Don't Miss!
- Finance ಅನಂತ್ ಅಂಬಾನಿ ರಾಧಿಕ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಖರ್ಚಾದ ಹಣ?
- News ಜನ ಸೇವಕನಾಗಿ ದುಡಿಯಲು ನನಗೊಂದು ಅವಕಾಶ ಕೊಡಿ: ವಿನೋದ್ ಅಸೂಟಿ
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ಬಾಸ್ ಸ್ಪರ್ಧಿ ದಿವಾಕರ್ ವಿರುದ್ಧ ದೂರು ಕೊಡುತ್ತೇನೆಂದ ಅಹೋರಾತ್ರ?
ಆನ್ಲೈನ್ ರಮ್ಮಿ ವಿರುದ್ಧ ಸಮರ ಸಾರಿರುವ ಅಹೋರಾತ್ರ, ತಮ್ಮ ಫೇಸ್ಬುಕ್ನಲ್ಲಿ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಸುದೀಪ್ ವಿರುದ್ಧ, ರಮ್ಮಿ ಆಟದ ವಿರುದ್ಧ ಪೋಸ್ಟ್ಗಳನ್ನು ಹಾಕುತ್ತಲಿರುತ್ತಾರೆ.
Recommended Video
ಇದಕ್ಕೆ ಪ್ರತಿರೋಧವಾಗಿ ಹಲವಾರು ಸುದೀಪ್ ಅಭಿಮಾನಿಗಳು ಅಹೋರಾತ್ರಗೆ ಕರೆ ಮಾಡಿ ಒರಟಾಗಿ ಮಾತನಾಡಿದ್ದರು. ಕೆಲವರು ಬೆದರಿಕೆಯನ್ನೂ ಹಾಕಿದ್ದರು. ಈ ಬಗ್ಗೆ ಅಹೋರಾತ್ರ ದೂರು ಸಹ ನೀಡಿದ್ದರು.
ಅಹೋರಾತ್ರ ಅವರಿಗೆ ಇದೇ ವಿಷಯವಾಗಿ ದಿನಾಕರ್ ಎಂಬಾತ ಕರೆ ಮಾಡಿದ್ದು, 'ದಿವಾಕರ್ ಬಿಗ್ಬಾಸ್ ಕಿಚ್ಚ' ಎಂಬ ಕಾಲರ್ ಐಡಿ ಪ್ರಕಟವಾಗಿದೆ. ಇದು ಬಿಗ್ಬಾಸ್ನಲ್ಲಿ ರನ್ನರ್ ಅಪ್ ಆಗಿದ್ದ ದಿವಾಕರ್ ಅವರದ್ದೇ ಕರೆ ಎನ್ನಲಾಗುತ್ತಿದೆ.
ಆನ್ಲೈನ್ ರಮ್ಮಿ ವಿಷಯವಾಗಿ ಕರೆ
ಆನ್ಲೈನ್ ರಮ್ಮಿ ವಿಷಯವಾಗಿ ಮಾತನಾಡಲೆಂದು ದಿವಾಕರ್ ಅಹೋರಾತ್ರ ಗೆ ಕರೆ ಮಾಡಿದ್ದಾರೆ. ಆದರೆ ರಮ್ಮಿ ಕುರಿತು ಮಾತು ಸೀಮಿತಗೊಳ್ಳದೆ ಪರಸ್ಪರ ನಿಂದನೆ ಕಡೆ ಮಾತುಗಳು ಹರಿದಿರುವುದು ಆಡಿಯೋ ಕ್ಲಿಪ್ ಕೇಳಿದರೆ ತಿಳಿದುಬರುತ್ತದೆ.
'ದೂರು ನೀಡುವುದು ಖಂಡಿತ'
ದಿವಾಕರ್ ಕರೆ ಮಾಡಿರುವ ಬಗ್ಗೆ ಫೇಸ್ಬುಕ್ ಪೋಸ್ಟ್ ಬರೆದಿರುವ ಅಹೋರಾತ್ರ, 'ನನ್ನನ್ನು ಪಾಕಿಸ್ತಾನಿ' ಎಂದ ಈತನ ಮೇಲೆ ದೂರು ನೀಡುವುದು ಖಂಡಿತ ಎಂದಿದ್ದಾರೆ.
ಪಾಕಿಸ್ತಾನದವರಾ? ಎಂದು ಕೇಳಿದ ದಿವಾಕರ್
ಅಹೋರಾತ್ರ ಜೊತೆ ಮಾತನಾಡುತ್ತಾ 'ನೀವು ಕರ್ನಾಟಕದವರಾ?' ಎಂದು ದಿವಾಕರ್ ಕೇಳುತ್ತಾರೆ. ಆಗ ಅದಕ್ಕೆ ಅಹೋರಾತ್ರಾ ಉತ್ತರಿಸುವುದಿಲ್ಲ, ಆಗ ದಿವಾಕರ್, ನೀವು ಭಾರತದವರಾ ಅಥವಾ ಪಾಕಿಸ್ತಾನದವರಾ? ಎಲ್ಲಿಯವರು ನೀವು? ಎನ್ನುತ್ತಾರೆ. ಇದಕ್ಕೆ ಅಹೋರಾತ್ರ ಸಿಟ್ಟಿಗೇಳುತ್ತಾರೆ.
ಬೆದರಿಕೆ ಹಾಕಿದರೇ ದಿವಾಕರ್
ದಿವಾಕರ್ ಮತ್ತು ತಮ್ಮ ನಡುವೆ ನಡೆದ ಮಾತುಕತೆಯನ್ನು ಅಹೋರಾತ್ರ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ದಿವಾಕರ್ ಯಾವ ಬೆದರಿಕೆ ಹಾಕಿಲ್ಲವಾದರೂ, ಅಹೋರಾತ್ರ ಅವರನ್ನು ವ್ಯಂಗ್ಯ ಮಾಡುವ, ಹೀಗಳೆಯು ಪ್ರಯತ್ನ ಮಾಡಿದರು. ಅಹೋರಾತ್ರ ಸಹ ದಿವಾಕರ್ ಅವರನ್ನು ನಿಂದಿಸಿದರು, ವ್ಯಂಗ್ಯ ಮಾಡಿದ್ದಾರೆ.