Don't Miss!
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- News ಭಾರತೀಯ ರೈಲ್ವೆಗೆ 171 ವರ್ಷ: ಮೊದಲ ರೈಲು ಸಂಚಾರ ಎಲ್ಲಿಂದ ಎಲ್ಲಿಗೆ? ಪೋಸ್ಟ್ ಹಂಚಿಕೊಂಡ ರೈಲ್ವೆ
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಣ್ಣೀರು ಹಾಕುತ್ತಿದೆ ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಜೀವ
Recommended Video
ಮುಖದ ಮೇಲಿನ ಬಣ್ಣ ಚೆನ್ನಾಗಿರುವವರೆಗೂ ಮಾತ್ರ ಕಲಾವಿದನಿಗೆ ಬೆಲೆ. ಬಣ್ಣ ಮಾಸಿದ ನಂತರ ಅವನು ಕಲಾವಿದನಾಗಿ ಉಳಿಯುವುದಿಲ್ಲ. ಸಾಮಾನ್ಯ ಮನುಷ್ಯನಾಗಿ ಬಿಡುತ್ತಾನೆ. ಅದರಂತೆಯೇ ಸ್ಟಾರ್ ಗಿರಿ ಇದ್ದಾಗ ತಾನು, ತನ್ನ ಮನೆ ಅಂತ ಎಲ್ಲವನ್ನು ಜೋಪಾನ ಮಾಡಿಕೊಂಡವರು ಕೆಲವು. ಸಿನಿಮಾ. ಕಲೆ ಅಭಿಮಾನ ಮುಂದಕ್ಕೆ ಜೀವನ ನಡೆಯುತ್ತೇ ಅಂತ ಯೋಚಿಸಿದವರು ಅನೇಕರು.
ಕನ್ನಡ ಸಿನಿಮಾರಂಗದ ಹಿರಿಯ ಜೀವಗಳು ಒಂದೊಂದೆ ಮರೆಯಾಗಿ ಹೋಗುತ್ತಿವೆ. ದಿಕ್ಕು ದೆಸೆ ಇಲ್ಲದೆ ಕೊನೆಯ ಕಾಲದಲ್ಲಿ ಯಾರದ್ದೂ ಆಸರೆ ಇಲ್ಲದೆ ಹೋಗುತ್ತಿದ್ದಾರೆ ಎನ್ನುವುದೇ ಬೇಸರದ ಸಂಗತಿ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಸುಮಾರು 550 ಚಿತ್ರಗಳಲ್ಲಿ ನಟಿಸಿದ ಶನಿಮಹದೇವಪ್ಪ ಅವರ ಸ್ಥಿತಿ ತೀರ ಗಂಭೀರವಾಗಿದೆ.
ಬುಲೆಟ್ ಪ್ರಕಾಶ್ ಇಂದು ಬದುಕಿದ್ದಾರೆ ಎಂದರೆ ಅದಕ್ಕೆ ಕಾರಣ ಒಬ್ಬ ಹುಡುಗ!
ಹಿರಿಯ ಸಿನಿಮಾ ವರದಿಗಾರರಾದ ಗಣೇಶ್ ಕಾಸರಗೋಡು ಅವರು ತಮ್ಮ ಚದುರಿದ ಚಿತ್ರಗಳು ಹೆಸರಿನಲ್ಲಿ ಹಿರಿಯ ಕಲಾವಿದರ ಸ್ಥಿತಿ ಗತಿ ಬಗ್ಗೆ ಬರೆಯುತ್ತಿದ್ದಾರೆ. ಇತ್ತೀಚಿಗಷ್ಟೆ ಹಿರಿಯ ನಟ ಶನಿಮಹಾದೇವಪ್ಪಾ ಅವರ ಸ್ಥಿತಿ ಬಗ್ಗೆ ಈ ರೀತಿಯಲ್ಲಿ ಬರೆದಿದ್ದಾರೆ. ಮುಂದೆ ಓದಿ
ಚಿತ್ರರಂಗದ ಪ್ರೀತಿಯಿಂದ ಅವಕಾಶ ವಂಚಿತರಾದರು
"ಜಯಲಲಿತಾ ಕರೆದಾಗ ತಮಿಳು ಚಿತ್ರರಂಗಕ್ಕೆ ಎಂಟ್ರಿ ಪಡೆದಿದ್ದರೆ ಈ ಶನಿ ಮಹಾದೇವಪ್ಪನವರು ಅಲ್ಲಿ ಪೋಷಕ ನಟರಾಗಿ ದೊಡ್ಡ ಹೆಸರು ಮತ್ತು ಅಪಾರ ಹಣ ಗಳಿಸಿ ವೃದ್ಧಾಪ್ಯದ ಈ ದಿನಗಳಲ್ಲಿ ಸುಖವಾಗಿ ಬದುಕು ನಡೆಸ ಬಹುದಿತ್ತು. ಆದರೆ ಏನಾಯಿತು ನೋಡಿ : ಕನ್ನಡ ಚಿತ್ರರಂಗದ ಮೇಲಿನ ಅಪಾರ ವ್ಯಾಮೋಹದಿಂದಾಗಿ ಬೆಂಗಳೂರಿನಲ್ಲೇ ಉಳಿದ ಕಾರಣವಾಗಿ ಈಗ ತೀರಾ ದುರ್ಭರ ಬದುಕು ನಡೆಸುವಂಥಾ ದುಃಸ್ಥಿತಿ ನಿರ್ಮಾಣವಾಗಿದೆ.
