Don't Miss!
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಡ್ಯದಲ್ಲಿ ಸುಮಲತಾ ಗೆದ್ದರೇ ಜೋಡೆತ್ತುಗಳಿಗಾಗುವ ಅನುಕೂಲವೇನು?
Recommended Video
ಮಂಡ್ಯ ಚುನಾವಣೆ ಮುಗಿದಿದೆ. ಉಳಿದ ಕ್ಷೇತ್ರಗಳಿಗಿಂತ ಮಂಡ್ಯ ಕ್ಷೇತ್ರ ತುಂಬಾ ಸದ್ದು ಮಾಡಿತ್ತು. ಯಾಕಂದ್ರೆ, ಇಲ್ಲಿ ಸಿಎಂ ಕುಮಾರಸ್ವಾಮಿ ಕುಟುಂಬ ವರ್ಸಸ್ ಅಂಬರೀಶ್ ಕುಟುಂಬ ಎನ್ನುವಂತಾಗಿತ್ತು. ನಿಖಿಲ್ ಪರವಾಗಿ ಇಡೀ ಸರ್ಕಾರವೇ ಪ್ರಚಾರ ಮಾಡಿದ್ರೆ, ಸುಮಲತಾ ಪರವಾಗಿ ಜೋಡೆತ್ತುಗಳಾಗಿ ನಟ ದರ್ಶನ್ ಮತ್ತು ಯಶ್ ಪ್ರಚಾರ ಮಾಡಿದ್ದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಡ್ಯದಲ್ಲಿ ಟೀಕೆ, ಟಿಪ್ಪಣಿಗಳು, ಆರೋಪ, ಪ್ರತ್ಯಾರೋಪಗಳು, ಅವಮಾನ, ಅಪವಾದಗಳು ಎಲ್ಲವನ್ನ ಜೋಡೆತ್ತುಗಳು ನೋಡಬೇಕಾಯಿತು. ಸಿನಿಮಾ ಬೇರೆ ರಾಜಕೀಯ ಬೇರೆ ಎನ್ನುತ್ತಿದ್ದ ದರ್ಶನ್ ಮತ್ತು ಯಶ್, ಅದೇ ಏನೇ ಆಗಲಿ ಒಂದು ಕೈ ನೋಡಿಬಿಡೋಣ ಅಂತ ಪಣ ತೊಟ್ಟು ಅಖಾಡಕ್ಕೆ ಇಳಿದಿದ್ದರು.
ಎಚ್ಡಿಕೆಯನ್ನು ಎದುರಾಕಿಕೊಂಡ 'ಜೋಡೆತ್ತು'ಗಳ ಧೈರ್ಯ ಮೆಚ್ಚಲೇಬೇಕು: ಏನಂತೀರಾ?
ಇಷ್ಟೆಲ್ಲಾ ಆದ್ಮೇಲೆ ಈಗ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಫಲಿತಾಂಶದ ನಂತರ ಎದುರಾಳಿಗಳಿಗೆ ಉತ್ತರ ಕೊಡ್ತೇವೆ ಎಂದು ಪರಸ್ಪರ ಅಭ್ಯರ್ಥಿಗಳು ಸನ್ನದ್ದರಾಗಿದ್ದಾರೆ. ಒಂದು ವೇಳೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಗೆದ್ದರೇ, ಜೋಡೆತ್ತುಗಳಿಗೆ ಆಗುವ ಅನುಕೂಲವೇನು? ಈ ಬಗ್ಗೆ ತಿಳಿಯಲು ಮುಂದೆ ಓದಿ....
ದರ್ಶನ್ ಪ್ರಚಾರ ಮಾಡಿದ್ರೆ ಗೆಲ್ಲಲ್ಲ ಅಂದವರಿಗೆ ಉತ್ತರ
ನಟ ದರ್ಶನ್ ಪ್ರಚಾರ ಮಾಡಿದ್ರೆ ಜನರು ಸೇರಬಹುದು ಆದ್ರೆ ವೋಟ್ ಆಗಿ ಬರಲ್ಲ ಎಂದು ಕೆಲವರು ಟೀಕೆ ಮಾಡಿದ್ದರು. ಈ ಹಿಂದೆ ಸಿದ್ದರಾಮಯ್ಯ ಅವರಿಗೂ ದರ್ಶನ್ ಪ್ರಚಾರ ಮಾಡಿದ್ರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸೋತ್ತಿದ್ದರು. ಈ ಅಪಖ್ಯಾತಿಯಿಂದ ದರ್ಶನ್ ಹೊರಬರಬಹುದು. ನಾನು ಪ್ರಚಾರ ಮಾಡಿದ ಸುಮಲತಾ ಗೆದ್ದಿದ್ದಾರೆ ಎಂದು ಕಾಲರ್ ಎತ್ತಬಹುದು.
ದರ್ಶನ್-ಯಶ್-ಅಂಬರೀಶ್ ಅಭಿಮಾನಿಗಳಿಗೆ ಕೃತಜ್ಞತೆ ಹೇಳಿದ ಸುಮಲತಾ
ಅಂಬರೀಶ್ ಗೆ ಪರ್ಯಾಯ ನಟರು
ಅಂಬರೀಶ್ ಅಂದ್ರೆ ಮಂಡ್ಯದ ಗಂಡು ಅಂತಾನೆ ಖ್ಯಾತಿ. ಈಗ ಅಂಬರೀಶ್ ಇಲ್ಲ. ಅವರ ಬಳಿಕ ಮಂಡ್ಯ ಪಾಲಿಗೆ ಯಾರು ರಿಯಲ್ ಹೀರೋ ಆಗಬಹುದು ಎಂಬ ಲೆಕ್ಕಾಚಾರವೂ ಇದೆ. ಬಹುಶಃ ಸುಮಲತಾ ಗೆದ್ದರೇ ಮಂಡ್ಯದಲ್ಲಿ ಅಂಬರೀಶ್ ಪರ್ಯಾಯವಾಗಿ ದರ್ಶನ್ ಮತ್ತು ಯಶ್ ನಿಲ್ಲಬಹುದು. ಇನ್ನು ಅಂಬರೀಶ್ ಅಭಿಮಾನಿಗಳ ಒಲವು ಕೂಡ ಈ ಇಬ್ಬರ ಮೇಲೆ ಹೆಚ್ಚಾಗುವ ಸಾಧ್ಯತೆ ಇದೆ.
