Don't Miss!
- Finance ಎರಡು ದಿನ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ, 144 ಸೆಕ್ಷನ್ ಜಾರಿ, ದಿನಾಂಕ ವಿವರ
- Technology ವಿವೋ T3x 5G ಫೋನಿನ ಫಸ್ಟ್ ಸೇಲ್ ಯಾವಾಗ?..ಆಫರ್ ಬೆಲೆ ಎಷ್ಟು?
- News ₹8 Lakh Gold: ಆಟೋದಲ್ಲೇ ಬಿಟ್ಟಿದ್ದ 8 ಲಕ್ಷ ರೂ. ಚಿನ್ನಾಭರಣವಿದ್ದ ಬ್ಯಾಗ್ ಮರಳಿ ಸಿಕ್ಕಿದ್ದೆ ರೋಚಕ
- Lifestyle ಮೊದಲ ಯತ್ನದಲ್ಲೇ ಯುಪಿಎಸ್ಸಿ ಪಾಸ್..! ಸ್ಫೂರ್ತಿಯಾಗಿದ್ದು ವಿರಾಟ್..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Automobiles ವಂದೇ ಭಾರತ್ ಸ್ಲೀಪರ್, ಸೂಪರ್ ಆಪ್.. ರೈಲ್ವೆಯಿಂದ ಬಿಗ್ ಪ್ಲ್ಯಾನ್: ನೀವು ತಿಳಿಯಬೇಕಾದ ವಿಚಾರಗಳಿವು!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾವನ್ನ 'ಜೋಕರ್' ಎಂದು ಗೇಲಿ ಮಾಡಿದ್ರು ಅಂಬಿ: ಹಂಸಲೇಖ
ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಂಗೀತ ದಿಗ್ಗಜ ಹಂಸಲೇಖ ಜೋಡಿಯಲ್ಲಿ ಹತ್ತು ಹಲವು ಸೂಪರ್ ಹಿಟ್ ಗೀತೆಗಳು ಬಂದಿದೆ. ಮಿಡಿದ ಹೃದಯ, ಮಣ್ಣಿನ ದೋಣಿ, ಮುಂಜಾನೆಯ ಮಂಜು, ದಿಗ್ಗಜರು, ಇಂದ್ರಜಿತ್ ಸೇರಿದಂತೆ ಅಂಬರೀಶ್ ಅವರ ಹಲವು ಚಿತ್ರಗಳಿಗೆ ಹಂಸಲೇಖ ಸಂಗೀತ ಒದಗಿಸಿದ್ದರು.
ಅದನ್ನ ಮೀರಿ ಹಂಸಲೇಖ ಮತ್ತು ಅಂಬಿಯ ಸ್ನೇಹ ಬೆಳೆದಿತ್ತು. ಇಂತಹ ಸ್ನೇಹಿತನನ್ನ ಕಳೆದುಕೊಂಡಿದಕ್ಕೆ ನಾದಬ್ರಹ್ಮ ಕಂಬನಿ ಮಿಡಿದಿದ್ದಾರೆ. ಪ್ರೀತಿಯ ಅಂಬಿಯನ್ನ ಕಳೆದುಕೊಂಡ ಹಂಸಲೇಖ ಈಗ ಅವರಿಗಾಗಿ ಕವನವೊಂದು ರಚಿಸಿದ್ದಾರೆ. ಅಂಬರೀಶ್ ಅವರ ವ್ಯಕ್ತಿತ್ವ, ಅವರ ಗುಣ, ಅವರನ್ನ ಕಂಡ ಬಗೆಯ ಬಗ್ಗೆ ಹಂಸಲೇಖ ಪದಗಳ ಮೂಲಕ ಹೇಳಿಕೊಂಡಿದ್ದಾರೆ.
