Don't Miss!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Technology AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಬೆಲೆ ಎಷ್ಟು ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಗೀತಾಗೋವಿಂದಂ' ಚಿತ್ರದಲ್ಲಿ ರಶ್ಮಿಕಾ ಪಾತ್ರ ಈ ನಟಿ ಮಾಡಬೇಕಿತ್ತು.!
ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು 'ಗೀತಾ ಗೋವಿಂದಂ' ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ.
'ಅರ್ಜುನ್ ರೆಡ್ಡಿ' ಖ್ಯಾತಿಯ ನಟ ವಿಜಯ ದೇವರಕೊಂಡ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ರಶ್ಮಿಕಾ ಮತ್ತು ದೇವರಕೊಂಡ ಜೋಡಿಯ ನೋಡಿದ ಪ್ರತಿಯೊಬ್ಬ ಪ್ರೇಕ್ಷಕ ಕೂಡ ಇವರಿಬ್ಬರ ಕಾಂಬಿನೇಷನ್ ಕಂಡು ಚಪ್ಪಾಳೆ ಹೊಡೆದಿದ್ದರು. 'ದಿ ಬೆಸ್ಟ್ ಪೇರ್' ಎಂದು ಹಾಡಿ ಹೊಗಳಿದ್ದರು.
ತೆಲುಗು ಇಂಡಸ್ಟ್ರಿಯಂತೂ ರಶ್ಮಿಕಾ ಮಂದಣ್ಣ ಅವರನ್ನ ತಲೆ ಮೇಲೆ ಕೂರಿಸಿಕೊಂಡಿದೆ. ಅಷ್ಟರ ಮಟ್ಟಿಗೆ ರಶ್ಮಿಕಾ ಮೋಡಿ ಮಾಡಿದ್ದಾರೆ. ಈ ಚಿತ್ರ ನೋಡಿ ಮತ್ತಷ್ಟು ತೆಲುಗು ಪ್ರೊಡ್ಯೂಸರ್ ಕಿರಿಕ್ ಚೆಲುವೆಗೆ ಆಫರ್ ನೀಡುತ್ತಿದ್ದಾರೆ. ಇಷ್ಟೆಲ್ಲಾ ಹವಾ ಮಾಡಿರುವ ರಶ್ಮಿಕಾ, ಈ ಪಾತ್ರಕ್ಕೆ ಆಯ್ಕೆಯಾಗಿದ್ದು ಅದೃಷ್ಟವೇ ಸರಿ. ಯಾಕಂದ್ರೆ, ರಶ್ಮಿಕಾಗೂ ಮೊದಲೇ ಈ ಸಿನಿಮಾ ಇನ್ನೊಬ್ಬ ನಟಿಗೆ ಹೋಗಿತ್ತು. ಯಾರು ಆ ನಟಿ.?
ರಶ್ಮಿಕಾ ಎರಡನೇ ಆಯ್ಕೆ
'ಗೀತಾ ಗೋವಿಂದಂ' ಚಿತ್ರಕ್ಕೆ ರಶ್ಮಿಕಾ ಎರಡನೇ ಆಯ್ಕೆಯಾಗಿದ್ದರು ಎಂಬುದು ಈಗ ಬಹಿರಂಗವಾಗಿದೆ. ಅದಕ್ಕೂ ಮುಂಚೆ ಮತ್ತೊಬ್ಬ ನಟಿಗೆ ಈ ಅವಕಾಶ ಹೋಗಿತ್ತು. ಆದ್ರೆ, ಆ ನಟಿ ಒಪ್ಪಿಕೊಂಡಿರಲಿಲ್ಲ. ನಂತರ ರಶ್ಮಿಕಾ ಅವರನ್ನ ನೋಡಿದ ನಿರ್ದೇಶಕ 'ಇವರೇ ನಮ್ಮ ಚಿತ್ರಕ್ಕೆ ನಾಯಕಿ' ಎಂದು ಫಿಕ್ಸ್ ಆದರಂತೆ.
ಇವರೇ ಆ ನಟಿ...
