂದೆ ಒಂದು ಲೈಬ್ರರಿಯಾದರೆ ತಾಯಿ ದೊಡ್ಡ ಲ್ಯಾಬೋರೆಟರಿಯಂತೆ! ಅಲ್ಲಿನ ಪ್ರಯೋಗದ ಶಿಶುಗಳು ನಾವು. ನಾನು ಅನಾರೋಗ್ಯದಿಂದ ಹುಟ್ಟಿದ ಮಗು. ಹಾಗಾಗಿ ನನ್ನನ್ನು ಎಲ್ಲ ರೀತಿಯಿಂದಲೂ ಆರೋಗ್ಯಪೂರ್ಣವಾಗಿ ಬೆಳೆಸಿದ ಕೀರ್ತಿ ನನ್ನ ಅಮ್ಮನಿಗೆ ಸಲ್ಲುತ್ತದೆ. ಆ ಮಹಾತಾಯಿಗೆ ಎಂದಿಗೂ ನಾನು ಕೃತಜ್ಞ. ಎಲ್ಲ ಅಮ್ಮಂದಿರಿಗೂ ತಾಯಂದಿರ ದಿನಾಚರಣೆಯ ಶುಭಾಶಯಗಳು.