Don't Miss!
- Automobiles 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಹಾನ್ ಕಲಾವಿದ': ಹೊಸ ಅವತಾರದಲ್ಲಿ ಲೀಲಾ ಪತಿ ಎಜೆ
ದಿಲೀಪ್ ರಾಜ್ ಸಿನಿಮಾ ಹಾಗೂ ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳಲ್ಲಿ ನಟಸಿದ್ದರೂ ಕೂಡ, ಸದ್ಯ ಎಜೆ ಎಂಬ ಹೆಸರಿನಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಹಿಟ್ಲರ್ ಕಲ್ಯಾಣ'ದ ಮೂಲಕ ಖ್ಯಾತಿ ಪಡೆದಿರುವ ದಿಲೀಪ್ ರಾಜ್ ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಪೋಷಕ ನಟನಾಗಿ ಕಿರುತೆರೆಯ ಪಾತ್ರಗಳನ್ನು ನಿರ್ವಹಿಸುತ್ತಿದ್ದ ದಿಲೀಪ್ ರಾಜ್ 'ಬಾಯ್ಫ್ರೆಂಡ್' ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದರು. ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಮಿಲನ', 'ಲವ್ ಗುರು' 'ಯೂಟರ್ನ್' ಚಿತ್ರದಲ್ಲಿ ಪ್ರಮುಖ ಕಾಣಿಸಿಕೊಂಡಿಸಿದ್ದರು. ಮೊದಲಿನಿಂದಲೂ ಬೆಳ್ಳಿ ತೆರೆಯ ಸಂಪರ್ಕವಿರುವ ದಿಲೀಪ್ ರಾಜ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
ನಟನೆ ಜೊತೆಗೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದ ದಿಲೀಪ್ ರಾಜ್, ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಿಗೆ ಬಂಡವಾಳ ಹಾಕಿದ್ದರು. ಸದ್ಯ 'ಹಿಟ್ಲರ್ ಕಲ್ಯಾಣ'ದ ಲೀಲಾ ಪತಿ ಎಜೆ ಪಾತ್ರ ನಿರ್ವಹಿಸುತ್ತಿರುವ ದಿಲೀಪ್ ರಾಜ್ ಕಿರುತೆರೆ ಜೊತೆಗೆ ಹಿರಿತೆರೆ ಮೇಲೂ ಮಿಂಚಲು ಸಿದ್ಧರಾಗಿದ್ದರು, 'ಮಹಾನ್ ಕಲಾವಿದ' ಚಿತ್ರದಲ್ಲಿ ನಾಯಕ ನಟರಾಗಿದ್ದಾರೆ. ಈ ಚಿತ್ರದ ಪೋಸ್ಟರ್ ಈಗಾಗಲೇ ವೈರಲ್ ಆಗುತ್ತಿದ್ದು, ಅಭಿಮಾನಿಗಳು ದಿಲೀಪ್ ರಾಜ್ ಹೊಸ ಅವತಾರಕ್ಕೆ ಹಾಗೂ ಹೊಸ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ದಿಲೀಪ್ ರಾಜ್ ನಟನೆಯ 'ಮಹಾನ್ ಕಲಾವಿದ' ಚಿತ್ರಕ್ಕೆ ಮೊದಲು ಕಲಾವಿದ ಎಂದು ಹೆಸರಿಡಲಾಗಿತ್ತು. ಆದರೆ ಈಗಾಗಲೇ ಕ್ರೇಜಿ ಸ್ಟಾರ್ ರವಿಚಂದ್ರನ್ ನಟನೆ ಕಲಾವಿದ ಚಿತ್ರ ತೆರೆ ಕಂಡು ಹಿಟ್ ಆಗಿದೆ. ದಿಲೀಪ್ ರಾಜ್ ಚಿತ್ರಕ್ಕೆ ರವಿಚಂದ್ರನ್ ಅವರ ಸಲಹೆ ಮೇರೆಗೆ ಸದ್ಯ ಮಹಾನ್ ಕಲಾವಿದ ಎಂದು ಹೆಸರಿಡಲಾಗಿದೆ. ಈ ಬಗ್ಗೆ ಚಿತ್ರತಂಡವೇ ಹೇಳಿಕೊಂಡಿದೆ.
'ಮಹಾನ್ ಕಲಾವಿದ' ಚಿತ್ರವು ಒಬ್ಬ ಕಲಾವಿದನ ಬದುಕು, ಆತನ ಕಷ್ಟ, ಚಿತ್ರರಂಗ ಅಥವಾ ನಟನಾ ರಂಗದಲ್ಲಿ ಆತ ಬದುಕ ಬೇಕಾದರೆ ಪಡಬೇಕಾದ ಶ್ರಮವನ್ನು ತೋರಿಸಲಿದ್ದು, ಓರ್ವ ಕಲಾವಿನ ಬದುಕಿನ ಸುತ್ತವೇ ಕಥೆ ಸುತ್ತಲಿದೆ. 'ಮಹಾನ್ ಕಲಾವಿದ' ಚಿತ್ರಕ್ಕೆ ಅಭಯ್ ಚಂದ್ರ ಆ್ಯಕ್ಷನ್ ಕಟ್ ಹೇಳಿದ್ದು, ಅವರೇ ಸಂಗೀತ ಸಂಯೋಜನೆಯನ್ನು ಸಹ ಮಾಡಿದ್ದಾರೆ. ಇನ್ನು ಭರತ್. ಬಿ ಗೌಡ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದ್ದು, ದಿಲೀಪ್ ರಾಜ್ ಜೊತೆ ಜಾಹ್ನವಿ ರಾಯಲ್ ಹಾಗೂ ಪಲ್ಲವಿ ರಾಜು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಿದ್ದಾರೆ.