ರಶ್ಮಿಕಾ ಮಂದಣ್ಣಗೂ ಮೊದಲ 'ಗೀತಾ ಗೋವಿಂದಂ' ಸಿನಿಮಾ ಮಾಡಬೇಕಿದ್ದ ನಟಿ ಅನು ಎಮ್ಮನ್ಯುಲ್. ಬಂದ ಅವಕಾಶವನ್ನ ದೂರ ಮಾಡಿಕೊಂಡಿದ್ದಕ್ಕೆ ಈಗ ಬೇಸರಗೊಂಡಿದ್ದಾರೆ. ಅಯ್ಯೂ ಎಂತಹ ಚಾನ್ಸ್ ಮಿಸ್ ಮಾಡಿಕೊಂಡ್ನಲ್ಲ ಅಂತ ಕೊರಗುತ್ತಿದ್ದಾರಂತೆ.
'ಗೀತಾಗೋವಿಂದಂ' ಯಾಕೆ ಒಪ್ಪಿಕೊಂಡಿಲ್ಲ
ಅನು ಎಮ್ಮನ್ಯುಲ್ ವಿಜಯ್ ದೇವರಕೊಂಡ ಅವರ ಗೀತಾಗೋವಿಂದ ಸಿನಿಮಾ ಒಪ್ಪಿಕೊಳ್ಳಲು ಕಾರಣ ಬ್ಯುಸಿ ಶೆಡ್ಯೂಲ್ ಅಂತೆ. ಈ ಸಿನಿಮಾ ಆಫರ್ ಬಂದಾಗ ಅಲ್ಲು ಅರ್ಜುನ್ ಅಭಿನಯದ 'ನಾ ಪೇರು ಸೂರ್ಯ ನಾ ಇಲ್ಲು ಪೇರು ಇಂಡಿಯಾ' ಸಿನಿಮಾ ಮಾಡ್ತಿದ್ದರಂತೆ. ಅದರ ಜೊತೆಗೆ 'ಶೈಲಜಾರೆಡ್ಡಿ ಅಲ್ಲುಡು' ಸಿನಿಮಾ ಬಂತಂತೆ.
ಕಥೆ ತುಂಬಾ ಇಷ್ಟ ಆಗಿತ್ತಂತೆ
ಗೀತಾಗೋವಿಂದಂ ಚಿತ್ರದ ಗೀತಾ ಪಾತ್ರ ಮತ್ತು ಇಡೀ ಸಿನಿಮಾ ಕಥೆ ಅನು ಎಮ್ಮನ್ಯುಲ್ ಗೆ ತುಂಬಾ ಇಷ್ಟ ಆಗಿತ್ತಂತೆ. ಸಿನಿಮಾ ಮಾಡಬೇಕೆಂಬ ಆಸೆಯಿತ್ತಂತೆ. ಅದು ಬೇರೆ 'ಅರ್ಜುನ್ ರೆಡ್ಡಿ' ಸಿನಿಮಾ ಇನ್ನು ಬಿಡುಗಡೆಯಾಗಿರಲಿಲ್ಲ ಎಂಬ ಭಾವನೆ ಬೇರೆ ಇತ್ತಂತೆ. ಹಾಗಾಗಿ, ಸಿನಿಮಾವನ್ನ ಒಪ್ಪಿಕೊಳ್ಳಲು ಆಗಿಲ್ಲ ಎಂದು ಹೇಳಿಕೊಂಡಿದ್ದಾರೆ ಅನು.
ಖಿನ್ನತೆಗೆ ಒಳಗಾಗಿದ್ದರು
ಈ ಮಧ್ಯೆ ಅನು ಅಭಿನಯದ ಕೆಲವು ಚಿತ್ರಗಳು ಫ್ಲಾಫ್ ಆಗಿತ್ತು. ಪವನ್ ಕಲ್ಯಾಣ್ ಜೊತೆಯಲ್ಲಿ ಅಭಿನಯಿಸಿದ ಅಜ್ಞಾತವಾಸಿ ಅಂತಹ ದೊಡ್ಡ ಸಿನಿಮಾ ಮಕಾಡೆ ಮಲಗಿತ್ತು. ಇದು ಸಹಜವಾಗಿ ನನ್ನನ್ನು ಖಿನ್ನತೆಗೆ ಗುರಿ ಮಾಡಿತ್ತು ಎಂದು ನಟಿ ಅನು ಸಂದರ್ಶನದಲ್ಲಿ ಹೇಳಿದ್ದಾರೆ.