Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೃಷ್ಣನೂರಿನಲ್ಲಿ ರಾಧೆ ವೇಷದಲ್ಲಿ ಡ್ರೀಮ್ಗರ್ಲ್ ಹೇಮಾಮಾಲಿನಿ
ಉಡುಪಿ : ಮುಂಬಯಿಯಿಂದ ಬಂದ ಬಾಲಿವುಡ್ 'ಡ್ರೀಮ್ ಗರ್ಲ್" ಕೃಷ್ಣನೂರಿನಲ್ಲಿ ಆದದ್ದು ರಾಧೆ !
ಹಿಂದಿ ಚಿತ್ರದ ಹೊಸ ನಾಯಕಿಯಾಗಿರುವ ಯುವತಿಯ ತಾಯಿಯ ನೃತ್ಯ ವಯಸ್ಸನ್ನು ಗೌಣವಾಗಿಸುವಷ್ಟು ಶಕ್ತ. ನೂಪುರ ಕಟ್ಟಿ, ಗೀತ ಗೋವಿಂದ ರೂಪಕಕ್ಕೆ ಜೀವ ತುಂಬಿದ ಈ ಮಾನಿನಿ ಹೇಮಾ ಮಾಲಿನಿ.
ಸುರೇಶ್ ವಾಡ್ಕರ್ ಕಂಠದ ಕೆಸೆಟ್ಟು ಗಣೇಶ ವಂದನ ಹೇಳಿತು. ಮೆಲ್ಲನೆ ಸರಿದ ಪರದೆಯ ಹಿಂದೆ ರಾಧೆ ವೇಷದ ಹೇಮಾಮಾಲಿನಿ. ಬಗಲಲ್ಲಿ ಶ್ರೀ ಕೃಷ್ಣ. ಸಮುದ್ರದ ಅಲೆ ಹಿನ್ನೆಲೆ. ಜಯ ಜಯ ದೇವ ಹಾಡು ಮೊಳಗುತ್ತಲೇ ಕೈಮುಗಿದು ನಿಂತ ಸಖಿಯರು. ಮೊದಲ ಅಂಕಕ್ಕೆ ಪರದೆ. ಕಿವಿಗಡಚಿಕ್ಕುವ ಕರತಾಡನ.
ಮತ್ತೆ ಪರದೆ ಸರಿದಾಗ, ಮುಸುಕುಧಾರಿ ಬಾಲೆ. ಕೃಷ್ಣ ಮೆಲ್ಲಗೆ ಆಕೆಯ ಕೈ ಹಿಡಿಯುತ್ತಾನೆ. ಮುಸುಕು ಸರಿಸಿ ನೋಡಿದರೆ ಆಕೆ ರಾಧೆಯಲ್ಲ, ಸಖಿ. ಹತ್ತಿರದಲ್ಲೇ ನಿಂತ ರಾಧೆಗೆ ನಖಶಿಖಾಂತ ಸಿಟ್ಟು. ಅವಳನ್ನು ಒಲಿಸಲು ಕೃಷ್ಣ ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ಕೊನೆಗೂ ಆಗುತ್ತದೆ ರಾಧಾ- ಕೃಷ್ಣರ ಮಿಲನ. ರಾಧೆಗೆ ಕೃಷ್ಣ ಎಣ್ಣೆ ಹಚ್ಚಿ ತಲೆ ಬಾಚುತ್ತಾನೆ, ಸಿಂಗಾರ ಮಾಡಿ ಮನತಣಿಯೆ ಕಣ್ಣುತುಂಬಿಕೊಳ್ಳುತ್ತಾನೆ. ಮತ್ತೆ ಪರದೆ.
ಉಡುಪಿಯಲ್ಲಿ ನಡೆದ ಈ ಗೀತ ಗೋವಿಂದ ನೃತ್ಯ ರೂಪಕದ ಮುಖ್ಯ ಆಕರ್ಷಣೆ ರಾಧೆ ಅರ್ಥಾತ್ ಹೇಮಾಮಾಲಿನಿ. ಆಕೆಯನ್ನು ನೋಡಲೆಂದೇ ದೂರದೂರಿನಿಂದಲೂ ಜನ ಬಂದಿದ್ದರು. ರೂಪಕದ ನಂತರ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಮಾಮಾಲಿನಿಯವರನ್ನು ಸನ್ಮಾನಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಾಮಮೂರ್ತಿ ಹಾಗೂ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಸಮಾರಂಭದಲ್ಲಿ ಹಾಜರಿದ್ದರು.