Don't Miss!
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- News Petrol Price: ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿವರ ತಿಳಿಯಿರಿ
- Finance ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳ ಪರೀಕ್ಷೆಗೆ ಮುಂದಾದ FSSAI
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬಿ ನಿಧನದ ಸುದ್ದಿ ದಾಸನಿಗೆ ತಿಳಿದ 'ಆ ಕ್ಷಣ'ವನ್ನ ವಿವರಿಸಿದ ನಿರ್ಮಾಪಕಿ
Recommended Video
ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನದ ಸುದ್ದಿ ಅದೇಷ್ಟೋ ಅಭಿಮಾನಿಗಳಿಗೆ ಗೊತ್ತಾಗಿದ್ದೇ ಭಾನುವಾರ ಬೆಳಿಗ್ಗೆ. ಶನಿವಾರ ರಾತ್ರಿ ಸುಮಾರು 10 ಗಂಟೆಯ ಆಸುಪಾಸಿಗೆ ಈ ಸುದ್ದಿ ಹೊರಬಿತ್ತಾದರೂ, ಭಾನುವಾರ ಬೆಳಿಗ್ಗೆ ಎದ್ದಾಗ ಅನೇಕರಿಗೆ ಶಾಕ್ ಆಗಿತ್ತು.
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊರದೇಶದಲ್ಲಿದ್ದರು. 'ಯಜಮಾನ' ಚಿತ್ರೀಕರಣಕ್ಕಾಗಿ ಸ್ವೀಡನ್ ದೇಶಕ್ಕೆ ಹೋಗಿದ್ದರು. ನಂತರ ಅಂಬಿ ನಿಧನದ ಸುದ್ದಿ ಗೊತ್ತಾಗುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಬೆಂಗಳೂರಿಗೆ ವಾಪಸ್ ಬರುತ್ತಿರುವುದಾಗಿ ಹೇಳಿದ್ದರು.
ಅಪ್ಪಾಜಿ ದರ್ಶನಕ್ಕಾಗಿ ಸ್ವೀಡನ್ ನಿಂದ ಬಂದಿದ್ದು ದರ್ಶನ್ ಒಬ್ಬರೇ
ಆದ್ರೆ, ಈ ವಿಷ್ಯ ದರ್ಶನ್ ಗೆ ತಿಳಿದಾಗ ಆ ಕ್ಷಣ ಹೇಗಿತ್ತು. ಆಗ ಅವರು ಏನು ಮಾಡಿದ್ರು. ಆ ನೋವನ್ನ ಹೇಗೆ ಭರಿಸಿದರು ಎಂದು ಯಾರಿಗೂ ಗೊತ್ತಿಲ್ಲ. ಆ ಕ್ಷಣವನ್ನ ಯಜಮಾನ ಚಿತ್ರದ ನಿರ್ಮಾಪಕಿ ಶೈಲಾಜ ನಾಗ್ ವಿವರಿಸಿದ್ದಾರೆ. ದರ್ಶನ್ ಈ ಕ್ಷಣ ಹೇಗಿದ್ರು.? ಮುಂದೆ ಓದಿ.....
ಕಣ್ಣಲ್ಲಿ ನೀರು ಬಂತು
'ಅಂಬರೀಶ್ ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನಟ ದರ್ಶನ್ ಒಂದು ಕ್ಷಣ ದಿಗ್ಭ್ರಾಂತರಾಗಿ ಸುಮ್ಮನೆ ಕುಳಿತುಬಿಟ್ಟರಂತೆ. ಕಣ್ಣಲ್ಲಿ ನೀರು ಹರಿದುಬಂದಿತ್ತು. ಮಾತಿಲ್ಲ ಏನಿಲ್ಲ...ಅವರನ್ನ ಸಮಾಧಾನಪಡಿಸುವುದು ಹೇಗೆಂದು ಗೊತ್ತಾಗಲಿಲ್ಲ'' ಎಂದು ಯಜಮಾನ ಚಿತ್ರದ ನಿರ್ಮಾಪಕಿ ಶೈಲಾಜ್ ನಾಗ್ ವಿವರಿಸಿದ್ದಾರೆ.
ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!
ಈಗಲೇ ಹೊರಡಬೇಕು ಎಂದು ಸಿದ್ಧರಾದರು
''ಸುಮಾರು ಹೊತ್ತು ಸುಮ್ಮನೆ ಕೂತಿದ್ದ ದರ್ಶನ್ ನಂತರ ತಾವಾಗಿಯೇ ಎದ್ದು ಬಂದು, ನಾನು ಈಗಲೇ ಹೊರಡಬೇಕು ಎಂದರು. ನೀವೊಬ್ಬರೇ ಅಲ್ಲ, ನಾವೆಲ್ಲಾ ಹೋಗೋಣ ಅಂತ ಅವರನ್ನ ಸಮಾಧಾನ ಪಡಿಸಿದೆವು''
ರಾಜ್ ಸ್ಮಾರಕ ಪಕ್ಕದಲ್ಲೇ ಅಂಬರೀಶ್ ಸಮಾಧಿ: ಅಣ್ಣಾವ್ರ ಕುಟುಂಬ ಹೇಳಿದ್ದೇನು.?
