Don't Miss!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ.. ವೇಸ್ಟ್ ಪ್ರಶ್ನೆಗೆ ಉತ್ತರ ಕೊಡಲ್ಲ ಎಂದ ಶ್ರುತಿ ಹರಿಹರನ್.!
Recommended Video
''ಒಂದು ಹೆಣ್ಣಿಗೆ ತಪ್ಪಾದರೆ, ಅವಳೇ ತಪ್ಪಿತಸ್ಥಳಾಗುತ್ತಾಳೆ. ಅಷ್ಟು ಕೆಳಗೆ ಸಮಾಜ ಬಂದಿದೆ'' - ಇದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಪಕ್ಕದಲ್ಲಿ ಕುಳಿತು ನಟಿ ಶ್ರುತಿ ಹರಿಹರನ್ ಆಡಿದ ಮಾತು.
''ನಾನು ತಪ್ಪು ಮಾಡಿಲ್ಲ. ಕ್ಷಮೆ ಕೇಳಲ್ಲ'' ಅಂತ ಕಡ್ಡಿ ತುಂಡು ಮಾಡಿದ ಹಾಗೆ ಶ್ರುತಿ ಹರಿಹರನ್ ಹೇಳಿದ ಕಾರಣಕ್ಕೆ ಇಂದು ಫಿಲ್ಮ್ ಚೇಂಬರ್ ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲಗೊಂಡಿದೆ. ಇನ್ನೂ 'ಕಾಂಪ್ರೊಮೈಸ್ ಬಗ್ಗೆ ಮಾತೇ ಇಲ್ಲ' ಅಂತ ಅರ್ಜುನ್ ಸರ್ಜಾ ಕೂಡ ಹೇಳಿದ್ದಾರೆ.
ಈ ನಡುವೆ, ''ವಾಣಿಜ್ಯ ಮಂಡಳಿ ಬಗ್ಗೆ ಅಪಾರ ಗೌರವ ಇದೆ. ಅಂಬರೀಶ್ ನಾಳೆ ಬೆಳಗ್ಗೆ ಯಾವ ನಿರ್ಧಾರ ಕೈಗೊಳ್ತಾರೋ, ಅದಕ್ಕೆ ಬದ್ಧ'' ಅಂತ ಶ್ರುತಿ ಹರಿಹರನ್ ಹೇಳಿದ್ದಾರೆ. ''ಫಿಲ್ಮ್ ಚೇಂಬರ್ ಬಗ್ಗೆ ಗೌರವ ಇದ್ದಿದ್ದರೆ, ಮೊದಲು ಅಲ್ಲೇ ಬಂದು ಅರ್ಜುನ್ ಸರ್ಜಾ ವಿರುದ್ಧ ದೂರು ಕೊಡಬೇಕಿತ್ತು. ಸೋಷಿಯಲ್ ಮೀಡಿಯಾ, ಮೀಡಿಯಾ ಮುಂದೆ ಬಂದಿದ್ಯಾಕೆ?'' ಅಂತ ಪತ್ರಕರ್ತರು ಪ್ರಶ್ನೆ ಮಾಡಿದ್ದಕ್ಕೆ, ''ಇದು ವೇಸ್ಟ್ ಪ್ರಶ್ನೆ. ಅದಕ್ಕೆ ಉತ್ತರ ಕೊಡಲ್ಲ'' ಅಂತ ಎದ್ದು ಹೊರಟರು ಶ್ರುತಿ ಹರಿಹರನ್.
ಹಾಗಾದ್ರೆ, ಸಭೆ ಬಳಿಕ ಶ್ರುತಿ ಹರಿಹರನ್ ಹೇಳಿದ ಮಾತೇನು.? ನೀವೇ ಓದಿರಿ ಫೋಟೋ ಸ್ಲೈಡ್ ಗಳಲ್ಲಿ....