ಕನ್ನಡ ನಾಡೇ ನಮಗೆ ಚಂದ
'ಕನ್ನಡ ನಾಡಲ್ಲಿ ತಿಳಿ ಗಂಜಿಯನ್ನಾದರೂ ಕುಡಿದು ಬದುಕಿಯೇನು, ತಮಿಳುನಾಡಿನ ಭೂರೀ ಭೋಜನ ಬೇಡ' ಎಂದು ಕನ್ನಡಕ್ಕೆ ಆದ್ಯತೆ ಕೊಟ್ಟ ಶನಿ ಮಹಾದೇವಪ್ಪನವರದ್ದು ಅಪ್ಪಟ ಕನ್ನಡದ ಮನಸ್ಸು. ಇದು ನನ್ನ ಅಭಿಪ್ರಾಯವಲ್ಲ, ಸ್ವತಃ ಶನಿ ಮಹಾದೇವಪ್ಪನವರ ಅಭಿಪ್ರಾಯ!
'ಇಲ್ಲ'ಗಳ ಮಧ್ಯೆ ಶನಿ ಮಹಾದೇವಪ್ಪ
ಆದರೆ ಶನಿಮಹಾದೇವಪ್ಪ ಅವರಿಗೆ ಇದಕ್ಕಾಗಿ ದುಃಖವಿಲ್ಲ, ಪಶ್ಚಾತ್ತಾಪವೂ ಇಲ್ಲ. ಕಣ್ಣು ಕಾಣಿಸುವುದಿಲ್ಲ, ಕಿವಿ ಕೇಳಿಸುವುದಿಲ್ಲ, ನಡೆದಾಡಲು ಸಾಧ್ಯವಿಲ್ಲ, ಹೊಟ್ಟೆ ತುಂಬಾ ಊಟ ಮಾಡಲು ಆರ್ಥಿಕ ಬಲವಿಲ್ಲ. ಈ ಎಲ್ಲಾ 'ಇಲ್ಲ'ಗಳ ನಡುವೆ 90ರ ಹರೆಯದ ಶನಿ ಮಹಾದೇವಪ್ಪನವರು ಜೀವ ಹಿಡಿದುಕೊಂಡಿರುವುದೇ ಹೆಚ್ಚು .
550 ಚಿತ್ರಗಳಲ್ಲಿ ಅಭಿನಯ ಮಾಡಿರುವ ನಟ
ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಒಟ್ಟು ಸುಮಾರು 550 ಚಿತ್ರಗಳಲ್ಲಿ ನಟಿಸಿರುವ ಶನಿ ಮಹಾದೇವಪ್ಪ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿಯವರು. ಕಳೆದ ಐದು ದಶಕಗಳಿಂದ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ದುಡಿಯುತ್ತಿರುವ ಇವರದ್ದು ಈಗ ವಿಶ್ರಾಂತ ಜೀವನ.
ಶನಿದೇವರ ಪಾತ್ರದಲ್ಲಿ ಪ್ರಖ್ಯಾತಿ
'ರಾಜಾವಿಕ್ರಮ' ನಾಟಕದಲ್ಲಿ ಸತತವಾಗಿ ಶನಿದೇವರ ಪಾತ್ರ ನಿರ್ವಹಿಸಿದ್ದರಿಂದಾಗಿ 'ಶನಿ ಮಹದೇವಪ್ಪ' ಎಂಬ ಹೆಸರು ಪರ್ಮನೆಂಟಾಯಿತು! ದುರಾದೃಷ್ಟ ವಕ್ಕರಿಸಿಕೊಂಡಾಗ ತಮ್ಮ ಹೆಸರನ್ನು 'ಶಿವಪ್ರಕಾಶ್' ಎಂದು ಬದಲಾಯಿಸಿಕೊಂಡದ್ದೂ ಇದೆ. ಆದರೂ ಅದೃಷ್ಟ ಖುಲಾಯಿಸದಿದ್ದಾಗ ಮತ್ತೆ ಶನಿ ಮಹಾದೇವಪ್ಪನಾಗಿಯೇ ಮುಂದುವರಿದದ್ದು ಈಗ ಇತಿಹಾಸ. ಇಂಥಾ ಶನಿ ಮಹಾದೇವಪ್ಪನವರು ನಟಿಸಿದ ಪ್ರಮುಖ ಚಿತ್ರಗಳೆಂದರೆ 'ಕವಿರತ್ನ', 'ಕಾಳಿದಾಸ', 'ಅದೇ ಕಣ್ಣು', 'ದೇವತಾ ಮನುಷ್ಯ', 'ಭಕ್ತ ಕುಂಬಾರ', 'ಭಕ್ತ ಪ್ರಹ್ಲಾದ', 'ಬಡವರ ಬಂಧು''ಇತ್ಯಾದಿ.