ಈ ಕಾರಣಕ್ಕಾಗಿ ಮಂಡ್ಯದಲ್ಲಿ ಸುಮಲತಾ ಗೆಲ್ಲಬೇಕಂತೆ: ದರ್ಶನ್ ಪತ್ನಿ ಟ್ವೀಟ್
ಯಶ್-ದರ್ಶನ್ ರಾಜಕೀಯ ಭವಿಷ್ಯಕ್ಕೆ ಮಂಡ್ಯ ವೇದಿಕೆ
ಒಂದು ವೇಳೆ ನಟ ದರ್ಶನ್ ಅಥವಾ ಯಶ್ ಯಾರೇ ರಾಜಕೀಯಕ್ಕೆ ಬರಬೇಕು ಎಂದು ನಿರ್ಧರಿಸಿದರೇ, ಅವರಿಗೆ ಮಂಡ್ಯ ಉತ್ತಮ ವೇದಿಕೆ ಮಾಡಿಕೊಳ್ಳಬಹುದು. ಮಂಡ್ಯದಲ್ಲಿ ಈಗಾಗಲೇ ದೊಡ್ಡ ಮಟ್ಟದ ಅಭಿಮಾನಿಗಳನ್ನ ಸಂಪಾದಿಸಿರುವ ಜೋಡೆತ್ತುಗಳು, ಸುಮಲತಾ ಗೆಲ್ಲುವುದರಿಂದ ಮತ್ತಷ್ಟು ಬಲ ಹೆಚ್ಚಿಸಿಕೊಳ್ಳಬಹುದು. ರಾಜಕೀಯವಾಗಿ ಹಿಡಿತವನ್ನ ಸಾಧಿಸಬಹುದು.
ಯಶ್-ದರ್ಶನ್-ಸುಮಲತಾ ಕೌಂಟರ್ ಗೆ ಟ್ವಿಟ್ಟರ್ ನಲ್ಲಿ ಟಾಂಗ್ ನೀಡಿದ ಸಿಎಂ
ದರ್ಶನ್-ಯಶ್ ನಡುವಿನ ಸಂಬಂಧ ಗಟ್ಟಿ
ಇಷ್ಟು ದಿನ ದರ್ಶನ್ ಮತ್ತು ಯಶ್ ನಡುವಿನ ಸಂಬಂಧ ಅಷ್ಟಕಷ್ಟೇ. ಆದ್ರೆ, ಸುಮಲತಾ ಪರ ಪ್ರಚಾರಕ್ಕೆ ನಿಂತ ಬಳಿಕ ಇಬ್ಬರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಒಂದು ವೇಳೆ ಸುಮಲತಾಗೆ ಗೆಲುವು ಸಿಕ್ಕರೇ ಈ ಬಾಂಧವ್ಯ ಇನ್ನೂ ಬಲವಾಗುತ್ತೆ. ಮುಂದಿನ ದಿನದಲ್ಲಿ ಆಪ್ತಮಿತ್ರರಂತೆ ಇಂಡಸ್ಟ್ರಿ ಆಳಬಹುದು.
'ಮಂಡ್ಯ ಅಲ್ಲ, ಕರ್ನಾಟಕ ಬಿಟ್ಟು ಹೋಗ್ತೀನಿ': ಸಿಎಂಗೆ ಯಶ್ ಸವಾಲ್
ಸಿಎಂ ಕುಟುಂಬವನ್ನ ಸೋಲಿಸಿದ ಖ್ಯಾತಿ
ದರ್ಶನ್ ಮತ್ತು ಯಶ್ ನಡುವೆ ಸಂಬಂಧ ಸರಿಯಿಲ್ಲ ಎಂದು ಬಿಂಬಿತವಾಗಿದೆ. ಅದರಿಂದ ಇಬ್ಬರ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡಿರುವ ಉದಾಹರಣೆಗಳಿವೆ. ಬಹುಶಃ ಮಂಡ್ಯದಲ್ಲಿ ಸುಮಲತಾ ಗೆಲವು, ಇಂಡಸ್ಟ್ರಿ ಮೇಲೂ ಪರಿಣಾಮ ಬೀರಬಹುದು. ಇಷ್ಟು ದಿನ ಇದ್ದ ಅಬ್ಬರಕ್ಕಿಂತ ಮುಂದಿನ ದಿನದಲ್ಲಿ ಈ ಹವಾ ಹೆಚ್ಚಾಗಬಹುದು. ಸಿಎಂ ಕುಟುಂಬವನ್ನ ಎದುರು ಹಾಕಿಕೊಂಡು ಗೆದ್ದು ಬಂದಿದ್ದೇವೆ ಎಂಬ ಬ್ಯಾಡ್ಜ್ ಸಿಗುತ್ತೆ.
''150 ಕೋಟಿ ಯಾರಪ್ಪನ ಮನೆ ದುಡ್ಡು'' - ಗುಡುಗಿದ ಗಜ