ಪ್ರೀತಿ ಮಾಡೋರಿಗೆ ಬುದ್ಧಿವಾದ ಹೇಳೋಕೆ ಬಂದ ವೆಂಕಟ್
ಯೋಗರಾಜ್ ಭಟ್ರ ನಿರ್ಮಾಣದಲ್ಲಿ ಮೂಡಿಬಂದಿದ್ದ 'ಪರಪಂಚ' ಚಿತ್ರಕ್ಕೆ 'ಫೈರಿಂಗ್ ಸ್ಟಾರ್' ವೆಂಕಟ್ ಅವರು ಹಾಡಿದ್ದ 'ಹುಟ್ಟಿದ ಊರನ್ನೇ ಬಿಟ್ಟು ಬಂದ ಮ್ಯಾಲೆ' ಹಾಡಂತೂ ಇಡೀ ಗಾಂಧಿನಗರದಲ್ಲಿ ಭಯಂಕರ ಫೇಮಸ್ ಆಗಿರುವ ವಿಚಾರ ನಿಮಗೆ ಗೊತ್ತೇ ಇದೆ.
ಒಂದೇ ಒಂದು ಹಾಡಿನ ಮೂಲಕ ಪ್ರೇಕ್ಷಕರಿಂದ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿಕೊಂಡ 'ಪೈರಿಂಗ್ ಸ್ಟಾರ್' ವೆಂಕಟ್ ಅವರು ಇದೀಗ ಮತ್ತೆ ಹೊಸ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಲು ತಯಾರಾಗಿದ್ದಾರೆ.[ಈ ಹಾಡು ಕೇಳ್ಲೇಬೇಕು! ಇದು ಹುಚ್ಚ ವೆಂಕಟ್ ಆರ್ಡರ್!]

ಹುಚ್ಚ ವೆಂಕಟ್ ಅವರ ಬರೀ ಡೈಲಾಗ್ ಮತ್ತು ಸ್ಟೈಲ್ ಗೆ ಮಾತ್ರವಲ್ಲದೇ, ಇದೀಗ ಅವರ ವಾಯ್ಸ್ ಗೂ ಸಾಕಷ್ಟು ಜನ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಸದ್ಯಕ್ಕೆ ವೆಂಕಟ್ ಅವರು ಹಾಡಲು ತಯಾರಾಗಿರುವ ಮುಂದಿನ ಚಿತ್ರ 'ಫಸ್ಟ್ ಲವ್'.

ಯಾವಾಗಲೂ ಪ್ರೀತಿ ಮತ್ತು ತಾಯಿ ಕಾವೇರಿ ಬಗ್ಗೆ ಬಹಳ ಭಾವುಕರಾಗಿ ಮಾತನಾಡುವ ಹುಚ್ಚ ವೆಂಕಟ್ ಅವರು ಆರ್ ಜೆ ರಾಜೇಶ್ ಮತ್ತು 'ಲಕ್ಷ್ಮಿ ಬಾರಮ್ಮ' ಸೀರಿಯಲ್ ಖ್ಯಾತಿಯ ನಟಿ ಕವಿತಾ ಗೌಡ ನಟಿಸಿರುವ 'ಫಸ್ಟ್ ಲವ್' ಎಂಬ ಚಿತ್ರಕ್ಕೆ ಒಂದು ಸುಂದರ ಹಾಡನ್ನು ಹಾಡಿದ್ದಾರೆ.[ಭಟ್ರ ಸಾಹಿತ್ಯಕ್ಕೆ ಗಾನ ಸುಧೆ ಹರಿಸಿದ ಹುಚ್ಚ ವೆಂಕಟ್.!]

ನಿರ್ದೇಶಕ ಆಯುಷ್ಮಾನ್ ಆಕ್ಷನ್-ಕಟ್ ನಲ್ಲಿ ಮೂಡಿಬರುತ್ತಿರುವ 'ಫಸ್ಟ್ ಲವ್' ಚಿತ್ರಕ್ಕೆ ಸಂಗೀತ ನಿರ್ದೇಶಕ ವಿ.ಶ್ರೀಧರ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಪ್ರೀತಿ ಮಾಡೋರಿಗೆ ಬುದ್ಧಿಮಾತು ಹೇಳುವ ಹಾಡನ್ನು 'ಫೈರಿಂಗ್ ಸ್ಟಾರ್' ವೆಂಕಟ್ ಅವರಿಂದ ಹಾಡಿಸಲಾಗುತ್ತಿದೆ. ಮಾತ್ರವಲ್ಲದೇ, ಈ ಹಾಡಿಗೆ ಖುದ್ದು ವೆಂಕಟ್ ಅವರೇ ಅಭಿನಯಿಸಿದ್ದಾರೆ.

'ವಿಷ್ಣುದಾದ' ಅವರ ದೊಡ್ಡ ಅಭಿಮಾನಿಯಾಗಿರುವ 'ಫೈರಿಂಗ್ ಸ್ಟಾರ್' ವೆಂಕಟ್ ಅವರು 'ಪರಪಂಚ' ಚಿತ್ರದಲ್ಲಿ ಹಾಡಿದ್ದ ಮೀನಿಂಗ್ ಫುಲ್ ಹಾಡಿಗೆ ಇಡೀ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಇದೀಗ 'ಫಸ್ಟ್ ಲವ್' ಚಿತ್ರದ ಹಾಡು ಹೇಗಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಸ್ವಲ್ಪ ಹೆಚ್ಚಾಗೇ ಇದೆ.


Click it and Unblock the Notifications











