Just In
Don't Miss!
- News
ತಾಜ್ಮಹಲ್ಗೆ ಬಾಂಬ್ ಬೆದರಿಕೆ; ಪ್ರವಾಸಿಗರನ್ನು ತೆರವುಗೊಳಿಸಿದ ಪೊಲೀಸರು
- Automobiles
ಖಾಲಿ ಜಾಗಗಳಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳು
- Finance
ಏರಿಕೆಯಾಗಿದ್ದ ಸೆನ್ಸೆಕ್ಸ್ ಕುಸಿತ: 716 ಪಾಯಿಂಟ್ಸ್ ಇಳಿಕೆ
- Education
DFCCIL Recruitment 2021: 1099 ಜ್ಯೂನಿಯರ್ ಮ್ಯಾನೇಜರ್ ಮತ್ತು ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಭಾರತ vs ಇಂಗ್ಲೆಂಡ್: ಧೋನಿ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ
- Lifestyle
ಈ 7 ಬಗೆಯ ಆಹಾರಗಳು ಕೂದಲು ಉದುರುವ ಸಮಸ್ಯೆ ಹೆಚ್ಚಿಸುವುದು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪವನ್ ಕಲ್ಯಾಣ್ ರನ್ನ ಮನೆಗೆ ಕಳುಹಿಸಿದ ಪೊಲಿಟಿಷಿಯನ್
ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕನ್ನಡ ಸಿನಿಮಾ ಪ್ರಿಯರಿಗೆ ಮನೋರಂಜನೆ ನೀಡಲೆಂದು ಹಂಬಲ್ ಪೊಲಿಟಿಷಿಯನ್ ನಾಗರಾಜ್ ಸಿನಿಮಾ ರಾಜ್ಯಾದಂತ್ಯ ತೆರೆಕಂಡಿತ್ತು. ಮೊದಲ ಬಾರಿಗೆ ಡ್ಯಾನಿಶ್ ಸೇಠ್ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಚಿತ್ರದ ಟೀಸರ್ ನಿಂದ ಸಾಕಷ್ಟು ಕುತೂಹಲ ಮೂಡಿಸಿದ್ದ ಹಂಬಲ್ ಪೊಲಿಟಿಷಿಯನ್ ನಾಗರಾಜ್ ಈಗ ಜನರ ಮನಸ್ಸನ್ನ ಗೆಲ್ಲುವುದರ ಜೊತೆಗೆ ಪರಭಾಷೆಯ ಸಿನಿಮಾಗಳಿಗೆ ಸೆಡ್ಡು ಹೊಡೆದಿದೆ.
ಹಂಬಲ್ ಪೊಲಿಟಿಷಿಯನ್ ನಾಗರಾಜ್ ಸಿನಿಮಾ ಜೊತೆಯಲ್ಲಿ ಪವನ್ ಕಲ್ಯಾಣ್ ಅಭಿನಯದ ಅಜ್ಞಾತವಾಸಿ ಚಿತ್ರ ಕೂಡ ಬಿಡುಗಡೆ ಆಗಿತ್ತು. ಸಿನಿಮಾವನ್ನ ಬೆಳ್ಳಂಬೆಳಗ್ಗೆ ನೋಡಿದ ಪ್ರೇಕ್ಷಕರು ಅಜ್ಞಾತವಾಸಿಯನ್ನ ನೋಡದೆ ಇರುವುದೇ ವಾಸಿ ಎಂದು ಅಭಿಪ್ರಾಯ ಪಟ್ಟಿದ್ದರು.
ಇದೇ ಕಾರಣದಿಂದ ಈಗ ಅಜ್ಞಾತವಾಸಿ ಚಿತ್ರ ಬಿಡುಗಡೆ ಆಗಿದ್ದ ಚಿತ್ರಮಂದಿರಗಳಲ್ಲಿ ಹಂಬಲ್ ಪೊಲಿಟಿಷಿಯನ್ ನಾಗರಾಜ್ ಚಿತ್ರವನ್ನ ಹಾಕಲಾಗಿದೆಯಂತೆ. ಉತ್ತಮವಾದ ಕನ್ನಡ ಸಿನಿಮಾ ಮುಂದೆ ಯಾವುದೇ ಪರಭಾಷೆಯ ಸಿನಿಮಾಗಳ ನಿಲ್ಲುವುದಿಲ್ಲ ಎನ್ನುವುದು ಈ ಮೂಲಕ ಸಾಭೀತಾಗಿದೆ.
ಹಂಬಲ್ ಪೊಲಿಟಿಷಿಯನ್ ನಾಗರಾಜ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಊರ್ವಶಿ, ರೆಕ್ಸ್, ಶ್ರೀನಿವಾಸ ಥಿಯೇಟರ್ ನಲ್ಲಿ ಪವನ್ ಕಲ್ಯಾಣ್ ಚಿತ್ರವನ್ನ ವಾರಕ್ಕೂ ಮುಂಚೆಯೇ ತೆಗೆದು ಹಾಕಲಾಗಿದೆ.
ಹಂಬಲ್ ಪೊಲಿಟಿಷಿಯನ್ ನಾಗರಾಜ್ ಸಿನಿಮಾದಲ್ಲಿ ಡ್ಯಾನಿಶ್ ಸೇಠ್ ನಾಯಕನಾಗಿ ಅಭಿನಯಿಸಿದ್ರೆ ರೋಜರ್ ನಾರಾಯಣ್, ಶೃತಿ ಹರಿಹರನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.