ಟಿಕೆಟ್ ಸಿಕ್ಕಿದ್ದು ಒಂದೇ
ನಂತರ ತುಂಬಾ ಕಷ್ಟಪಟ್ಟು ಟಿಕೆಟ್ ಬುಕ್ ಮಾಡಿದೆವು. ಆದ್ರೆ, ಎಷ್ಟೇ ಕಷ್ಟಪಟ್ಟರೂ ನಮಗೆ ಸಿಕ್ಕಿದ್ದು ಮಾತ್ರ ಒಂದೇ ಟಿಕೆಟ್. ದರ್ಶನ್ ಇದ್ದ ಪರಿಸ್ಥಿತಿಯಲ್ಲಿ ಒಬ್ಬರನ್ನೇ ಕಳುಹಿಸುವುದು ಹೇಗೆ ಎಂಬ ಚಿಂತೆ ನಮಗೆ. ಬಟ್, ಬೇರೆ ದಾರಿ ಇರಲಿಲ್ಲ. ಹಾಗಾಗಿ, ದರ್ಶನ್ ಅವರನ್ನ ಕಳುಹಿಸಿ ನಾವು ಸ್ವೀಡನ್ ನಲ್ಲೇ ಉಳಿದುಕೊಂಡೆವು'' ಎಂದು ನಿರ್ಮಾಪಕಿ ಹೇಳಿದ್ದಾರೆ.
ಅಂಬಿ ಅಂತಿಮ ದರ್ಶನಕ್ಕೆ ಬರಬಾರದೆಂದು ನಿರ್ಧರಿಸಿದ್ದರಂತೆ ರವಿಚಂದ್ರನ್
ದುಬೈನಲ್ಲಿ ತುಂಬಾ ಸಮಯ ಕಾದ ದಾಸ
ಸ್ವೀಡನ್ ನಿಂದ ದುಬೈಗೆ ಬಂದ ದರ್ಶನ್, ದುಬೈನಲ್ಲಿ ಕನೆಕ್ಟಿಂಗ್ ಫ್ಲೈಟ್ ಗಾಗಿ ಸುಮಾರು 4 ಗಂಟೆ ಕಾದಿದ್ದರಂತೆ. ನಂತರ ಬೆಂಗಳೂರು ಫ್ಲೈಟ್ ಹತ್ತಿದ ದಾಸ ಬೆಳಿಗ್ಗೆ ಸೋಮವಾರ 10 ಗಂಟೆ ವೇಳೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ದಿಗ್ಗಜರ ಸ್ಮಾರಕ ವಿಚಾರ: ಖಡಕ್ ಎಚ್ಚರಿಕೆ ನೀಡಿದ ವೀರಕಪುತ್ರ ಶ್ರೀನಿವಾಸ
ಅಂತಿಮ ಕ್ಷಣದವರೆಗೂ ಅಂಬಿ ಜೊತೆಯಲ್ಲಿದ್ದ ಯಜಮಾನ
ಬೆಂಗಳೂರಿಗೆ ಬರುತ್ತಿದ್ದಂತೆ ಕಂಠೀರವ ಸ್ಟೇಡಿಯಂ ಕಡೆ ಆಗಮಿಸಿದ ದರ್ಶನ್, ಮಂಡ್ಯದಿಂದ ಬೆಂಗಳೂರಿಗೆ ಅಂಬಿ ಪಾರ್ಥಿವ ಶರೀರ ಬರುವವರೆಗೂ ಕಾದರು. ಅಂಬಿ ಪಾರ್ಥಿವ ಶರೀರ ಬರುತ್ತಿದ್ದ ಅಂಬುಲೆನ್ಸ್ ಬಳಿ ಹೆಗಲು ಕೊಟ್ಟ ದಾಸ, ಅಂತ್ಯಕ್ರಿಯೆ ಮುಗಿಯವರೆಗೂ ಅಂಬಿ ಪಾರ್ಥಿವ ಶರೀರದ ಬಳಿಯೇ ಇದ್ದರು.
ಅಂಬಿ ಅಂತ್ಯಕ್ರಿಯೆ ವೇಳೆ ಡಿಸಿಪಿ ಅಣ್ಣಾಮಲೈ-ನಟಿ ಜಯಪ್ರದ ನಡುವೆ ಮಾತಿನ ವಾರ್