ನಟ ಯಶ್ ವಿರುದ್ಧ ಏಕವಚನದಲ್ಲಿ ಸಿಡಿದೆದ್ದ ಸಿಎಂ ಕುಮಾರಸ್ವಾಮಿ
Recommended Video
ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ನಟ ಯಶ್ ವಿರುದ್ಧ ಸಿಎಂ ಕುಮಾರಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದ ಕೆ.ಆರ್ ಪೇಟೆಯ ಬಹಿರಂಗ ಸಭೆಯಲ್ಲಿ ಭಾಷಣ ಮಾಡಿದ ಎಚ್ ಡಿ ಕೆ, 'ನಮ್ಮಂತ ನಿರ್ಮಾಪಕರು ಇಲ್ಲದೇ ಹೋದ್ರೆ ಇವರಿಲ್ಲ' ಎಂದು ಕಿಡಿಕಾರಿದ್ದಾರೆ.
'ಅವನು ಯಾವನೊ ಯಶ್ ಅಂತೆ, ನಮ್ಮ ಪಕ್ಷವನ್ನ ಕಳ್ಳರ ಪಕ್ಷ ಅಂತ ಹೇಳ್ತಾನೆ. ಅವರಿಗಿನ್ನು ಗೊತ್ತಿಲ್ಲ, ನನ್ನ ಕಾರ್ಯಕರ್ತರು ಇಂದು ಬಾಯಿ ಮುಚ್ಕೊಂಡು ಇರೋದು ಕುಮಾಣ್ಣನಿಗೋಸ್ಕರ ಅಂತ. ಇಂತವರನ್ನ ಹಾಕ್ಕೊಂಡು ಸಿನಿಮಾ ಮಾಡಿದ್ದೀನಿ. ನಮ್ಮಂತ ನಿರ್ಮಾಪಕರಿದ್ದರೇ ಇವು ಬದುಕ್ತಾವೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಪರದೆ ಮೇಲೆ ನೋಡಿದ್ದು ಸತ್ಯ ಅಂದುಕೊಳ್ಳಬೇಡಿ. ನಿಮ್ಮ ಮನೆಯಲ್ಲಿ ದಿನನಿತ್ಯ ನೋಡ್ತೀರಾ ಅಲ್ವಾ ಅದೇ ನಿಜವಾದ ಸತ್ಯ. ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾಗ ಬಂದಿದ್ರಾ ಇವರು' ಎಂದು ಪ್ರಶ್ನಿಸಿದ್ದಾರೆ.

ಏಪ್ರಿಲ್ 18 ರಂದು ಮಂಡ್ಯದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಸುಮಲತಾ ಪರ ಯಶ್ ಮತ್ತು ದರ್ಶನ್ ಪ್ರಚಾರ ಮಾಡ್ತಿದ್ದಾರೆ. ಮತ್ತೊಂದೆಡೆ ನಿಖಿಲ್ ಕುಮಾರ ಪರ ಸಿಎಂ ಕುಮಾರಸ್ವಾಮಿ ಪ್ರಚಾರ ಮಾಡ್ತಿದ್ದಾರೆ.


Click it and Unblock the Notifications











