Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮದ್ಯಪಾನ,ಸಿಗರೇಟು ಜಾಹೀರಾತಿಗೆ ವಿವೇಕ್ ಕೊಕ್
ಕಂಪನಿ ಚಿತ್ರದ ಮೂಲಕ ನನಗೆ ಬ್ರೇಕ್ ಸಿಕ್ಕಿತು. ಅದರಲ್ಲಿ ನೆಗಟಿವ್ ಪಾತ್ರ ನಿರ್ವಹಿಸಿದ್ದನಾದರೂ, ಮುಂದೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸಹಾಯಕವಾಗುವ ಜಾಹೀರಾತಿನಲ್ಲಿ ಕಾಣಿಸಲಿಲ್ಲ.ಸ್ಟಾರ್ ಗಿರಿ ಶಾಶ್ವತವಲ್ಲ ಆದರೆ, ಜನರ ಮನಸ್ಸಿನಲ್ಲಿ ಒಬ್ಬ ಚಾಲ್ತಿಯಲ್ಲಿರುವ ನಟ ಹೇಳುವ ಮಾತುಗಳು, ಜಾಹೀರಾತಿನಲ್ಲಿ ಪ್ರಚಾರಕ್ಕಾಗಿ ಮಾಡುವ ಗಿಮಿಕ್ ಬಹುಕಾಲ ಉಳಿಯುತ್ತದೆ. ಆದ್ದರಿಂದ ನಾವು ಶುದ್ಧರಾಗಿ, ಜನರಿಗೂ ಶುದ್ಧತೆಯ ಬಗ್ಗೆ ಮಾತ್ರ ತಿಳಿಸುವುದು ಒಳ್ಳೆಯದು ಎಂದರು.
ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಗೋಸಂರಕ್ಷಣಾ ಜಾಥದ ಪ್ರಮುಖ ಪ್ರಚಾಕರಲ್ಲಿ ಒಬ್ಬರಾದ ವಿವೇಕ್ ಒಬೆರಾಯ್, ಸುನಾಮಿ ಕಾಲದಲ್ಲೂ ಜನಸೇವೆ ಮಾಡಿ ಹೆಸರಾಗಿದ್ದರು. ಒಂದೆಡೆ ಕಿಂಗ್ ಖಾನ್ ಶಾರುಖ್ , ಸಾರ್ವಜನಿಕವಾಗಿ ಸಿಗರೇಟ್ ಸೇವಿಸಿ, ಕೇಂದ್ರ ಸಚಿವಾಲಯದ ಕೋಪಕ್ಕೆ ಗುರಿಯಾಗಿ, ಸುದ್ದಿಯಾಗಿದ್ದರು. ಆದರೆ, ಅದರಿಂದ, ಅವರ ಸಿಗರೇಟ್ ಸೇವನೆ ಏನೂ ಕಮ್ಮಿಯಾದಂತಿಲ್ಲ.
ಇನ್ನೊಂದೆಡೆ ವಿವೇಕ್ ಒಬೆರಾಯ್ ವಿವೇಕಯುಕ್ತ ಮಾತುಗಳನ್ನು ಆಡುವುದಷ್ಟೇ ಅಲ್ಲದೆ, ನುಡಿದಂತೆ ನಡೆವ ವಚನ ಪಾಲಿಸುವ ಪಣ ತಟ್ಟಿದ್ದಾರೆ. ಇದು ಬಾಲಿವುಡ್ ಸ್ಟಾರ್ ಗಳ ಭಿನ್ನರುಚಿಗೆ ಸೋದಾಹರಣೆ ಎನ್ನಬಹುದು.