Don't Miss!
- News ನಾಲ್ಕು ಗೋಡೆಗಳ ಮಧ್ಯೆ ಆಗಿರುವ ಚರ್ಚೆ ಬಹಿರಂಗವಾಗಿ ಹೇಳೋದಕ್ಕೆ ಆಗಲ್ಲ: ಎಂ.ಪಿ.ರೇಣುಕಾಚಾರ್ಯ ಹೀಗೆ ಹೇಳಿದ್ಯಾಕೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುಬೈನಿಂದ ಬರ್ತಾ ಇದ್ದಂತೆ ಕಾಂತಾರಗೆ ಜನ ನುಗ್ತಿರೋದು ನೋಡಿ ಮನವಿ ಇಟ್ಟ ಡಾಲಿ ಧನಂಜಯ
ಈ ವರ್ಷ ಅತಿ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಕನ್ನಡದ ನಾಯಕ ನಟ ಎಂದರೆ ಅದು ಡಾಲಿ ಧನಂಜಯ್ ಎಂದರೆ ತಪ್ಪಾಗಲಾರದು. ಧನಂಜಯ್ ಅಭಿನಯದ 21 ಅವರ್ಸ್, ಬೈರಾಗಿ, ಮಾನ್ಸೂನ್ ರಾಗ ಹಾಗೂ ತೋತಾಪುರಿ ಚಿತ್ರಗಳು ಈಗಾಗಲೇ ಬಿಡುಗಡೆಗೊಂಡಿದ್ದು, ಹೆಡ್ ಬುಷ್ ಹಾಗೂ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಮತ್ತು ತಮಿಳಿನ ಚಿತ್ರವೊಂದು ಈ ವರ್ಷ ಬಿಡುಗಡೆಗೆ ರೆಡಿ ಇವೆ.
ಕಾಂತಾರ ಅಬ್ಬರ: ಎರಡನೇ ಶನಿವಾರದ ಮುಂಬೈ ಬುಕ್ಕಿಂಗ್ಸ್ ಅಸಾಮಾನ್ಯ, ಹಿಂದೆಂದೂ ಕಂಡಿಲ್ಲ!
ಈ ಪೈಕಿ ಸದ್ಯ ಹೆಡ್ ಬುಶ್ ಚಿತ್ರ ಬಿಡುಗಡೆಯ ಸನಿಹಕ್ಕೆ ತಲುಪಿದ್ದು, ಇದೇ ತಿಂಗಳ 21ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಹೆಡ್ ಬುಶ್ ಚಿತ್ರದಲ್ಲಿ ಡಾಲಿ ಧನಂಜಯ್ ನಾಯಕನಾಗಿ ಮಾತ್ರವಲ್ಲದೆ ನಿರ್ಮಾಪಕನಾಗಿಯೂ ಸಹ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಚಿತ್ರಕ್ಕಾಗಿ ವಿನೂತನ ಪ್ರಚಾರಗಳನ್ನು ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ರಾಜ್ ಕಪ್ ಆಡುವ ಸಲುವಾಗಿ ದುಬೈಗೆ ಹಾರಿದ್ದ ಜಯರಾಜ್ (ಡಾಲಿ ಧನಂಜಯ್) 'ನಾನು ಬರುವವರೆಗೂ ಬೆಂಗಳೂರು ಜೋಪಾನ' ಎಂದು ಸಹಚರರಿಗೆ ಸಲಹೆ ನೀಡುವ ವಿಡಿಯೋ ವೈರಲ್ ಆಗಿತ್ತು.
ಪ್ರೇಮ್-ಧ್ರುವ ಸರ್ಜಾ ಕಾಂಬಿನೇಷನ್ ಚಿತ್ರದಲ್ಲಿ ಮೋಹನ್ ಲಾಲ್? ಕುತೂಹಲ ಕೆರಳಿಸಿದ ಫೋಟೊ
ಹೀಗೆ ದುಬೈಗೆ ಪ್ರಯಾಣ ಕೈಕೊಂಡಿದ್ದ ಡಾಲಿ ಧನಂಜಯ್ ಇದೀಗ ಭಾರತಕ್ಕೆ ವಾಪಸ್ ಆಗಿದ್ದು, ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಜಯರಾಜ್ ( ಡಾಲಿ ಧನಂಜಯ್ ) ಅವರಿಗೆ ಅಭಿಮಾನಿಗಳಿಂದ ಸ್ವಾಗತವೂ ಸಿಕ್ಕಿದೆ. ಇನ್ನು ಧನಂಜಯ್ ದುಬೈಗೆ ತೆರಳಿದ ನಂತರ ಬಿಡುಗಡೆಗೊಂಡ ಕಾಂತಾರ ಸಿನಿಮಾ ಕುರಿತಾಗಿ ದುಬೈನಿಂದ ವಾಪಸ್ಸಾದ ಧನಂಜಯ್ ವಿಮಾನ ನಿಲ್ದಾಣದಲ್ಲಿಯೇ ಮಾತನಾಡಿದ್ದಾರೆ.
