Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬೆತ್ತಲೆ' ವಿಡಿಯೋ: ನಿರ್ದೇಶಕರಿಗೆ 'ಕೀಳು' ಭಾಷೆಯಲ್ಲಿ 'ಉಗಿದ' ಹುಚ್ಚ ವೆಂಕಟ್
ಇಷ್ಟು ದಿನ ಸೈಲೆಂಟ್ ಆಗಿದ್ದ ಹುಚ್ಚ ವೆಂಕಟ್ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ವೈಲೆಂಟ್ ಆಗ್ಬಿಟ್ಟಿದ್ರು. ಅದಕ್ಕೆ ಕಾರಣ, ನಟಿ ಸಂಜನಾ ರವರ 'ಬೆತ್ತಲೆ' ವಿಡಿಯೋ.!
ಕಳೆದ ಎರಡು ದಿನಗಳಿಂದ ಕನ್ನಡದ ಯಾವ ನ್ಯೂಸ್ ಚಾನೆಲ್ ಹಾಕಿದರೂ, '2' (ದಂಡುಪಾಳ್ಯ 2) ಚಿತ್ರದಲ್ಲಿ ಸೆನ್ಸಾರ್ ಆಗಿರುವ ಸಂಜನಾ ರವರ 'ಬೆತ್ತಲೆ?' ವಿಡಿಯೋನೇ ಕಣ್ಣಿಗೆ ರಾಚುತ್ತಿದೆ. ಅದನ್ನ ನೋಡಿದ ಮೇಲೆ ''ಐಟಂ ಸಾಂಗ್ ವಿರೋಧಿ'' ಹುಚ್ಚ ವೆಂಕಟ್ ಪಿತ್ತ ನೆತ್ತಿಗೇರಿದೆ.
ಟೆಂಪರ್ ರೈಸ್ ಮಾಡಿಕೊಂಡ ವೆಂಕಟ್, ತಮ್ಮ ಹಳೇ ಸ್ಟೈಲ್ ನಲ್ಲಿ ಕ್ಯಾಮರಾ ಮುಂದೆ ಬಂದು '2' (ದಂಡುಪಾಳ್ಯ 2) ಚಿತ್ರದ ನಿರ್ದೇಶಕ ಶ್ರೀನಿವಾಸ್ ರಾಜುಗೆ ಯರ್ರಾಬಿರ್ರಿ ಉಗಿದಿದ್ದಾರೆ. ತೀರಾ ಕೆಟ್ಟ, ಕೊಳಕು, ಕೀಳು ಭಾಷೆಯಲ್ಲಿ ನಿಂದಿಸಿದ್ದಾರೆ. ಮುಂದೆ ಓದಿರಿ....
ಏಕವಚನ ಪ್ರಯೋಗ
''ಶ್ರೀನಿವಾಸ್ ರಾಜು... ನೀನೊಬ್ಬ ನಿರ್ದೇಶಕನೇನೋ... ಹೆಣ್ಮಕ್ಳು ಅಂದ್ರೆ ಗೊತ್ತೇನೋ...'' ಎಂದು ಏಕವಚನದಲ್ಲಿ 'ಕೊಳಕು ಭಾಷೆ'ಯಲ್ಲಿ ಹುಚ್ಚ ವೆಂಕಟ್ ಆವಾಝ್ ಹಾಕಿದ್ದಾರೆ.
ಹೆಂಗೋ ಇದ್ಯಾ.?
''ಈಗ ಬಿಟ್ಟಿರುವ ವಿಡಿಯೋ ಗ್ರಾಫಿಕ್ಸ್ ಅಥವಾ ನಿಜವೋ ಗೊತ್ತಿಲ್ಲ. ಆದರೆ ಹೆಂಗೋ ಇದ್ಯಾ ನೀನು ಕರ್ನಾಟಕದಲ್ಲಿ.?'' - ಹುಚ್ಚ ವೆಂಕಟ್
ಸಿನಿಮಾ ನೋಡಿದವರಿಗೂ ಉಗಿದ ಹುಚ್ಚ ವೆಂಕಟ್
''ಈಗ ಹೇಳ್ತಾಯಿದ್ದೀನಿ ಕೇಳಿ... ಯಾರ್ಯಾರು ಈ ಸಿನಿಮಾ ನೋಡಿದ್ದಾರೋ... ಥೂ...ನಿಮಗೆಲ್ಲ ಹೆಂಡ್ತಿ, ಮಕ್ಳು ಇಲ್ವಾ.? ಈ ತರಹ ಸಿನಿಮಾ ನೋಡೋದಾ ನೀವು.? ನಾಳೆ ದಿನ ನಿಮ್ಮ ಮನೆ ಹೆಣ್ಮಕ್ಕಳು ಇದೇ ತರಹ ಕೆಟ್ಟದಾಗಿ ನೋಡುತ್ತಾರೆ. ಆಗ ಚಪ್ಪಾಳೆ ಹೊಡೆಯಿರಿ...'' - ಹುಚ್ಚ ವೆಂಕಟ್
ನನ್ ಎಕ್ಕಡ...
''ಈ ಸಿನಿಮಾನ ಗೆಲ್ಲಿಸ್ತೀರಾ.? ನನ್ ಎಕ್ಕಡ... ಒಳ್ಳೊಳ್ಳೆ ಸಿನಿಮಾ ಸೋಲಿಸ್ತೀರಾ.? ನಿಮ್ಮದೂ ಒಂದು ಜನ್ಮನಾ.?'' - ಹುಚ್ಚ ವೆಂಕಟ್
ನೆಮ್ಮದಿ ಆಗಿ ಇರೋಕ್ ಬಿಡ್ಬೇಕ್
''ನಾನು ನೆಮ್ಮದಿ ಆಗಿರೋಕೆ ಬಿಡ್ಬೇಕ್... ನೀವು ಒಳ್ಳೆ ಕೆಲಸ ಮಾಡ್ಕೊಂಡ್ ಇರ್ಬೇಕ್'' ಎಂದು ಎಲ್ಲರಿಗೂ ಹುಚ್ಚ ವೆಂಕಟ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...