ಅಂಬರೀಶ್ - ಜಗ್ಗೇಶ್ ನಡುವಿನ ಕೊನೆಯ ಭೇಟಿ, ಕೊನೆಯ ಮಾತು
ಹಂಸಲೇಖ ಅವರು ಬರೆದಿರುವ ಈ ಸಾಲುಗಳನ್ನ ಮುಂದೆ ಪ್ರಟಿಸಲಾಗಿದೆ. ಈ ಸಾಲುಗಳನ್ನ ಓದಿ ಅರ್ಥೈಸಿಕೊಂಡರೇ ಅಂಬಿ ರೆಬೆಲ್ ವ್ಯಕ್ತಿತ್ವದ ಪರಿಚಯ ನಿಮಗಾಗುತ್ತೆ. ಜಲೀಲನ ಹುಟ್ಟನಿಂದ ಸಾವಿನವರೆಗೂ ಕಂಡ ಜೀವನವನ್ನ ಸರಳವಾಗಿ ವರ್ಣಿಸಿದ್ದಾರೆ. ಮುಂದೆ ಓದಿ....
ಚಿತ್ರಕೃಪೆ: ಡಾ ಹಂಸಲೇಖ ಅಫೀಶಿಯಲ್
'ಅಂಬರಕ್ಕೆ ಈಶನಾದ' ಅಂಬಿ
ಪೂಜ್ಯ ಕನ್ನಡಿಗರೆ...
ಚಿಂತೆಯ
ವನವಾಯ್ತೋ
ಕಂದನ
ಕಳಕೊಂಡ
ಚಂದನವನ...
ಅಮರನಾಥಾಂತ
ಹೆಸರಿಟ್ಟುಕೊಂಡು
ಹುಟ್ಟಿದ
ರೆಬಲ್
ಸ್ಟಾರ್...
ಇವತ್ತು
ಅಂಬರಕ್ಕೆ
ಈಶನಾಗಿದ್ದಾರೆ...
ಅಪ್ಪಾಜಿ ದರ್ಶನಕ್ಕಾಗಿ ಸ್ವೀಡನ್ ನಿಂದ ಬಂದಿದ್ದು ದರ್ಶನ್ ಒಬ್ಬರೇ
ಬಯಸಿ ಬಯಸಿ ಹೋಗುವುದದೆಷ್ಟು ಸರಿ
50ರ
ದಶಕದಲ್ಲಿ
ಹುಟ್ಟಿದ
ಪ್ರತಿಭೆಗಳು...
ಚಂದನವನದಲ್ಲಿ
ಸಸಿನೆಟ್ಟು,
ನೆರಳಿಟ್ಟು
ಫಲಕೊಟ್ಟು
ಹೆಸರಿಟ್ಟು...
ಒಂದೊಂದಾಗಿ
ಮರೆಗೆ
ಸರಿಯುತ್ತಿವೆ...
ಇಲ್ಲಿ
ಸಂದವರು
ಅಲ್ಲಿಗೆ
ಸಲ್ಲಲೇಬೇಕು.
ಸರಿ!
ಆದರೆ,
ಬಯಸಿ
ಬಯಸಿ
ಹೋಗುವುದದೆಷ್ಟು
ಸರಿ?
ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!
ಸಾವನ್ನ 'ಜೋಕರ್' ಎಂದಿದ್ದ ಅಂಬಿ
ಸಾವನ್ನು
Joker
ಎಂದು
ಗೇಲಿ
ಮಾಡಿ:
ಜೀವನ
ಒಂದು
ತಮಾಶೆ
ಎಂದು
prove
ಮಾಡಿ:
ಶಿಸ್ತುಗಳಿಗೆ
ಸೆಡ್ಡು
ಹೊಡೆದು
ಹೊರಟಿದ್ದಾರೆ
ಅಂಬಿ!
ಕರುನಾಡು
ಅಳುತ್ತಿದೆ:
ಅವರ
ಈ
ಧೈರ್ಯದ
ಡೈಲಾಗುಗಳ
ನಂಬಿ!
ದೈವವಿತ್ತ
ದೈತ್ಯ
ದೇಹ:
ಅದಕ್ಕೋ...
ಮೋಜಿನ
ಮೇಲೆ
ಮಹಾಮೋಹ!
