ಹೊಂಬಾಳೆ 3 ಸಾವಿರ ಕೋಟಿ ಸ್ಕೆಚ್: ಅಸಲಿ ಆಟ ಮುಂದಿನ ವರ್ಷ!
ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಹೊಂಬಾಳೆ ಸಂಸ್ಥೆ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡ್ತಿದೆ. ಈ ವರ್ಷ 'KGF - 2' ಹಾಗೂ 'ಕಾಂತಾರ' ಬಂಗಾರದ ಬೆಳೆ ತೆಗೆದಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅದ್ಧೂರಿ ಸಿನಿಮಾಗಳನ್ನು ಸಂಸ್ಥೆ ನಿರ್ಮಾಣ ಮಾಡುತ್ತಿದೆ.
ಸದ್ಯ ನಿರ್ಮಾಪಕ ವಿಜಯ್ ಕಿರಗಂದೂರ್ ಇಂಡಿಯನ್ ಎಕ್ಸ್ಪ್ರೆಸ್ಗೆ ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ಮಾಹಿತಿ ನೀಡಿದ್ದಾರೆ. "ಮುಂದಿನ 5 ವರ್ಷಗಳಲ್ಲಿ 3000 ಕೋಟಿ ಬಂಡವಾಳವನ್ನು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸುವುದಾಗಿ ಹೇಳಿದ್ದಾರೆ. ಪ್ರತಿ ವರ್ಷ ಐದಾರು ಸಿನಿಮಾಗಳನ್ನು ನಿರ್ಮಿಸ್ತೀವಿ. ಒಂದೇ ಭಾಷೆಗೆ ಸೀಮಿತಗೊಳ್ಳದೇ ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಸಿನಿಮಾ ಮಾಡ್ತೀವಿ. ನಮ್ಮ ಕಥೆಗಳನ್ನು ಎಲ್ಲರಿಗೂ ತಲುಪಿಸುವ ಕೆಲಸ ಮಾಡುತ್ತೇವೆ. ಹಾಗಾಗಿ ಸಿನಿಮಾ ಕಥೆಗಳಿಗೆ ನಮ್ಮ ಮೊದಲ ಆದ್ಯತೆ" ಎಂದಿದ್ದಾರೆ.

ಬಾಲಿವುಡ್ ಸಿನಿಮಾ ನಿರ್ಮಾಣದ ಬಗ್ಗೆಯೂ ಸುಳಿವು ನೀಡಿದ್ದಾರೆ. KGF ಜೊತೆಗೆ 'ಕಾಂತಾರ' ಹಾಗೂ 'ಸಲಾರ್' ಸಿನಿಮಾ ಸರಣಿಗಳನ್ನು ಮುಂದುವರೆಸುವ ಬಗ್ಗೆ ಉತ್ಸುಕರಾಗಿರುವುದಾಗಿ ಹೇಳಿದ್ದಾರೆ. 2022 ನಮಗೆ ಅದೃಷ್ಣ ತಂದು ಕೊಟ್ಟಿದೆ. ಆದಾಗ್ಯೂ, ನಿಜವಾದ ಸವಾಲು 2023 ರಲ್ಲಿ ಪ್ರಾರಂಭವಾಗುತ್ತದೆ ಎಂದು ಕಿರಗಂದೂರು ಅಭಿಪ್ರಾಯಪಟ್ಟಿದ್ದಾರೆ. ಸರಿಯಾದ ಕಂಟೆಂಟ್ ಆಯ್ಕೆಮಾಡುವ ಮತ್ತು ಸರಿಯಾದ ಮಾರ್ಕೆಟಿಂಗ್ ತಂತ್ರಗಳನ್ನು ರೂಪಿಸುವ ವಿಷಯದಲ್ಲಿ ನಾವು ಇದೀಗ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದ್ದೇವೆ. ಮುಂದಿನ ವರ್ಷ ನಮಗೆ ಸವಾಲಿನದ್ದಾಗಿರುತ್ತದೆ" ಎಂದಿದ್ದಾರೆ.

KGF ಚಿತ್ರದಿಂದ ಕರ್ನಾಟಕದಲ್ಲಿ ಸಿನಿಮಾ ನೋಡುವವರ ಸಂಖ್ಯೆ(ಫುಟ್ ಫಾಲ್) ಹೆಚ್ಚಾಗಿದೆ. ರಾಜ್ಯದಲ್ಲಿ ಥಿಯೇಟರ್ಗಳ ಸಂಖ್ಯೆ ಹೆಚ್ಚಾಗಿದ್ದು, ಇನ್ನು ದೇಶ ವಿದೇಶಗಳಲ್ಲಿ ಕನ್ನಡ ಸಿನಿಮಾಗಳನ್ನು ನೋಡುವ ಆಸಕ್ತಿಯೂ ಹೆಚ್ಚಿದೆ. ಉದಾಹರಣೆಗೆ ಅಮೇರಿಕಾದಲ್ಲಿ ಕನ್ನಡ ಸಿನಿಮಾಗಳಿಗಿಂತ ಹೆಚ್ಚು ತೆಲುಗು ಸಿನಿಮಾಗಳು ಸದ್ದು ಮಾಡುತ್ತಿದ್ದವು. ಈಗ ಅಲ್ಲಿ ಕನ್ನಡ ಸಿನಿಮಾಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ನೋಡುತ್ತಿದ್ದೇವೆ" ಎಂದು ವಿಜಯ್ ಕಿರಗಂದೂರ್ ವಿವರಿಸಿದ್ದಾರೆ.
ಸದ್ಯ 'ರಾಘವೇಂದ್ರ ಸ್ಟೋರ್ಸ್' ರಿಲೀಸ್ಗೆ ರೆಡಿಯಾಗಿದೆ. ಸಲಾರ್, ಟೈಸನ್, ಬಘೀರ, ರಿಚರ್ಡ್ ಆಂಟನಿ, ಧೂಮಂ, ರಘು ಥಾತ ಹೀಗೆ ಸಾಲು ಸಾಲು ಸಿನಿಮಾಗಳನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ.


Click it and Unblock the Notifications











