Don't Miss!
- News ಕುಡುಕರಿಗೆ ಎಣ್ಣೆ ಸಿಗುತ್ತಿಲ್ಲ, ಪರದಾಟ ನೋಡಲು ಆಗುತ್ತಿಲ್ಲ!
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಂಡ ಕಂಡವರಿಗೆ ಹೊಡೆಯಲ್ಲ ಸಲಾಮು: ರಾಜಕೀಯದ ಬಗ್ಗೆ ದರ್ಶನ್ ಖಡಕ್ ಜವಾಬು.!
''ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜಕೀಯಕ್ಕೆ ಧುಮುಕಲಿದ್ದಾರೆ'' ಎಂಬ ಗುಸು ಗುಸು ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ಕರ್ನಾಟಕದ ಮೂಲೆ ಮೂಲೆಯಲ್ಲೂ ಕೇಳಿ ಬಂದಿತ್ತು. ದರ್ಶನ್ ರವರಿಗೆ ಕಾಂಗ್ರೆಸ್ ಪಕ್ಷ ಗಾಳ ಹಾಕುತ್ತಿದೆ ಅಂತಲೂ ಗುಲ್ಲೆದ್ದಿತ್ತು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಇಂಥ ಗಾಸಿಪ್ ಗಳೂ ಕೇಳಿ ಬರ್ತಿವೆ.!
ಅಂದು ಈ 'ರಾಜಕೀಯ'ದ ಸುದ್ದಿ ಬಗ್ಗೆ ತುಟಿ ಎರಡು ಮಾಡದ ನಟ ದರ್ಶನ್ ಇಂದು ಮೌನ ಮುರಿದಿದ್ದಾರೆ. ''ರಾಜಕೀಯಕ್ಕೂ ನನಗೂ ಆಗ್ಬರಲ್ಲ. ಕಂಡ ಕಂಡವರಿಗೆ ಸಲಾಮು ಹೊಡೆಯುವ ಸಂಸ್ಕೃತಿ ನನ್ನದಲ್ಲ'' ಎಂದು 'ಕನ್ನಡ ಪ್ರಭ'ಕ್ಕೆ ನೀಡಿದ ಸಂದರ್ಶನದಲ್ಲಿ ದರ್ಶನ್ ಖಡಕ್ ಜವಾಬು ನೀಡಿದ್ದಾರೆ. ಮುಂದೆ ಓದಿರಿ....
ರಾಜಕೀಯಕ್ಕೆ ದರ್ಶನ್ ಬರಲ್ಲ.!
''ನನ್ನ ರಾಜಕೀಯ ಎಂಟ್ರಿ ಬಗ್ಗೆ ಹಬ್ಬಿರುವ ಸುದ್ದಿ ಸುಳ್ಳು'' ಎನ್ನುವ ಮೂಲಕ ಇಲ್ಲಿಯವರೆಗೂ ಹಬ್ಬಿದ್ದ ಎಲ್ಲ ಊಹಾಪೋಹಗಳಿಗೆ ನಟ ದರ್ಶನ್ ಪೂರ್ಣ ವಿರಾಮ ಇಟ್ಟಿದ್ದಾರೆ.
ಮಾಧ್ಯಮದವರು 'ರಾಜಕೀಯ'ದ ಪ್ರಶ್ನೆ ಕೇಳುವ ಮುನ್ನವೇ ಹೊರಟು ಹೋದ ದರ್ಶನ್
ಸಲಾಮು ಹೊಡೆಯುವ ಜಾಯಮಾನ ನನ್ನದಲ್ಲ.!
''ಕಂಡ ಕಂಡವರಿಗೆ ಸಲಾಮು ಹೊಡೆಯುವ ಜಾಯಮಾನ ನನ್ನದಲ್ಲ. ಸಲಾಮು ಸಂಸ್ಕೃತಿ ಇರುವ ರಾಜಕಾರಣಕ್ಕೂ ನನಗೂ ಆಗ್ಬರಲ್ಲ. ರಾಜಕೀಯಕ್ಕೆ ಸೇರುವ ಆಸಕ್ತಿ ನನಗಿಲ್ಲ'' ಎಂದಿದ್ದಾರೆ ನಟ ದರ್ಶನ್.
ದರ್ಶನ್ ಆಯ್ತು, ಈಗ ಸುದೀಪ್ ಅಂತೆ, ಇದು ನಿಜವಾದ ರಾಜಕೀಯ.!
ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ
''ನಾನು ಸಿನಿಮಾ ನಟ. ನನಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ನನಗೆ ರಾಜಕೀಯ ಗೊತ್ತಿಲ್ಲ'' - ನಟ ದರ್ಶನ್
ರಾಜಕೀಯಕ್ಕೆ ಬರ್ತಾರಾ ದರ್ಶನ್: ತಾಯಿ ಮೀನಾ ತೂಗುದೀಪ ಹೇಳಿದ್ದೇನು.?
ನಮಗೆ ಯಾಕೆ ಬೇಕು.?
''ವೋಟು ಹಾಕಿದ ಜನ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ರಾಜಕಾರಣ ಅಂದ ಮೇಲೆ ಅದೆಲ್ಲವೂ ಇರುತ್ತೆ. ನಮಗೆ ಅದು ಯಾಕೆ ಬೇಕು.? ಅಂತಹ ವಾತಾವರಣ ನನಗೆ ಆಗ್ಬರಲ್ಲ'' ಎಂದು 'ಕನ್ನಡ ಪ್ರಭ' ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನಟ ದರ್ಶನ್ ತಿಳಿಸಿದ್ದಾರೆ.