Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾರೋ ನಾಲ್ಕು ಜನ 'ಡಿ ಬಾಸ್' ಅಂತಾರೆ: ದರ್ಶನ್ ವಿರುದ್ಧ ಸಿಎಂ ವಾಗ್ದಾಳಿ
Recommended Video
ಮಂಡ್ಯ ಚುನಾವಣೆ ಈಗ ವೈಯಕ್ತಿಕ ಟೀಕೆಗಳಿಂದ ಸದ್ದು ಮಾಡ್ತಿದೆ. ಪಕ್ಷೇತರ ಅಭ್ಯರ್ಥಿ ಪರ ನಿಂತಿರುವ ನಟ ದರ್ಶನ್ ಅವರ ವಿರುದ್ಧ ಸಿಎಂ ಎಚ್ ಡಿ ಕುಮಾರಸ್ವಾಮಿ ಸಿಡಿದೆದ್ದಿದ್ದಾರೆ. 'ನಾವು ಜೋಡೆತ್ತುಗಳು' ಎಂದು ಹೇಳಿದ್ದ ದರ್ಶನ್ ಹೇಳಿಕೆಗೆ ತಿರುಗೇಟು ನೀಡಿದ್ದ ಸಿಎಂ 'ಅದು ಜೋಡತ್ತುಗಳಲ್ಲ, ಕಳ್ಳೆತ್ತುಗಳು' ಎಂದಿದ್ದರು.
'ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಯಾರದು? ಅದು ಸಿನಿಮಾಗೆ ಮಾತ್ರ, ಜನರಿಗೆ ಡಿ ಬಾಸ್ ಆಗೋಕೆ ಆಗಲ್ಲ. ರೈತರಿಗೆ ಡಿ ಬಾಸ್ ಆಗೋಕೆ ಆಗಲ್ಲ' ಎಂದು ಎಚ್ಡಿಕೆ ದರ್ಶನ್ ವಿರುದ್ಧ ಕಿಡಿಕಾರಿದ್ದರು.
'ಡಿ ಬಾಸ್ ಯಾರು' ಎಂದು ಕೇಳಿದ್ದ ಸಿಎಂಗೆ ದರ್ಶನ್ ಪ್ರತಿಕ್ರಿಯೆ
ಸಿಎಂ ಅವರ ಈ ಹೇಳಿಕೆಗೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ದರ್ಶನ್ ''ಇದು ಅಭಿಮಾನಿಗಳು ಕೊಟ್ಟಿರುವ ಪ್ರೀತಿಯ ಭಿಕ್ಷೆ'' ಎಂದು ಪರೋಕ್ಷವಾಗಿ ಮುಖ್ಯಮಂತ್ರಿಗೆ ತಿರುಗೇಟು ನೀಡಿದ್ದರು. ಈ ಹೇಳಿಕೆ ನಂತರ ಸಿಎಂ ಕುಮಾರಸ್ವಾಮಿ ಮತ್ತೆ ದರ್ಶನ್ ವಿರುದ್ಧ ಗುಡುಗಿದ್ದಾರೆ. ಏನಂದ್ರು? ಮುಂದೆ ಓದಿ.....
ಯಾರೋ ನಾಲ್ಕು ಜನ ಕೊಟ್ಟಿರೋದು
ಡಿ ಬಾಸ್ ಅನ್ನೋದು ಅಭಿಮಾನಿಗಳು ಪ್ರೀತಿಯಿಂದ ಕೊಟ್ಟಿರೋದು ಎಂದು ದರ್ಶನ್ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ ''ಅವರದ್ದೇ ಅಭಿಮಾನಿ ಸಂಘಗಳು ಕೊಟ್ಟಿರ್ತಾರೆ, ಆರೂವರೆ ಕೋಟಿ ಜನ ಕೊಟ್ಟಿರೋದಾ?. ಯಾರೋ ನಾಲ್ಕು ಜನ ಕೊಟ್ಟಿರ್ತಾರೆ ಬಿಡಿ'' ಎಂದು ಪ್ರಶ್ನಿಸಿದ್ದಾರೆ.
ಜೋಡೆತ್ತುಗಳ ವಿರುದ್ಧ ಸಿಎಂ ಕುಮಾರಸ್ವಾಮಿ ಗರಂ: ಯಾರದು ಡಿ ಬಾಸ್?
ನನ್ನ ಮಗನ್ನ ಯುವರಾಜ ಅಂತಾರೆ
''ನನ್ ಮಗನಿಗೂ ಯುವರಾಜ ಅಂತ ಕೊಟ್ಟಿದ್ದಾರೆ. ಅದು ಯಾರೋ ನಾಲ್ಕು ಜನ. ಹಾಗಂತ ನಾವೇನೋ ಆಗ್ಬಿಟ್ಟಿದ್ದೀವಿ ಅಂತ ಮೆರೆಯೋಕೆ ಆಗುತ್ತಾ'' ಎಂದು ಸಿಎಂ ಕುಮಾರಸ್ವಾಮಿ ನಟ ದರ್ಶನ್ ವಿರುದ್ಧ ಟೀಕಿಸಿದ್ದಾರೆ.
ಜೋಡೆತ್ತುಗಳು ಕಾಣೆಯಾಗಿದೆ ಎಂದು ಕೂಗುತ್ತಿರುವವರಿಗೆ ಸುಮಲತಾ ಸ್ಪಷ್ಟನೆ
ದರ್ಶನ್ ವರ್ಸಸ್ ಸಿಎಂ
ಸದ್ಯದ ಪರಿಸ್ಥಿತಿ ನೋಡಿದ್ರೆ ಮಂಡ್ಯ ಚುನಾವಣೆ ಸಿಎಂ ವರ್ಸಸ್ ದರ್ಶನ್ ಎನ್ನುವಂತಾಗಿದೆ. ಯಾಕಂದ್ರೆ, ಮಂಡ್ಯದಲ್ಲಿ ಸುಮಲತಾ ಎದುರು ನಿಖಿಲ್ ಕುಮಾರ್ ಸ್ಪರ್ಧೆ ಮಾಡಿದ್ದಾರೆ. ನಿಖಿಲ್ ಪರ ಸಿಎಂ ನಿಂತಿದ್ದು, ಸುಮಲತಾ ಪರ ದರ್ಶನ್ ಮತ್ತು ಯಶ್ ನಿಂತಿದ್ದಾರೆ. ಹಾಗಾಗಿ, ದರ್ಶನ್ ಅವರು ಟಾರ್ಗೆಟ್ ಆಗ್ತಿದ್ದಾರೆ ಎನ್ನಲಾಗುತ್ತಿದೆ.
ಶಾಂತಿ ಕಾಪಾಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ ದರ್ಶನ್
ಶಾಂತಿಯುತ ಚುನಾವಣೆ ನಡೆಯಲಿ
ಮತ್ತೊಂದೆಡೆ ಮಂಡ್ಯದಲ್ಲಿ ಶಾಂತಿಯುತ ಮತದಾನ ಆಗಬೇಕು ಎಂದು ಸುಮಲತಾ ಮತ್ತು ದರ್ಶನ್ ಕೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ದರ್ಶನ್ ಕೂಡ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಜನರಿಗೆ, ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.