ಕಾಂತಾರ ಚಿತ್ರಕ್ಕೆ ಜನ ನುಗ್ತಿರೋದು ಕಂಡು ಸಂತಸ ವ್ಯಕ್ತಪಡಿಸಿದ ಧನಂಜಯ್
ಬೆಂಗಳೂರು ತಲುಪಿದ ಡಾಲಿ ಧನಂಜಯ್ ಅವರನ್ನು ಕೆಲ ಯೂಟ್ಯೂಬ್ ಚಾನೆಲ್ಗಳು ವಿಮಾನ ನಿಲ್ದಾಣದಲ್ಲಿಯೇ ಸಂದರ್ಶಿಸಿವೆ. ಈ ಸಂದರ್ಭದಲ್ಲಿ ತಾನು ದುಬೈಗೆ ತೆರಳಿದ ನಂತರ ಬಿಡುಗಡೆಗೊಂಡ ಕಾಂತಾರ ಚಿತ್ರದ ಬಗ್ಗೆ ಪ್ರಶ್ನೆ ಎದುರಾದಾಗ ಪ್ರತಿಕ್ರಿಯಿಸಿದ ಧನಂಜಯ್ 'ಚಿತ್ರದ ಸಾಮರ್ಥ್ಯ ಚಿತ್ರವನ್ನು ಗೆಲ್ಲಿಸಿದೆ, ಕಾಂತಾರ ಚಿತ್ರಕ್ಕೆ ಜನ ನುಗ್ಗುವುದನ್ನು ನೋಡಿದರೆ ತುಂಬಾ ಖುಷಿಯಾಗ್ತಿದೆ' ಎಂದು ಸಂತಸ ವ್ಯಕ್ತಪಡಿಸಿದರು.
ಬರ್ತಾ ಇದ್ದಂಗೆ ಕಾಂತಾರ ನೋಡ್ತೇನೆ
ಮಾತು ಮುಂದುವರೆಸಿದ ಡಾಲಿ ಧನಂಜಯ್ ಇಲ್ಲಿಯವರೆಗೂ ಚಿತ್ರ ವೀಕ್ಷಿಸಲು ಇರಲಿಲ್ಲ ಇದೀಗ ಬರ್ತಾ ಇದ್ದಂಗೆ ಕಾಂತಾರ, ಗುರು ಶಿಷ್ಯರು ಹಾಗೂ ತೋತಾಪುರಿ ಈ 3 ಚಿತ್ರವನ್ನು ಸಹ ವೀಕ್ಷಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಧನಂಜಯ್ ಮನವಿ
ಇನ್ನು ಕನ್ನಡ ಸಿನಿ ಪ್ರೇಕ್ಷಕರು ಕಾಂತಾರ ಚಿತ್ರವನ್ನು ಯಾವ ರೀತಿ ಪ್ರೋತ್ಸಾಹಿಸಿ ಮೆಚ್ಚಿಕೊಂಡಿದ್ದಾರೋ ಅದೇ ರೀತಿಯ ಪ್ರೋತ್ಸಾಹವನ್ನು ತಮ್ಮ ನಿರ್ಮಾಣದ ಹಾಗೂ ನಟನೆಯ ಮುಂದಿನ ಹೆಡ್ ಬುಶ್ ಚಿತ್ರಕ್ಕೂ ನೀಡಲಿ ಎಂದು ಧನಂಜಯ್ ಇದೇ ವೇಳೆ ಮನವಿ ಮಾಡಿಕೊಂಡಿದ್ದಾರೆ.. ಸದ್ಯ ಹೆಡ್ ಬುಶ್ ಚಿತ್ರದ ಹಬೀಬಿ ಹಾಡು ಬಿಡುಗಡೆಯಾಗಿದ್ದು, ದಿನವೊಂದರಲ್ಲಿ ಒಂದು ಮಿಲಿಯನ್ಗಿಂತಲೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ ಹಾಗೂ ಈ ಹಾಡಿಗೆ ಸ್ವತಃ ಡಾಲಿ ಧನಂಜಯ್ ಸಾಹಿತ್ಯ ಬರೆದಿದ್ದಾರೆ.