Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಚ್ಚ ವೆಂಕಟ್ ಗೆ 'ಎಕ್ಕಡ' ಚಿಹ್ನೆ ಸಿಗೋದಕ್ಕೆ ಕಾರಣ ಗೊತ್ತಾ.?
Recommended Video
ಫೈರಿಂಗ್ ಸ್ಟಾರ್ ಹುಚ್ಚ ವೆಂಟಕ್ ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು, ಚುನಾವಣೆ ಆಯೋಗ ವೆಂಕಟ್ ಗೆ ಚಪ್ಪಲಿ ಚಿಹ್ನೆ ನೀಡಿದೆ. ಇದು ಜನಸಾಮಾನ್ಯರಿಗೆ ಅಚ್ಚರಿ ಉಂಟು ಮಾಡಿದೆ. ಯವಾಗಲೂ ನನ್ನ ಎಕ್ಕಡ, ಎಕ್ಕಡ ಎನ್ನುವ ವೆಂಕಟ್ ಗೆ ಎಕ್ಕಡನೇ ಚಿಹ್ನೆ ಆಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಆದ್ರೆ, ವೆಂಕಟ್ ಗೆ ಚಪ್ಪಲಿ ಚಿಹ್ನೆ ಸಿಗಲು ಕಾರಣವೇನು, ಸ್ವತಃ ಹುಚ್ಚ ವೆಂಕಟ್ ಅವರೇ ಕೇಳಿ ಈ ಚಿಹ್ನೆ ಪಡೆದುಕೊಂಡ್ರಾ ಅಥವಾ ಚುನಾವಣೆ ಆಯೋಗವೇ ವೆಂಕಟ್ ಅವರ ಸೆಂಟಿಮೆಂಟ್ ನೋಡಿ ಈ ಚಿಹ್ನೆ ನೀಡಿದ್ಯಾ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿತ್ತು. ಇದಕ್ಕೀಗ ವೆಂಕಟ್ ಉತ್ತರ ನೀಡಿದ್ದಾರೆ.
ಹುಚ್ಚ ವೆಂಕಟ್ ಗೆ 'ಎಕ್ಕಡ' ಚಿಹ್ನೆ ಸಿಕ್ಕಿದೆಯಂತೆ.! ಇದು ನಿಜಾನ.?
ಸ್ವತಃ ವೆಂಕಟ್ ಅವರೇ ಚಪ್ಪಲಿ ಚಿಹ್ನೆಯನ್ನ ಕೇಳಿ ಪಡೆದುಕೊಂಡಿದ್ದಾರಂತೆ. ಮಹಿಳೆಯರ ಬಗ್ಗೆ ಹೆಚ್ಚ ಕಾಳಜಿ ಹೊಂದಿರುವ ವೆಂಕಟ್ ಗೆ ಮಹಿಳೆಯರ ಚಪ್ಪಲಿ ಚಿಹ್ನೆ ಬೇಕಾಗಿತ್ತಂತೆ. ಆದ್ರೆ, ಮಹಿಳೆಯರ ಚಪ್ಪಲಿ ಚಿಹ್ನೆ ಇರಲಿಲ್ಲ. ಹೀಗಾಗಿ, ಗಂಡಸರ ಚಪ್ಪಲಿ ಚಿಹ್ನೆ ಪಡೆದುಕೊಂಡ್ರಂತೆ ಎಂದು ಫೈರಿಂಗ್ ಸ್ಟಾರ್ ಬಹಿರಂಗಪಡಿಸಿದ್ದಾರೆ.
ಹುಚ್ಚ ವೆಂಕಟ್ 'ಆಸ್ತಿ' ವಿವರ ನೋಡಿ ಹೇಳಿ ಈತ 'ಶ್ರೀಮಂತನಾ-ಬಡವನಾ.?
ಇನ್ನು ಚಪ್ಪಲಿ ಚಿಹ್ನೆ ಸಿಕ್ಕಿರೋದ್ರ ಬಗ್ಗೆ ಸಂತಸ ವ್ಯಕ್ತಪಡಿಸಿರುವ ವೆಂಕಟ್ ''ನೀವು ಯಾವತ್ತಾದ್ರು ನಿಮ್ಮ ಅಪ್ಪನಿಗೆ ಚಪ್ಪಲಿ ತೆಗೆದುಕೊಟ್ಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ನನ್ನ ತಂದೆಗೆ ನಾನು ಯಾವತ್ತು ಚಪ್ಪಲಿ ಸಮಾನ. ಇದನ್ನ ಯಾರೂ ನೆಗಿಟೀವ್ ಆಗಿ ತೆಗೆದುಕೊಳ್ಳಬಾರದು. ಯಾರೂ ಮತವನ್ನ ಐನೂರು ಸಾವಿರ ರೂಪಾಯಿಗೋಸ್ಕರ ಮಾಡಿಕೊಳ್ತಿದ್ದಾರೋ ಅವರು ನನ್ ಎಕ್ಕಡದ ಸಮಾನ ಎಂದು ಗುಡುಗಿದ್ದಾರೆ.
ಇನ್ನು ಹುಚ್ಚಾ ವೆಂಕಟ್ ಪಕ್ಷೇತರವಾಗಿ ಚುನಾವಣೆಗೆ ನಿಂತಿದ್ದಾರೆ. ಆದ್ರೆ, ಇವರು ಸ್ಪರ್ಧೆ ಮಾಡುತ್ತಿರುವ ಸಾಮಾನ್ಯವಾದ ವ್ಯಕ್ತಿಗಳ ಎದುರಲ್ಲ, ಹಾಲಿ ಶಾಸಕ ಕಾಂಗ್ರೆಸ್ನ ಮುನಿರತ್ನ ಮತ್ತು ಅಮೂಲ್ಯ ಅವರ ಮಾವ ರಾಮಚಂದ್ರಪ್ಪ ಅವರನ್ನ ಎದುರಿಸುತ್ತಿದ್ದಾರೆ.