Don't Miss!
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚುನಾವಣಾ ಪ್ರಚಾರಕ್ಕೆ ಯಶ್ ಬರಬೇಕಂದ್ರೆ ರಾಜಕಾರಣಿಗಳು 'ಈ' ಕಂಡೀಷನ್ ನ ಒಪ್ಪಿಕೊಳ್ಳಲೇಬೇಕು.!
Recommended Video
ಕರ್ನಾಟಕದಲ್ಲಿ ಚುನಾವಣಾ ಕಣ ರಂಗೇರಿದೆ. ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವಾಗಲೇ, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಅಭ್ಯರ್ಥಿಗಳ ಪರ ಸೆಲೆಬ್ರಿಟಿಗಳು ಪ್ರಚಾರ ಮಾಡುವುದು ಮಾಮೂಲು. ರಾಜಕೀಯ ಪಕ್ಷಗಳ ಪರ ಸ್ಟಾರ್ ಕ್ಯಾಂಪೇನರ್ ಗಳು ಚುನಾವಣಾ rally ಯಲ್ಲಿ ಪಾಲ್ಗೊಳ್ಳುವುದು ಕೂಡ ಕಾಮನ್. ಹೀಗಿರುವಾಗ, ರಾಕಿಂಗ್ ಸ್ಟಾರ್ ಯಶ್ ಯಾವ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಾರೆ.? ಯಾವ ಅಭ್ಯರ್ಥಿ ಪರ ಕ್ಯಾಂಪೇನ್ ಮಾಡುತ್ತಾರೆ.? ಎಂಬ ಕುತೂಹಲ ಹಲವರಲ್ಲಿ ಕಾಡುತ್ತಿದೆ.
ಈ ಕುತೂಹಲಕ್ಕೆ ನಟ ಯಶ್ ಬ್ರೇಕ್ ಹಾಕಿದ್ದಾರೆ. ಒಂದು ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುವ ಬಗ್ಗೆ ಯಶ್ ಇನ್ನೂ ನಿರ್ಧಾರ ಮಾಡಿಲ್ಲ. ಆದ್ರೆ, ಅಭ್ಯರ್ಥಿ ಪರ ಪ್ರಚಾರ ಮಾಡಬೇಕು ಅಂತಾದರೆ, ಯಶ್ ಹಾಕುವ ಒಂದು ಕಂಡೀಷನ್ ಗೆ ಆ ಅಭ್ಯರ್ಥಿ ಒಪ್ಪಿಕೊಳ್ಳಲೇಬೇಕು. ಏನು ಆ ಕಂಡೀಷನ್ ಅಂದ್ರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ..
ಪಕ್ಷದ ಪರವಾಗಿ ಪ್ರಚಾರ ಮಾಡ್ತಾರಾ ಯಶ್.?
''ಪ್ರತಿ ಒಂದು ಕ್ಷೇತ್ರದಲ್ಲಿಯೂ ಅದರದ್ದೇ ಆದ ಸಮಸ್ಯೆಗಳು ಇವೆ. ಹೀಗಾಗಿ ಯಾವುದೋ ಒಂದು ಪಕ್ಷದ ಪರ ಪ್ರಚಾರ ಮಾಡುವ ಬಗ್ಗೆ ನಾನು ಇನ್ನೂ ನಿರ್ಧಾರ ಮಾಡಿಲ್ಲ. ರಾಜಕಾರಣದಲ್ಲಿ ಸಾಕಷ್ಟು ಜನ ಸ್ನೇಹಿತರು ಇದ್ದಾರೆ. ಎಲ್ಲರೂ ಬಂದು ಪ್ರಚಾರ ಮಾಡುವ ಬಗ್ಗೆ ನನ್ನ ಬಳಿ ಕೇಳುತ್ತಿದ್ದಾರೆ'' - ನಟ ಯಶ್
ಬಾಡಿಗೆ ಮನೆ ರಾದ್ಧಾಂತದ ಬಗ್ಗೆ ಕಡೆಗೂ ಸತ್ಯ ಬಾಯ್ಬಿಟ್ಟ ನಟ ಯಶ್.!
ಪ್ರಚಾರ ಮಾಡಲು ಹಿಂದೆ ಮುಂದೆ ನೋಡ್ತಿರೋದು ಯಾಕೆ.?
''ನಾನು ಪ್ರಚಾರ ಮಾಡ್ತೀನಿ ಅಂದರೂ, ನಾಳೆ ಏನಾದರೂ ಹೆಚ್ಚು ಕಮ್ಮಿ ಆದರೆ ಜನ ನನ್ನನ್ನ ಕೇಳ್ತಾರೆ. ಆಗ ನಾನು ಏನು ಉತ್ತರ ಕೊಡಲಿ.? ಹೀಗಾಗಿ ಪ್ರಚಾರ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಒಂದ್ವೇಳೆ ಬಂದರೆ ನಾನೇ ಹೇಳುತ್ತೇನೆ'' ಅಂತಾರೆ ನಟ ಯಶ್.
'ನಾನು ಒಳ್ಳೆಯವನಲ್ಲ, ನನ್ನನ್ನ ಒಳ್ಳೆಯವನು ಅಂತ ಅಂದುಕೊಳ್ಳಬೇಡಿ' ಎಂದ ಯಶ್.!
ಅಭ್ಯರ್ಥಿಗಳಿಗೆ ಯಶ್ ಹಾಕುವ ಕಂಡೀಷನ್ ಏನು.?
''ಬೆಂಗಳೂರಲ್ಲಿ ಐದು ಲಕ್ಷ ಮರಗಳನ್ನು ನೆಡಬೇಕು ಅಂತಿದ್ದೀನಿ. ಇದಕ್ಕೆ ಯಾರ್ಯಾರು ಸಹಾಯ ಮಾಡುತ್ತಾರೋ, ಅವರ ಪರ ನಾನು ಪ್ರಚಾರ ಮಾಡುತ್ತೇನೆ. ಜನರಿಗೆ ಒಳ್ಳೆಯದ್ದು ಆಗುತ್ತೆ ಅಂದ್ರೆ ಖಂಡಿತ ನಾನು ಸಹಾಯ ಮಾಡುತ್ತೇನೆ'' ಎಂದಿದ್ದಾರೆ ನಟ ಯಶ್.
ಯಾರ್ರೀ ಹೇಳಿದ್ದು 'ಆ' ಮನೆ ಲಕ್ಕಿ ಅಂತ? ಅಷ್ಟು 'ವೀಕ್' ವ್ಯಕ್ತಿ ನಾನಲ್ಲ ಎಂದ ಯಶ್!
ರಾಜಕೀಯದಲ್ಲಿ ಆಸಕ್ತಿ ಇಲ್ಲ.!
ಸಮಾಜಮುಖಿ ಕೆಲಸಗಳಲ್ಲಿ ತೊಡಗಿರುವ ನಟ ಯಶ್ ಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ''ನನಗೆ ರಾಜಕೀಯ ಬೇಡ. ನಾನು ಎಂ.ಎಲ್.ಎ ಆಗಬೇಕು ಅಂತೇನಿಲ್ಲ'' ಎಂದು ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಯಶ್ ತಿಳಿಸಿದ್ದಾರೆ.