ಅಂಬಿ ಅಂತಿಮ ದರ್ಶನಕ್ಕೆ ಬರಬಾರದೆಂದು ನಿರ್ಧರಿಸಿದ್ದರಂತೆ ರವಿಚಂದ್ರನ್
ಬೈಗುಳವೇ ಖುಷಿ ಕೊಡ್ತಿತ್ತು
ಅವರಿದ್ದಲ್ಲಿ
ನಗುವಿನ
ಗಲಾಟೆ...
ಬೈಗುಳಗಳ
ಭರಾಟೆ...
ಕೈಗೆ
ಸಿಕ್ಕವರಿಗೆ
ಸುಮ್ಮಸುಮ್ಮನೇ
ತರಾಟೆ
!
ಸಮಯಕ್ಕೆ
ಸರಿಯಾಗಿ
ಶೂಟಿಂಗಿಗೆ
ಬಂದಿದ್ದೇ
ಇಲ್ಲಾ...
But
:
200
ಸಿನಿಮಾಗಳಲ್ಲಿ
ಒಂದು
ಸಿನಿಮಾನೂ
ನಿಂತು
ಹೋದದ್ದೇ
ಇಲ್ಲಾ
!
ರಾಜ್ ಸ್ಮಾರಕ ಪಕ್ಕದಲ್ಲೇ ಅಂಬರೀಶ್ ಸಮಾಧಿ: ಅಣ್ಣಾವ್ರ ಕುಟುಂಬ ಹೇಳಿದ್ದೇನು.?
ರಾಂಗ್ ಶೋ ಆಗಿತ್ತು
ಹಂಸಲೇಖ...
"
I
Want;
But
Can't
"
ಅಂದಿದ್ರು...
ಆವತ್ತು!
ಸಿಂಗಾಪೂರಿಗೆ
ಹೋಗಿದ್ದೇ
ಒಂದು
ಆಟ
!
ಬಂದಿದ್ದು
ಇನ್ನೊಂದು
ಆಟ
!...
"
ನಾನುಳಿದಿರೋದೇ
ಬೋನಸ್
"
ಅಂತ
ಮೂರುವರ್ಷ
ಎಲೆಯಾಡಿದ್ದೆ
ಒಂದು
ಅದೃಷ್ಟದಾಟ
!
ಈವತ್ತು
ಅವರು
ಆಡಿದ
ಆಟದಲ್ಲಿ...
ಮೂರು
Joker
ಬಿದ್ದಿತ್ತು
!
ರೆಮಿ
ಇರ್ಲಿಲ್ಲಾ...
Show
ಅಂತ
ಇಟ್ಟುಬಿಟ್ರು...
ರಾಂಗ್
Show
ಆಗಿತ್ತು...
ಇದಕ್ಕೆ ಕಾಕತಾಳೀಯ ಅಂತೀರಾ, ವಿಚಿತ್ರ ಅಂತೀರಾ.?
ಅಂಬರೀಶ್ ಅಂದ್ರೆ ಅಮೃತ
ಜೀವ
ನಮ್ಮ
ಮಾತು
ಕೇಳಲ್ಲಾ:
ನಿಜ!
ಜೀವನ
ಕೇಳುತ್ತೆ
!
ಆದರೆ...
ಸಾವನ್ನ
Joker
ಅನ್ನೋರ್ಗೆ
ಇದೆಲ್ಲಾ
ಎಲ್ಲಿ
ಕೇಳ್ಸುತ್ತೆ
!
ಅಂಬರೀಶ್
ಅಂದ್ರೆ
ಅಂಬ್ರೋಸಿಯಾ...
ಅಂಬ್ರೋಸಿಯಾ
ಅಂದ್ರೆ
ಅಮೃತ...
ಅಮೃತವನ್ನು
ಮುಟ್ಟಿದರೆ
ಮತ್ತು...
ಹೀರಿದರೆ
ಗಮ್ಮತ್ತು...
ಮತ್ತಿಲ್ಲದೇ...
ಗಮ್ಮತ್ತಿಲ್ಲದೇ...
ಚಿಂತೆಯ
ವನವಾಯ್ತೋ
ಕಂದನ
ಕಳಕೊಂಡ
ಚಂದನವನ...