'ರಾಜಕುಮಾರ' ಪ್ರದರ್ಶನದ ವೇಳೆ ಎ.ಸಿ ಹಾಕಿಲ್ಲವೆಂದು ಮೈಸೂರಿನಲ್ಲಿ ಗಲಾಟೆ
ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ಪ್ರದರ್ಶನದ ವೇಳೆ ಎಸಿ ಹಾಕದ ಕಾರಣ ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಗಲಾಟೆ ನಡೆಸಿ ಕೆಲ ಕಾಲ ಗೊಂದಲ ಉಂಟಾದ ಘಟನೆ ನಡೆದಿದೆ.
ಮಾಲ್ ಆಫ್ ಮೈಸೂರಿನ ಐನಾಕ್ಸ್ ಸಿಬ್ಬಂದಿ ಮತ್ತು ಪ್ರೇಕ್ಷಕರ ನಡುವೆ ಎಸಿ ಹಾಕದ ವಿಚಾರಕ್ಕೆ ವಾಗ್ವಾದ ನಡೆಯಿತು. ನಂತರ ಪ್ರೇಕ್ಷಕರ ಒತ್ತಾಯದ ಮೆರೆಗೆ ಎಸಿ ವ್ಯವಸ್ಥೆ ಕಲ್ಪಿಸಲಾಯಿತು. ಈ ಹಿನ್ನಲೆಯಲ್ಲಿ ಅರ್ಧಗಂಟೆಯ ನಂತರ ಚಿತ್ರಮಂದಿರದಲ್ಲಿ ಮತ್ತೆ ಪ್ರದರ್ಶನ ಶುರುವಾಯಿತು ಎನ್ನಲಾಗುತ್ತಿದೆ.[ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಘೋರ ಅವಮಾನ: ಇಂಥ ಮಾಲ್ ಗಳು ಬೇಕಾ.?]

ಎರಡು ದಿನಗಳ ಇತಂಹದ್ದೆ ಘಟನೆ ಬೆಂಗಳೂರಿನ ಎಲಿಮೆಂಟ್ ಮಾಲ್ ನಲ್ಲೂ ನಡೆದಿದೆ. 'ರಾಜಕುಮಾರ' ಚಿತ್ರದ ಪ್ರದರ್ಶನ ವೇಳೆ ಎ.ಸಿ ಹಾಕಿಲ್ಲವೆಂದು ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿ ಮಾಲ್ ಸಿಬ್ಬಂದಿಯೊಡನೆ ಜಗಳವಾಡಿದ್ದರು. ಇದು ಸೋಶಿಯಲ್ ಮಿಡಿಯಾದಲ್ಲಿ ಹೆಚ್ಚು ಸುದ್ದಿಯಾಗಿತ್ತು.
More from Filmibeat
English summary
Kannada Cinema Audience were humiliated in Inox Mall In Mysore by not facilitating Air Condition during Kannada Movie 'Raajakumara' show
mysore kannada cinema sandalwood controversy multiplex ಮೈಸೂರು ಕನ್ನಡ ಸಿನಿಮಾ ಸ್ಯಾಂಡಲ್ ವುಡ್ ವಿವಾದ ಮಲ್ಟಿಪ್ಲೆಕ್ಸ್


Click it and Unblock the Notifications