ಸಮಾಜ ಕೆಳಗೆ ಬಂದಿದೆ
''ನಮ್ಮ ಸಮಾಜ ಇವತ್ತು ಹೇಗಾಗಿದೆ ಅಂದ್ರೆ, ಹೆಣ್ಣಿಗೆ ಯಾವುದಾದರೂ ತಪ್ಪಾದರೆ, ಅವಳೇ ತಪ್ಪಾಗುತ್ತಾಳೆ. ಅಷ್ಟು ಕೆಳಗೆ ಬಂದಿದೆ ನಮ್ಮ ಸಮಾಜ. ಎರಡು ದಿನ ಮುಂಚೆ ಕವಿತಾ ಲಂಕೇಶ್ ಹಾಗೂ ಮುನಿರತ್ನ ಫೋನ್ ಮಾಡಿ ಫಿಲ್ಮ್ ಚೇಂಬರ್ ನಲ್ಲಿ ಮೀಟೀಂಗ್ ಅರೇಂಜ್ ಮಾಡುತ್ತಿದ್ದೇವೆ ಅಂತ ಹೇಳಿದರು. ಅದಕ್ಕೆ ಇವತ್ತು ಬಂದೆ'' - ಶ್ರುತಿ ಹರಿಹರನ್, ನಟಿ
ಅರ್ಜುನ್ ಸರ್ಜಾ-ಶ್ರುತಿ ಹರಿಹರನ್ ಸಂಧಾನ ವಿಫಲ: ಅಂಬಿ ಪ್ರಯತ್ನ ಫೇಲ್.!
ಅಂಬರೀಶ್ ನಿರ್ಧಾರಕ್ಕೆ ಕಾಯುವೆ
''ಅರ್ಜುನ್ ಸರ್ಜಾ ಲೀಗಲ್ ಆಗಿ ಹೋಗುವವರೆಗೂ ನಾನು ಹೋಗಲ್ಲ ಅಂತ ಹೇಳಿದ್ದೆ. ಹೀಗಾಗಿ ನಾನು ದೂರು ಕೊಡಲಿಲ್ಲ. ಯಾಕಂದ್ರೆ, ನಾನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಗೌರವ ಕೊಡುವೆ. ನಾಳೆ ಬೆಳಗ್ಗೆ ಹೊತ್ತಿಗೆ ಅಂಬರೀಶ್ ಹೇಳ್ತಾರೆ ನಿರ್ಧಾರ ಏನು ಅಂತ... ಅದಕ್ಕಾಗಿ ನಾನು ಕಾಯುವೆ'' - ಶ್ರುತಿ ಹರಿಹರನ್, ನಟಿ
ಸಂಧಾನದ ಮಾತೇ ಇಲ್ಲ, ಮನಸ್ಸಿನ ನೋವು ತೋಡಿಕೊಂಡ ಸರ್ಜಾ
ಆಶ್ಚರ್ಯ ಆಗಿದೆ
''ಅರ್ಜುನ್ ಸರ್ಜಾ ಅವರು ನನ್ನ ವಿರುದ್ಧ ಎರಡು ಕೇಸ್ ಹಾಕಿದ್ದಾರೆ ಎಂಬ ಸುದ್ದಿ ಬಂತು. ನನಗೆ ಆಶ್ಚರ್ಯ ಆಗಿದೆ. I'm glad that he wants to fight it in court. ಆದರೂ, ಫಿಲ್ಮ್ ಚೇಂಬರ್ ಗೆ ಗೌರವ ಕೊಟ್ಟು ನಾಳೆ ಬೆಳಗ್ಗೆವರೆಗೂ ಕಾಯುವೆ'' - ಶ್ರುತಿ ಹರಿಹರನ್, ನಟಿ
ಕ್ಷಮೆ ಕೇಳಲ್ಲ
''ಖಂಡಿತ ನಾನು ತಪ್ಪು ಮಾಡಿಲ್ಲ. ಕ್ಷಮೆ ಕೇಳಲ್ಲ. ಯಾಕೆ ಒಂದು ಹೆಣ್ಣನ್ನ ನಾವು ಈ ರೀತಿ ಟ್ರೀಟ್ ಮಾಡ್ತೀವಿ.? ನನಗೆ ಪ್ರಾಬ್ಲಂ ಆಗಿದೆ. ನಾನು ಯಾಕೆ ಕ್ಷಮೆ ಕೇಳಬೇಕು.?'' - ಶ್ರುತಿ ಹರಿಹರನ್, ನಟಿ