Don't Miss!
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- News ಐತಿಹಾಸಿಕ ಪ್ರಸಿದ್ಧ ವದ್ದಿಕೆರೆ ಸಿದ್ದಪ್ಪನ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಸಂಪೂರ್ಣ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರಳತೆಗೆ ಇದಕ್ಕಿಂತ ಸಾಕ್ಷಿ ಬೇಕಾ.?
ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನ ಮೀಟ್ ಮಾಡೋಕೆ ಸಾಧ್ಯ ಇದ್ಯಾ.? ಅವರು ಕನ್ನಡ ಚಿತ್ರರಂಗದ ದೊಡ್ಡ ನಟ.. ಜನಸಾಮಾನ್ಯರನ್ನು ಭೇಟಿ ಮಾಡುವಷ್ಟು ಸಮಯ ಅವರಿಗೆ ಎಲ್ಲಿದೆ.? ಒಂದ್ವೇಳೆ ಭೇಟಿ ಮಾಡಿದ್ರೂ, ಚೆನ್ನಾಗಿ ಮಾತನಾಡಿಸ್ತಾರಾ.? - ಇಂತಹ ಹತ್ತು ಹಲವು ಪ್ರಶ್ನೆಗಳು ಅನೇಕರಿಗೆ ಕಾಡಬಹುದು.
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ತಮ್ಮನ್ನ ಆರಾಧಿಸುವ ಅಭಿಮಾನಿಗಳನ್ನ ದರ್ಶನ್ ಸದಾ ಗೌರವದಿಂದ ಕಾಣುತ್ತಾರೆ. ತಾವು ದೊಡ್ಡ ತಾರೆ ಎಂಬ ಜಂಭ ಇಲ್ಲದೆ, ಎಲ್ಲರೊಂದಿಗೂ ಸರಳತೆಯಿಂದಲೇ ನಡೆದುಕೊಳ್ಳುತ್ತಾರೆ.
ಮೊನ್ನೆ ಮೊನ್ನೆಯಷ್ಟೇ ನಡೆದ ಘಟನೆಯನ್ನೇ ತೆಗೆದುಕೊಳ್ಳಿ... ಕಳೆದ ಶುಕ್ರವಾರ ಮೈಸೂರಿನ ತಮ್ಮ ಫಾರ್ಮ್ ಹೌಸ್ ಗೆ ದರ್ಶನ್ ಭೇಟಿ ಕೊಟ್ಟಿದ್ದರು. ಈ ವೇಳೆ ದರ್ಶನ್ ರನ್ನು ಭೇಟಿ ಆಗಲು ವಿಕಲಚೇತನ ಅಭಿಮಾನಿಯೊಬ್ಬರು ಬಂದಿದ್ದರು.
ದರ್ಶನ್ ವಿಚಾರಕ್ಕೆ ರಜನಿಕಾಂತ್ ಅವರನ್ನ ನೆನಪಿಸಿಕೊಂಡ ನಟ
ಆ ಅಭಿಮಾನಿಯನ್ನು ನೋಡಿ ಪ್ರೀತಿಯಿಂದ ಮಾತನಾಡಿಸಿ, ಔತಣ ಕೊಟ್ಟು, ಸೆಲ್ಫಿ ಕ್ಲಿಕ್ಕಿಸಿಕೊಂಡು ಕಳುಹಿಸಿಕೊಟ್ಟಿದ್ದಾರೆ ನಟ ದರ್ಶನ್. ಈ ವಿಚಾರವನ್ನ ಸ್ವತಃ ದರ್ಶನ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ.
ಮತ್ತೋಮ್ಮೆ ಮಾನವೀಯತೆ ಮೆರೆದ ಸರಳತೆಯ ಸಾಮ್ರಾಟ್ ಚಾಲೆಂಜಿಂಗ್ ಸ್ಟಾರ್ ಇಂದು ಚಾಮುಂಡೇಶ್ವರಿ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನಲ್ಲಿರುವ ತಮ್ಮ ಫಾರಂಹೌಸ್ ನಲ್ಲಿ ಪೂಜಾಮಹೋತ್ಸವ ಏರ್ಪಡಿಸಲಾಗಿತ್ತು ಪೂಜಾಮಹೋತ್ಸವಕ್ಕೆ ಅಕಸ್ಮಾತ್ ಅಲ್ಲಿಗೆ ಬಂದ ಅಂಗವಿಕಲ ಅಭಿಮಾನಿಗೆ ಔತಣ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡ ಬಾಸ್ ಆಫ಼್ ಸ್ಯಾಂಡಲ್ವುಡ್ ಡಿ ಬಾಸ್ pic.twitter.com/QefAf61qU9
— ಕರುನಾಡ ಏಕಚಕ್ರಾಧಿಪತಿ ದರ್ಶನ್ ಬಾಸ್ ಅಭಿಮಾನಿಗಳು ಗುಬ್ಬಿ (@DBossFansGubbi) August 3, 2018
ದರ್ಶನ್ ಗೆ ಇರುವ ಮಾನವೀಯತೆ ಹಾಗೂ ಸರಳತೆಯನ್ನ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೊಂಡಾಡುತ್ತಿದ್ದಾರೆ.
ಪುನೀತ್, ದರ್ಶನ್, ಸುದೀಪ್ ಬಗ್ಗೆ ನಟಿ ರಶ್ಮಿಕಾ 'ಹೀಗೆ' ಹೇಳಿದರು.!
ಇದೊಂದೇ ಅಲ್ಲ, ಅಭಿಮಾನಿಗಳನ್ನು ಭೇಟಿ ಮಾಡಲು ದರ್ಶನ್ ಮನೆ ಬಾಗಿಲು ಸದಾ ತೆರೆದಿರುತ್ತದೆ. 'ದಾಸ'ನ ಜೊತೆಗೆ ಫೋಟೋ ಕ್ಲಿಕ್ ಮಾಡಿಕೊಳ್ಳಬೇಕು ಎಂದು ಬರುವ ಅಭಿಮಾನಿಗಳಿಗೆ ದರ್ಶನ್ ಎಂದೂ ನೋಯಿಸಿಲ್ಲ.
ಅಂದ್ಹಾಗೆ, ಸದ್ಯ 'ಯಜಮಾನ' ಚಿತ್ರೀಕರಣದಲ್ಲಿ ದರ್ಶನ್ ಬಿಜಿಯಾಗಿದ್ದಾರೆ. ಮುಂದಿನ ವಾರ 'ಒಡೆಯ' ಸಿನಿಮಾ ಸೆಟ್ಟೇರಲಿದೆ. ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.