Don't Miss!
- Technology ಡೇಟಾ ಬಳಕೆಯಲ್ಲಿ ಚೀನಾ ಮೊಬೈಲ್ ಹಿಂದಿಕ್ಕಿದ ಜಿಯೋ, ಈಗ ವಿಶ್ವದಲ್ಲೇ ದೊಡ್ಡಣ್ಣ!
- News Lok Sabha Elections 2024: ಬೆಂಗಳೂರಿನಲ್ಲಿ ಮತದಾನದ ದಿನ ಏನಿರುತ್ತೆ...ಏನಿರಲ್ಲ..?
- Automobiles ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- Lifestyle Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Finance April 24 Gold Rate: ಚಿನ್ನದ ಬೆಲೆ ಇಳಿಕೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಪೋಲೀಸರ ಅತಿಥಿಯಾದ ಹುಚ್ಚ ವೆಂಕಟ್
Recommended Video
ಹುಚ್ಚ ವೆಂಕಟ್ ಒಂದಲ್ಲ ಒಂದು ವಿಚಾರವಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಕೆಲ ದಿನಗಳು ಸಿನಿಮಾ ವಿಚಾರವಾಗಿ ಸದ್ದು ಮಾಡಿದ ಹುಚ್ಚ ವೆಂಕಟ್ ಈಗ ತನ್ನ ರಂಪಾಟದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ವಿಚಿತ್ರ ಎಂದರೆ ನಟ ಹುಚ್ಚ ವೆಂಕಟ್ ರಂಪಾಟವನ್ನು ನೋಡಲು ಜನರು ಮುಗಿಬಿದ್ದಿರುವ ಘಟನೆ ಉಲ್ಲಾಳದಲ್ಲಿ ನಡೆದಿದೆ. ನಿನ್ನೆ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ ನ ಉಲ್ಲಾಳ ಮುಖ್ಯ ರಸ್ತೆಯಲ್ಲಿ ಹುಚ್ಚ ವೆಂಕಟ್ ಮಟ..ಮಟ..ಮಧ್ಯಾಹ್ನ ಕಂಠ ಪೂರ್ತಿ ಕುಡಿದು ಕುಡುಕರಂತೆ ಓಡಾಡಿದ್ದರು.
ರಚನಾಗೆ ಟಾರ್ಚರ್ ಕೊಟ್ರಾ ಹುಚ್ಚ ವೆಂಕಟ್ ಫ್ಯಾನ್ಸ್.! ಕಾರಣ ಈ ಡೈಲಾಗ್
ಇಂದೂ ಕೂಡ ವೆಂಕಟ್ ಕಾಟಕ್ಕೆ ಅಲ್ಲಿಯ ಜನರು ಬೇಸತ್ತಿದ್ದಾರೆ. ನಿನ್ನೆ ಉಲ್ಲಾಳದ ಬಾರ್ ವೊಂದಲ್ಲಿ ಕುಡಿದು ಹೊರ ಬರುತ್ತಿದ್ದಂತೆ ಸ್ಥಳಿಯರು ಮುಗಿ ಬಿದ್ದು ಸೆಲ್ಫಿ ತೆಗೆದುಕೊಂಡಿದ್ದರು. ಬಳಿಕ ಕೈಯಲ್ಲಿ ಕೂಲ್ ಡ್ರಿಂಕ್ಸ್ ಬಾಟಲ್ ಹಿಡಿದುಕೊಂಡು ತೂರಾಟ ಮಾಡಿ ಎಲ್ಲರ ಚಿತ್ತ ತನ್ನತ್ತ ಬರುವಂತೆ ಮಾಡಿದ್ದರು ಹುಚ್ಚ ವೆಂಕಟ್.
ಇಂದು ಅಂಗಡಿಗಳ ಮುಂದೆ ಹೋಗಿ ರಂಪಾಟ ಮಾಡುತ್ತಿದ್ದ ಕಾರಣ ಅಲ್ಲಿಯ ಜನರು ಕುಡುಕರಂತೆ ವರ್ತಿಸಿದ ಸಮಸ್ಯೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದನ್ನ ಪರಿಗಣಿಸಿದ ಪೋಲೀಸರು ಹುಚ್ಚ ವೆಂಕಟ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.